ETV Bharat / state

ಕೈ ತುಂಬಾ ಸಾಲ: ಪುಟ್ಟ ಕಂದಮ್ಮಗಳನ್ನು ಬಿಟ್ಟು ನೇಣಿಗೆ ಕೊರಳೊಡ್ಡಿದ ರೈತ

author img

By

Published : Jun 21, 2019, 11:06 PM IST

Updated : Jun 21, 2019, 11:13 PM IST

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಆತ್ಮಹತ್ಯೆಗೆ ಶರಣಾದ ರೈತ

ಮಂಡ್ಯ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ದೊಡ್ಡತ್ತಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

Farmer committed suicide
ಸಾಲಬಾಧೆ ತಾಳದೆ ಆತ್ಮಹತ್ಯೆಗೆ ಶರಣಾದ ರೈತ

ದೊಡ್ಡತ್ತಾರಹಳ್ಳಿ ಗ್ರಾಮದ ಮಂಜುನಾಥ್ (38) ಆತ್ಮಹತ್ಯೆಗೆ ಶರಣಾದ ರೈತ. ತನ್ನ ಜಮೀನಿನ ಬಳಿಯ ಗುಡಿಸಲಿನಲ್ಲಿ ಇವರು ನೇಣು ಹಾಕಿಕೊಂಡಿದ್ದಾರೆ.

ವ್ಯವಸಾಯ ಮಾಡಲು ಮಹಿಳಾ ಸಂಘದಲ್ಲಿ ಸಾಲ, ಕೈ ಸಾಲ ಸೇರಿ ಒಟ್ಟು 1 ಲಕ್ಷ ರೂ, ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ 50 ಸಾವಿರ ರೂಪಾಯಿ ಜೊತೆಗೆ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ತನ್ನ ಹೆಂಡತಿಯ ಚಿನ್ನವನ್ನು ಗಿರಿವಿ ಇಟ್ಟು 1.5 ಲಕ್ಷ ರೂಪಾಯಿ ಸಾಲ ಸೇರಿ ಸುಮಾರು 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ದೊರೆತಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಮಂಜುನಾಥ್‌ಗೆ ಮೂರು ವರ್ಷದ ಒಂದು ಗಂಡು ಮಗು ಮತ್ತು ಎರಡು ವರ್ಷದ ಒಂದು ಹೆಣ್ಣು ಮಗು ಇದೆ. ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ದೊಡ್ಡತ್ತಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

Farmer committed suicide
ಸಾಲಬಾಧೆ ತಾಳದೆ ಆತ್ಮಹತ್ಯೆಗೆ ಶರಣಾದ ರೈತ

ದೊಡ್ಡತ್ತಾರಹಳ್ಳಿ ಗ್ರಾಮದ ಮಂಜುನಾಥ್ (38) ಆತ್ಮಹತ್ಯೆಗೆ ಶರಣಾದ ರೈತ. ತನ್ನ ಜಮೀನಿನ ಬಳಿಯ ಗುಡಿಸಲಿನಲ್ಲಿ ಇವರು ನೇಣು ಹಾಕಿಕೊಂಡಿದ್ದಾರೆ.

ವ್ಯವಸಾಯ ಮಾಡಲು ಮಹಿಳಾ ಸಂಘದಲ್ಲಿ ಸಾಲ, ಕೈ ಸಾಲ ಸೇರಿ ಒಟ್ಟು 1 ಲಕ್ಷ ರೂ, ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ 50 ಸಾವಿರ ರೂಪಾಯಿ ಜೊತೆಗೆ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ತನ್ನ ಹೆಂಡತಿಯ ಚಿನ್ನವನ್ನು ಗಿರಿವಿ ಇಟ್ಟು 1.5 ಲಕ್ಷ ರೂಪಾಯಿ ಸಾಲ ಸೇರಿ ಸುಮಾರು 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ದೊರೆತಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಮಂಜುನಾಥ್‌ಗೆ ಮೂರು ವರ್ಷದ ಒಂದು ಗಂಡು ಮಗು ಮತ್ತು ಎರಡು ವರ್ಷದ ಒಂದು ಹೆಣ್ಣು ಮಗು ಇದೆ. ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಡ್ಯ: ಸಾಲಭಾದೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ದೊಡ್ಡತ್ತಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ (38) ಎಂಬಾತನೇ‌ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಜಮೀನಿನ ಬಳಿಯ ಗುಡಿಸಲಿನಲ್ಲಿ ನೇಣು ಹಾಕಿಕೊಂಡಿದ್ದಾನೆ.
ವ್ಯವಸಾಯ ಸಲುವಾಗಿ ಮಹಿಳಾ ಸಂಘ, ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ತನ್ನ ಹೆಂಡತಿಯ ಚಿನ್ನವನ್ನು ಗಿರಿವಿ ಇಟ್ಟು 1.5 ಲಕ್ಷ ರೂಪಾಯಿ ಸಾಲ, ಧರ್ಮಸ್ಥಳ ಸಂಘದಲ್ಲಿ 50 ಸಾವಿರ ರೂಯ ಹಾಗೂ ಕೈ ಸಾಲ ಒಂದು ಲಕ್ಷ ಸೇರಿ ಸುಮಾರು 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ.
ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್‌ಗೆ ಮೂರು ವರ್ಷದ ಒಂದು ಗಂಡು ಮಗು ಮತ್ತು ಎರಡು ವರ್ಷದ ಒಂದು ಹೆಣ್ಣು ಮಗು ಇದೆ.‌ ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:
Last Updated : Jun 21, 2019, 11:13 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.