ಮಂಡ್ಯ: ಆಹಾರ ಅರಸಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನ ಬೃಂದಾವನಕ್ಕೆ ಬಂದಿದ್ದ ಸುಮಾರು 10ಅಡಿ ಉದ್ದದ ಹೆಬ್ಬಾವೊಂದನ್ನು ಯುವಕರ ತಂಡ ಹಿಡಿದು ಅರಣ್ಯಕ್ಕೆ ಬಿಟ್ಟಿದೆ.
ಇಂದು ಬೆಳಗ್ಗೆ ಆಹಾರ ಅರಸಿ ಹೆಬ್ಬಾವೊಂದು ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನ ಬೃಂದಾವನಕ್ಕೆ ಬಂದಿತ್ತು. ಇದನ್ನು ಕಂಡ ಯುವಕರು ಉರಗ ತಜ್ಞ ದೀಪುರವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೀಪು ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಹಾವು ಸುಮಾರು 10 ಅಡಿ ಉದ್ದವಿದ್ದು, 30 ಕೆಜಿ ತೂಕವಿತ್ತು. ಹೆಬ್ಬಾವನ್ನು ಹಿಡಿದು ಸಂರಕ್ಷಣೆ ಮಾಡಿದ ಉರಗ ತಜ್ಞ ದೀಪು ಅವರಿಗೆ ಪ್ರವಾಸಿಗರು ಅಭಿನಂದನೆ ಸಲ್ಲಿಸಿದರು.