ETV Bharat / state

ನಾಗಮಂಗಲದಲ್ಲಿ ಕೆರೆ ಹಬ್ಬ ಆಚರಣೆ ಮಾಡಿದ ರೈತರು...

ನಾಗಮಂಗಲ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿರುವುದರಿಂದ ಗ್ರಾಮಸ್ಥರು ಹಾಗೂ ಸ್ಥಳೀಯ ಶಾಸಕರು ಸೇರಿ ಕೆರೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

author img

By

Published : Nov 2, 2019, 11:10 PM IST

ಕೆರೆ ಹಬ್ಬ

ಮಂಡ್ಯ: ಜಿಲ್ಲೆಯ ಬರಪೀಡಿತ ತಾಲೂಕು ನಾಗಮಂಗಲದಲ್ಲಿ ಬಹುತೇಕ ಕೆರೆಗಳು ನೀರು ಕಂಡು 16 ವರ್ಷಗಳೇ ಕಳೆದು ಹೋಗಿತ್ತು. ಈ ಬಾರಿ ಸುರಿಯುತ್ತಿರುವ ಮಳೆ ಕೆರೆಗಳ ನೀರಿನ ಬರವನ್ನು ನೀಗಿಸಿದೆ. ಹೀಗಾಗಿ ಸ್ಥಳೀಯ ಶಾಸಕರು ಸೇರಿದಂತೆ ತಾಲೂಕಿನ ಜನತೆ ಕೆರೆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.

ಕೆರೆ ಹಬ್ಬ ಆಚರಿಸಿದ ಗ್ರಾಮಸ್ಥರು

ನಾಗಮಂಗಲ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿರುವುದರಿಂದ ಪಟ್ಟಣದಲ್ಲಿ ಆಂಜನೇಯ, ದೊಡ್ಡತಾಯಮ್ಮ ಹಾಗೂ ಅಯ್ಯಪ್ಪ ಮೂರ್ತಿಯ ವಿಗ್ರಹಗಳ ಮೆರವಣಿಗೆ ಮಾಡಿ ನಂತರ ಪಟ್ಟಣದ ಹಿರಿ ಕೆರೆಯಲ್ಲಿ ತೆಪ್ಪೋತ್ಸವವವನ್ನು ಮಾಡಿ, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಕೆರೆ ಹಬ್ಬದಲ್ಲಿ ಶಾಸಕ ಸುರೇಶ್ ಗೌಡ, ತಹಶೀಲ್ದಾರ್ ರೂಪ ಸೇರಿದಂತೆ ಹಲವರು ಪಾಲ್ಗೊಂಡು, ಸಾಮಾನ್ಯ ಜನರ ನಡುವೆ ಕುಳಿತು ಕೆರೆ ಹಬ್ಬವನ್ನು ವೀಕ್ಷಿಸಿದ್ದಾರೆ.

ಈ ವರ್ಷದ ಮಳೆ ಇಲ್ಲಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಕೆರೆಗಳು ತುಂಬಿರೋದ್ರಿಂದ ಅಂತರ್ಜಲ ತುಂಬಿ ಬೆಳೆ ಸಮರ್ಪಕವಾಗಿ ಬೆಳೆಯಬಹುದು ಎಂಬ ಸಂತೋಷದಲ್ಲಿದ್ದಾರೆ. ನಾಗಮಂಗಲದಲ್ಲಿ ಸಾವಿರಾರು ಜನ ಹಬ್ಬದ ರೀತಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸಿ, ಹಬ್ಬದ ಊಟವನ್ನು ಸವಿದಿದ್ದಾರೆ.

ಮಂಡ್ಯ: ಜಿಲ್ಲೆಯ ಬರಪೀಡಿತ ತಾಲೂಕು ನಾಗಮಂಗಲದಲ್ಲಿ ಬಹುತೇಕ ಕೆರೆಗಳು ನೀರು ಕಂಡು 16 ವರ್ಷಗಳೇ ಕಳೆದು ಹೋಗಿತ್ತು. ಈ ಬಾರಿ ಸುರಿಯುತ್ತಿರುವ ಮಳೆ ಕೆರೆಗಳ ನೀರಿನ ಬರವನ್ನು ನೀಗಿಸಿದೆ. ಹೀಗಾಗಿ ಸ್ಥಳೀಯ ಶಾಸಕರು ಸೇರಿದಂತೆ ತಾಲೂಕಿನ ಜನತೆ ಕೆರೆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.

ಕೆರೆ ಹಬ್ಬ ಆಚರಿಸಿದ ಗ್ರಾಮಸ್ಥರು

ನಾಗಮಂಗಲ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿರುವುದರಿಂದ ಪಟ್ಟಣದಲ್ಲಿ ಆಂಜನೇಯ, ದೊಡ್ಡತಾಯಮ್ಮ ಹಾಗೂ ಅಯ್ಯಪ್ಪ ಮೂರ್ತಿಯ ವಿಗ್ರಹಗಳ ಮೆರವಣಿಗೆ ಮಾಡಿ ನಂತರ ಪಟ್ಟಣದ ಹಿರಿ ಕೆರೆಯಲ್ಲಿ ತೆಪ್ಪೋತ್ಸವವವನ್ನು ಮಾಡಿ, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಕೆರೆ ಹಬ್ಬದಲ್ಲಿ ಶಾಸಕ ಸುರೇಶ್ ಗೌಡ, ತಹಶೀಲ್ದಾರ್ ರೂಪ ಸೇರಿದಂತೆ ಹಲವರು ಪಾಲ್ಗೊಂಡು, ಸಾಮಾನ್ಯ ಜನರ ನಡುವೆ ಕುಳಿತು ಕೆರೆ ಹಬ್ಬವನ್ನು ವೀಕ್ಷಿಸಿದ್ದಾರೆ.

ಈ ವರ್ಷದ ಮಳೆ ಇಲ್ಲಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಕೆರೆಗಳು ತುಂಬಿರೋದ್ರಿಂದ ಅಂತರ್ಜಲ ತುಂಬಿ ಬೆಳೆ ಸಮರ್ಪಕವಾಗಿ ಬೆಳೆಯಬಹುದು ಎಂಬ ಸಂತೋಷದಲ್ಲಿದ್ದಾರೆ. ನಾಗಮಂಗಲದಲ್ಲಿ ಸಾವಿರಾರು ಜನ ಹಬ್ಬದ ರೀತಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸಿ, ಹಬ್ಬದ ಊಟವನ್ನು ಸವಿದಿದ್ದಾರೆ.

Intro:ಮಂಡ್ಯ: ಜಿಲ್ಲೆಯ ಬರಪೀಡಿತ ತಾಲ್ಲೂಕು ನಾಗಮಂಗಲ. ಈ ತಾಲ್ಲೂಕಿನ ಬಹುತೇಕ ಕೆರೆಗಳು ನೀರು ಕಂಡು 16 ವರ್ಷಗಳೇ ಕಳೆದು ಹೋಗಿತ್ತು. ಈ ಬಾರಿ ಸುರಿಯುತ್ತಿರುವ ಮಳೆ ಕೆರೆಗಳ ನೀರಿನ ಬರವನ್ನು ನೀಗಿಸಿದೆ ಹೀಗಾಗಿ ಸ್ಥಳೀಯ ಶಾಸಕರು ಸೇರಿದಂತೆ ತಾಲ್ಲೂಕಿನ ಜನತೆ ಕೆರೆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು. ಕೆರೆ ಹಬ್ಬದ ಝಲಕ್ ಇಲ್ಲಿದೆ ನೋಡಿ.

ಕಳೆದ 16 ವರ್ಷಗಳಿಂದ ನಾಗಮಂಗಲ ತಾಲ್ಲೂಕಿನ ಬಹುತೇಕ ಕೆರೆಗಳು ಖಾಲಿ ಖಾಲಿ. ಈ ಬಾರಿ ಮಳೆ ಕೆರೆಗಳ ಬರವನ್ನು ನೀಗಿಸಿದೆ. ಜನರಲ್ಲಿ ಹೊಸ ಆಸೆಯನ್ನು ಹುಟ್ಟಿಸಿದೆ. ಎಲ್ಲಾ ಕರೆಗಳು ಬಹುತೇಕ ಭರ್ತಿಯಾಗಿವೆ. ಹೀಗಾಗಿ ಸ್ಥಳೀಯ ಶಾಸಕ ಸುರೇಶ್ ಗೌಡ ಹಾಗೂ ಜನತೆ ಕೆರೆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು. ನಾಗಮಂಗಲ ಪಟ್ಟಣದ ಆಂಜನೇಯ, ದೊಡ್ಡತಾಯಮ್ಮ ಹಾಗೂ ಅಯ್ಯಪ್ಪ ಮೂರ್ತಿಯ ವಿಗ್ರಹಗಳ ಮೆರವಣಿಗೆ ಮಾಡಿ ನಂತರ ಪಟ್ಟಣದ ಹಿರಿ ಕೆರಯಲ್ಲಿ ತೆಪ್ಪೋತ್ಸವವವನ್ನು ಮಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪ್ಲೋ….

ಶಾಸಕ ಸುರೇಶ್ ಗೌಡ, ತಹಶೀಲ್ದಾರ್ ರೂಪ ಸೇರಿದಂತೆ ಹಲವರು ಹಬ್ಬದಲ್ಲಿ ಪಾಲ್ಗೊಂಡಿದ್ದರು. ಸಾಮಾನ್ಯ ಜನರ ನಡುವೆ ಕುಳಿತು ಕೆರೆ ಹಬ್ಬವನ್ನು ವೀಕ್ಷಣೆ ಮಾಡಿದರು. ಈ ವರ್ಷದ ಮಳೆ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಕೆರೆಗಳು ತುಂಬಿರೋದರಿಂದ ಅಂತರ್ಜಲ ತುಂಬಿ ಬೆಳೆ ಸಮರ್ಪಕವಾಗಿ ಬೆಳೆಯಬಹುದು ಎಂಬ ಸಂತೋಷದಲ್ಲಿದ್ದಾರೆ ರೈತರು. ಹೀಗಾಗಿ 100 ಕ್ಕೂ ಹೆಚ್ಚು ಕೆರೆಗಳು ತುಂಬಿರೋದು ಹರ್ಷ ತಂದಿದೆ.

ಪ್ಲೋ.. .

ಹಿರಿಕೆರೆಯಲ್ಲಿ ಕೆರೆ ಹಬ್ಬವನ್ನು ತೆಪ್ಪೋತ್ಸವ ಮಾಡುವ ಮೂಲಕಕ ಮನೆಹಬ್ಬದಂತೆ ನಾಗಮಂಗಲದ ಸಾವಿರಾರು ಜನ ಆಚರಣೆ ಮಾಡಿದರು. ಹಬ್ಬದ ರೀತಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸಿ, ಮನೆ-ಮನದಲ್ಲಿ ಹಬ್ಬದ ಊಟವವನ್ನೂ ಸವಿದಿದ್ದಾರೆ.
Body:ಯತೀಶ್ ಬಾಬು, ಈಟಿವಿ ಭಾರತ್ ಮಂಡ್ಯ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.