ETV Bharat / state

ಸಿಎಂ ನೆರವಿನಿಂದ ಬಾಲಕಿಗೆ ಮರುಜೀವ: ಕುಮಾರಸ್ವಾಮಿಗೆ ಬಡ ಕುಟುಂಬದ ಕೃತಜ್ಞತೆ

author img

By

Published : Jun 15, 2019, 3:43 PM IST

ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ಕುಮಾರ್ ಕುಟುಂಬಕ್ಕೆ ಸಿಎಂ ಸಹಾಯ ಹಸ್ತ ಚಾಚಿದ್ದಾರೆ.

ಕುಮಾರಸ್ವಾಮಿಗೆ ಮುಗ್ದತೆಯ ಕೃತಜ್ಞತೆ!

ಮಂಡ್ಯ: ಬಡ ಕುಟುಂಬದ ಬಾಲಕಿಯೊಬ್ಬಳ ಕೈ ಶಸ್ತ್ರಚಿಕಿತ್ಸೆಯ ಖರ್ಚಿಗೆ ಸಿಎಂ ಕುಮಾರಸ್ವಾಮಿ ಧನಸಹಾಯ ನೀಡಿ ಕರುಣೆ ತೋರಿದ್ದಾರೆ.

ಲೋಕಸಮರದ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಕೆಆರ್​ಎಸ್​ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಬಡ ಕುಟುಂಬ ತಮ್ಮ ಪುತ್ರಿಯ ಕೈ ಆಪರೇಷನ್​ಗಾಗಿ ಧನ ಸಹಾಯ ಕೇಳಿತ್ತು. ಕುಮಾರಸ್ವಾಮಿ ಈಗ ಬಾಲಕಿ ಕುಟುಂಬಕ್ಕೆ ಧನ ಸಹಾಯ ಮಾಡಿದ್ದು, ಆಪರೇಷನ್ ಮಾಡಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ಕುಮಾರ್ ಕುಟುಂಬಕ್ಕೆ ಸಿಎಂ ಸಹಾಯ ಹಸ್ತ ಚಾಚಿದ್ದಾರೆ. ಕೊನೆಯ ಪುತ್ರಿ ರಿಯಾಂಜಲಿಯ ಬಲಗೈ ಆಪರೇಷನ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಚುನಾವಣೆಯಲ್ಲಿ ಮಗ ನಿಖಿಲ್ ಸೋತರೂ ಬಡ ಕುಟುಂಬಕ್ಕೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಸಿಎಂ ನೆರವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.

ಚಿಕಿತ್ಸೆಗೆ ಧನ ಸಹಾಯ ಮಾಡಿ ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ

ಘಟನೆಯ ಹಿನ್ನೆಲೆ
ಹೆಚ್‌ಡಿ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಕುಮಾರ್ ಕುಟುಂಬ ಏಪ್ರಿಲ್ 10 ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ್ದ ಸಿಎಂ, ಮಾರನೆಯ ದಿನ ಕುಟುಂಬವನ್ನು ಮನೆಗೆ ಕರೆಸಿಕೊಂಡು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಿಯಾಂಜಲಿಗೆ ಒಂದು ತಿಂಗಳ ನಂತರ ಬಲಗೈ ಆಪರೇಷನ್ ನಡೆಸಲಾಗಿದೆ. ಈ ಮೂಲಕ ಆಕೆ ಮರುಜೀವ ಪಡೆದುಕೊಂಡಿದ್ದಳು.

ಹುಟ್ಟಿನಿಂದಲೇ ಬಲಗೈ ಸ್ವಾಧೀನ ಕಳೆದುಕೊಂಡಿದ್ದ ರಿಯಾಂಜಲಿಗೆ ಈಗ ಸ್ವಲ್ಪ ಮಟ್ಟಿಗೆ ಚಲನೆ ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಎಲ್ಲವನ್ನೂ ಸಿಎಂ ಭರಿಸಿದ್ದಾರೆ. ಸದ್ಯ ಬಾಲಕಿ ಆರೋಗ್ಯವಾಗಿದ್ದಾಳೆ. ಸಿಎಂ ಸಹಾಯಕ್ಕೆ ಇಡೀ ಕುಟುಂಬ ಕೃತಜ್ಞತೆ ಸಲ್ಲಿಸಿದೆ.

ಮಂಡ್ಯ: ಬಡ ಕುಟುಂಬದ ಬಾಲಕಿಯೊಬ್ಬಳ ಕೈ ಶಸ್ತ್ರಚಿಕಿತ್ಸೆಯ ಖರ್ಚಿಗೆ ಸಿಎಂ ಕುಮಾರಸ್ವಾಮಿ ಧನಸಹಾಯ ನೀಡಿ ಕರುಣೆ ತೋರಿದ್ದಾರೆ.

ಲೋಕಸಮರದ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಕೆಆರ್​ಎಸ್​ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಬಡ ಕುಟುಂಬ ತಮ್ಮ ಪುತ್ರಿಯ ಕೈ ಆಪರೇಷನ್​ಗಾಗಿ ಧನ ಸಹಾಯ ಕೇಳಿತ್ತು. ಕುಮಾರಸ್ವಾಮಿ ಈಗ ಬಾಲಕಿ ಕುಟುಂಬಕ್ಕೆ ಧನ ಸಹಾಯ ಮಾಡಿದ್ದು, ಆಪರೇಷನ್ ಮಾಡಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ಕುಮಾರ್ ಕುಟುಂಬಕ್ಕೆ ಸಿಎಂ ಸಹಾಯ ಹಸ್ತ ಚಾಚಿದ್ದಾರೆ. ಕೊನೆಯ ಪುತ್ರಿ ರಿಯಾಂಜಲಿಯ ಬಲಗೈ ಆಪರೇಷನ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಚುನಾವಣೆಯಲ್ಲಿ ಮಗ ನಿಖಿಲ್ ಸೋತರೂ ಬಡ ಕುಟುಂಬಕ್ಕೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಸಿಎಂ ನೆರವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.

ಚಿಕಿತ್ಸೆಗೆ ಧನ ಸಹಾಯ ಮಾಡಿ ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ

ಘಟನೆಯ ಹಿನ್ನೆಲೆ
ಹೆಚ್‌ಡಿ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಕುಮಾರ್ ಕುಟುಂಬ ಏಪ್ರಿಲ್ 10 ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ್ದ ಸಿಎಂ, ಮಾರನೆಯ ದಿನ ಕುಟುಂಬವನ್ನು ಮನೆಗೆ ಕರೆಸಿಕೊಂಡು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಿಯಾಂಜಲಿಗೆ ಒಂದು ತಿಂಗಳ ನಂತರ ಬಲಗೈ ಆಪರೇಷನ್ ನಡೆಸಲಾಗಿದೆ. ಈ ಮೂಲಕ ಆಕೆ ಮರುಜೀವ ಪಡೆದುಕೊಂಡಿದ್ದಳು.

ಹುಟ್ಟಿನಿಂದಲೇ ಬಲಗೈ ಸ್ವಾಧೀನ ಕಳೆದುಕೊಂಡಿದ್ದ ರಿಯಾಂಜಲಿಗೆ ಈಗ ಸ್ವಲ್ಪ ಮಟ್ಟಿಗೆ ಚಲನೆ ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಎಲ್ಲವನ್ನೂ ಸಿಎಂ ಭರಿಸಿದ್ದಾರೆ. ಸದ್ಯ ಬಾಲಕಿ ಆರೋಗ್ಯವಾಗಿದ್ದಾಳೆ. ಸಿಎಂ ಸಹಾಯಕ್ಕೆ ಇಡೀ ಕುಟುಂಬ ಕೃತಜ್ಞತೆ ಸಲ್ಲಿಸಿದೆ.

Intro:ಮಂಡ್ಯ: ಸಕ್ಕರೆ ಜಿಲ್ಲೆಯ ಜನಕ್ಕೆ ಸಿಎಂ ಇಷ್ಟ ಆಗೋದು ಇದೊಂದೇ ಕಾರಣಕ್ಕೆ. ಕಷ್ಟ ಅಂತ ಹೋದರೆ ಅವರಿಗೆ ಸಹಾಯ ಮಾಡೋದರಲ್ಲಿ ಮುಂದು. ಹೀಗಾಗಿ ಸಿಎಂರನ್ನು ಕುಮಾರಣ್ಣ ಅಂತಾನೇ ಮಂಡ್ಯ ಜನ ಇಂದಿಗೂ ಕರೆಯೋದು.
ಹೌದಿ. ನಿಮಗೆ ಲೋಕ ಸಮರದ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಕೆ.ಆರ್.ಎಸ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಬಡ ಕುಟುಂಬ ತಮ್ಮ ಪುತ್ರಿಯ ಆಪರೇಷನ್‌ಗಾಗಿ ಸಹಾಯ ಕೇಳಿತ್ತು. ಸಹಾಯಕ್ಕೆ ಮರುಗಿದ ಕುಮಾರಸ್ವಾಮಿ ಈಗ ಬಾಲಕಿಗೆ ಸಹಾಯ ಮಾಡಿ, ಆಪರೇಷನ್ ಮಾಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಹೊಸ ಆನಂದೂರು ಗ್ರಾಮದ ಕುಮಾರ್ ಕುಟುಂಬಕ್ಕೆ ಸಿಎಂ ಸಹಾಯ ಹಸ್ತ ಚಾಚಿದ್ದಾರೆ. ಕೊನೆಯ ಪುತ್ರಿ ರಿಯಾಂಜಲಿಯ ಬಲಗೈ ಆಪರೇಷನ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಚುನಾವಣೆಯಲ್ಲಿ ಮಗ ನಿಖಿಲ್ ಸೋತರು ಬಡ ಕುಟುಂಬಕ್ಕೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಸಿಎಂ ನೆರವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.
ಸಿಎಂ ಚುನಾವಣಾ ಪ್ರಚಾರದಲ್ಲಿದ್ದರು. ಈ ಸಂದರ್ಭದಲ್ಲಿ ಕುಮಾರ್ ಕುಟುಂಬ ಏಪ್ರಿಲ್ 10 ರಂದು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿ ಆಲಿಸದ್ದ ಸಿಎಂ ಮಾರನೆಯ ದಿನ ಕುಟುಬವನ್ನು ಮನೆಗೆ ಕರೆಸಿಕೊಂಡು ಉಪಚಾರ ಮಾಡಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಿಯಾಂಜಲಿಗೆ ಒಂದು ತಿಂಗಳ ನಂತರ ಬಲಗೈ ಆಪರೇಷನ್ ಮಾಡಿ ಯಶಸ್ವಿಯಾಗಿತ್ತಾರೆ.
ಹುಟ್ಟಿನಿಂದಲೇ ಬಲಗೈ ಸ್ವಾಧೀನವೇ ಇಲ್ಲದ ರಿಯಾಂಜಲಿ ಈಗ ಸ್ವಲ್ಪ ಮಟ್ಟಿಗೆ ಚಲನೆ ಮಾಡುತ್ತಿದ್ದಾಳೆ. ಆಪರೇಷನ್‌ಗೆ ಸುಮಾರ್ 2 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಎಲ್ಲವೂ ಸಿಎಂ ಬರಿಸಿದ್ದಾರೆ. ಸದ್ಯ ಬಾಲಕಿ ಆರೋಗ್ಯವಾಗಿದ್ದಾಳೆ.
ಸಿಎಂ ಸಹಾಯಕ್ಕೆ ಇಡೀ ಕುಟುಂಬ ಕೃತಜ್ಞತೆ ಸಲ್ಲಿಸಿದೆ. ಮುಂದೆಯೂ ಕುಮಾರಸ್ವಾಮಿ ಅಧಿಕಾರದಲ್ಲಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.Body:ಕೊತ್ತತ್ತಿ ಯತೀಶ್ ಬಾಬು

ಬೈಟ್
೧. ಕುಮಾರ್, ಬಾಲಕಿ ತಂದೆ
೨. ಲಕ್ಷ್ಮಿ, ಬಾಲಕಿ ತಾಯಿConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.