ETV Bharat / state

ಬೆಂಗಳೂರು, ಮೈಸೂರಿನಿಂದ ಆಗಮಿಸುವವರಿಗೆ 5 ಸಾವಿರ ರೂ. ದಂಡ: ಡಂಗೂರ ಹೊಡೆಸಿದ ಗ್ರಾಮಸ್ಥರು

author img

By

Published : Jul 5, 2020, 6:01 PM IST

Updated : Jul 6, 2020, 5:47 PM IST

ಮಂಡ್ಯ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಬೆಂಗಳೂರು, ಮೈಸೂರಿನಿಂದ ಬರುವ ಜನರಿಗೆ ನಿರ್ಬಂಧ ಹೇರಲಾಗಿದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ ಯಾವ ಗ್ರಾಮಗಳಲ್ಲಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.

Bangalore, Mysore residents restricted in Mandya
ಡಂಗೂರ ಹೊಡೆಸಿದ ಗ್ರಾಮಸ್ಥರು

ಮಂಡ್ಯ: ಗ್ರಾಮಕ್ಕೆ ಬೆಂಗಳೂರು, ಮೈಸೂರಿನಿಂದ ಯಾರೂ ಬರುವ ಹಾಗಿಲ್ಲ. ಒಂದೊಮ್ಮೆ ಬಂದರೆ 5 ಸಾವಿರ ದಂಡ ವಿಧಿಸಲಾಗುವುದೆಂದು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಡಂಗೂರು ಹೊಡೆಸಲಾಗಿದೆ.

ಡಂಗೂರ ಹೊಡೆಸಿದ ಗ್ರಾಮಸ್ಥರು

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹೊರ ಜಿಲ್ಲೆಗಳಿಂದ ಬರುವವವರಿಗೆ ನಿಷೇಧ ಹೇರಿದ್ದು, ಗ್ರಾಮದ ಮುಖಂಡರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಸಂಬಂಧ ವ್ಯಕ್ತಿಯೋರ್ವ ಗ್ರಾಮಗಳಲ್ಲಿ ಡಂಗೂರು ಸಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಯಾವ ಗ್ರಾಮದಲ್ಲಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬ ವಿಚಾರ ತಿಳಿದು ಬಂದಿಲ್ಲ.

ಮಂಡ್ಯ: ಗ್ರಾಮಕ್ಕೆ ಬೆಂಗಳೂರು, ಮೈಸೂರಿನಿಂದ ಯಾರೂ ಬರುವ ಹಾಗಿಲ್ಲ. ಒಂದೊಮ್ಮೆ ಬಂದರೆ 5 ಸಾವಿರ ದಂಡ ವಿಧಿಸಲಾಗುವುದೆಂದು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಡಂಗೂರು ಹೊಡೆಸಲಾಗಿದೆ.

ಡಂಗೂರ ಹೊಡೆಸಿದ ಗ್ರಾಮಸ್ಥರು

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹೊರ ಜಿಲ್ಲೆಗಳಿಂದ ಬರುವವವರಿಗೆ ನಿಷೇಧ ಹೇರಿದ್ದು, ಗ್ರಾಮದ ಮುಖಂಡರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಸಂಬಂಧ ವ್ಯಕ್ತಿಯೋರ್ವ ಗ್ರಾಮಗಳಲ್ಲಿ ಡಂಗೂರು ಸಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಯಾವ ಗ್ರಾಮದಲ್ಲಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬ ವಿಚಾರ ತಿಳಿದು ಬಂದಿಲ್ಲ.

Last Updated : Jul 6, 2020, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.