ETV Bharat / state

ನಿಲ್ಲದ ಕಾಂಗ್ರೆಸ್ - ಜೆಡಿಎಸ್ ಕಚ್ಚಾಟ: ದಳಪತಿಗಳ ವಿರುದ್ಧ ಹರಿಹಾಯ್ದ ಮಾಜಿ ಸಚಿವ

ಯಾರ್ಯಾರು ಕುಮಾರಸ್ವಾಮಿವರಿಗೆ, ದೇವೇಗೌಡ್ರಿಗೆ ಎಲ್ಲೆಲ್ಲಿ ಮೋಸ ಮಾಡಿದ್ದಾರೆ ಗೊತ್ತಿದೆ. ನನ್ನ ಅಥವಾ ನನ್ನ ಪಕ್ಷದ ಬಗ್ಗೆ ಪ್ರಶ್ನಿಸಲು ಅಂತವರಿಗೆ ಅಧಿಕಾರವಿಲ್ಲ. ನಾನು ಸಿದ್ದರಾಮಯ್ಯ ಅಭಿಮಾನಿ. ಮತ್ತೊಮ್ಮೆ ಅವರೇ ಸಿ.ಎಂ. ಆಗಲಿ- ಮಾಜಿ ಸಚಿವ ನರೇಂದ್ರ ಸ್ವಾಮಿ.

author img

By

Published : May 19, 2019, 10:38 AM IST

Updated : May 21, 2019, 12:37 AM IST

ಮಾಜಿ ಸಚಿವ ನರೇಂದ್ರ ಸ್ವಾಮಿ

ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ನರೇಂದ್ರ ಸ್ವಾಮಿ, ನಾವು 78 ಶಾಸಕರಿದ್ರು ಅಧಿಕಾರವನ್ನು 37 ಶಾಸಕರಿದ್ದವರಿಗೆ ಕೊಟ್ಟಿದ್ದೇವೆ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ನರೇಂದ್ರ ಸ್ವಾಮಿ

ನಮ್ಮ ಹೈ ಕಮಾಂಡ್ ವಿಚಾರಕ್ಕೆ ನಾವೆಲ್ಲ ಬದ್ದರಾಗಿದ್ದು, ಇದವರೆಗೂ ಯಾವುದನ್ನು ಪ್ರಶ್ನೆ ಮಾಡಿಲ್ಲ. ಅಧಿಕಾರ ಬಿಟ್ಟು ಕೊಟ್ಟ ಮೇಲೆ ಅಧಿಕಾರ ಮಾಡೋರು ಕಾಂಗ್ರೆಸ್ ಜೆಡಿಎಸ್‌ನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅದನ್ನ ಬಿಟ್ಟು ನಮಗೆ ಕಾಂಗ್ರೆಸ್ ನವರು ಸಹಕಾರ ನೀಡ್ತಿಲ್ಲ ಅನ್ನೋದ್ನ ಮಾಧ್ಯಮದ ಮುಂದೆ ಮಾತನಾಡೋದು ಸರಿ ಅಲ್ಲ ಎಂದರು.

ಸುಮಲತಾಗೆ ಜೆಡಿಎಸ್ ನಾಯಕರು ಬೆಂಬಲ ನೀಡಿರುವುದಕ್ಕೆ ಸಾಕ್ಷಿ ಇದೆ. ಯಾರ್ಯಾರು ಕುಮಾರಸ್ವಾಮಿವರಿಗೆ, ದೇವೇಗೌಡ್ರಿಗೆ ಎಲ್ಲೆಲ್ಲಿ ಮೋಸ ಮಾಡಿದ್ದಾರೆ. ಮಂಡ್ಯದಲ್ಲಿ ಏನೇನು ನಡೆದಿದೆ ಇವೆಲ್ಲವು ಚರ್ಚೆಗೆ ಈಗಾಗಲೇ ಬಂದು ಬಿಟ್ಟಿದ್ದು, ಸದ್ಯದಲ್ಲೇ ಎಲ್ಲಾ ಬಹೀರಂಗವಾಗಲಿದೆ ಎಂದರು.

ಇನ್ನೂ ಇದೇ ವೇಳೆ ಮಾತನಾಡಿದ ಅವರು, ನನ್ನ ಪಕ್ಷದ ಬಗ್ಗೆಯಾಗಲಿ, ನನ್ನ ತೀರ್ಮಾನಗಳ ಬಗ್ಗೆಯಾಗಲಿ ಮಾತನಾಡುವುದಕ್ಕೆ, ಪ್ರಶ್ನೆ ಮಾಡೋದಕ್ಕೆ ಆತನಿಗೆ ಯಾವ ಅರ್ಹತೆ ಕೂಡ ಇಲ್ಲ. ನಾನೊಬ್ಬ ಸ್ವಾಭಿಮಾನಿ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗೋ ವಿಚಾರವನ್ನ ನಾನು ಯಾವತ್ತು ಮಾಡಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಅವರು ಅಭಿವೃದ್ದಿಯ ಹರಿಕಾರ. ಸಾಮಾನ್ಯ ಜನರು ಕೂಡ ಸಿದ್ದರಾಮಯ್ಯ ಮತ್ತೊಮ್ಮೆ ಸಿ.ಎಂ. ಆಗಲಿ ಅಂತಿದ್ದಾರೆ ಎಂದರು.

ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ನರೇಂದ್ರ ಸ್ವಾಮಿ, ನಾವು 78 ಶಾಸಕರಿದ್ರು ಅಧಿಕಾರವನ್ನು 37 ಶಾಸಕರಿದ್ದವರಿಗೆ ಕೊಟ್ಟಿದ್ದೇವೆ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ನರೇಂದ್ರ ಸ್ವಾಮಿ

ನಮ್ಮ ಹೈ ಕಮಾಂಡ್ ವಿಚಾರಕ್ಕೆ ನಾವೆಲ್ಲ ಬದ್ದರಾಗಿದ್ದು, ಇದವರೆಗೂ ಯಾವುದನ್ನು ಪ್ರಶ್ನೆ ಮಾಡಿಲ್ಲ. ಅಧಿಕಾರ ಬಿಟ್ಟು ಕೊಟ್ಟ ಮೇಲೆ ಅಧಿಕಾರ ಮಾಡೋರು ಕಾಂಗ್ರೆಸ್ ಜೆಡಿಎಸ್‌ನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅದನ್ನ ಬಿಟ್ಟು ನಮಗೆ ಕಾಂಗ್ರೆಸ್ ನವರು ಸಹಕಾರ ನೀಡ್ತಿಲ್ಲ ಅನ್ನೋದ್ನ ಮಾಧ್ಯಮದ ಮುಂದೆ ಮಾತನಾಡೋದು ಸರಿ ಅಲ್ಲ ಎಂದರು.

ಸುಮಲತಾಗೆ ಜೆಡಿಎಸ್ ನಾಯಕರು ಬೆಂಬಲ ನೀಡಿರುವುದಕ್ಕೆ ಸಾಕ್ಷಿ ಇದೆ. ಯಾರ್ಯಾರು ಕುಮಾರಸ್ವಾಮಿವರಿಗೆ, ದೇವೇಗೌಡ್ರಿಗೆ ಎಲ್ಲೆಲ್ಲಿ ಮೋಸ ಮಾಡಿದ್ದಾರೆ. ಮಂಡ್ಯದಲ್ಲಿ ಏನೇನು ನಡೆದಿದೆ ಇವೆಲ್ಲವು ಚರ್ಚೆಗೆ ಈಗಾಗಲೇ ಬಂದು ಬಿಟ್ಟಿದ್ದು, ಸದ್ಯದಲ್ಲೇ ಎಲ್ಲಾ ಬಹೀರಂಗವಾಗಲಿದೆ ಎಂದರು.

ಇನ್ನೂ ಇದೇ ವೇಳೆ ಮಾತನಾಡಿದ ಅವರು, ನನ್ನ ಪಕ್ಷದ ಬಗ್ಗೆಯಾಗಲಿ, ನನ್ನ ತೀರ್ಮಾನಗಳ ಬಗ್ಗೆಯಾಗಲಿ ಮಾತನಾಡುವುದಕ್ಕೆ, ಪ್ರಶ್ನೆ ಮಾಡೋದಕ್ಕೆ ಆತನಿಗೆ ಯಾವ ಅರ್ಹತೆ ಕೂಡ ಇಲ್ಲ. ನಾನೊಬ್ಬ ಸ್ವಾಭಿಮಾನಿ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗೋ ವಿಚಾರವನ್ನ ನಾನು ಯಾವತ್ತು ಮಾಡಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಅವರು ಅಭಿವೃದ್ದಿಯ ಹರಿಕಾರ. ಸಾಮಾನ್ಯ ಜನರು ಕೂಡ ಸಿದ್ದರಾಮಯ್ಯ ಮತ್ತೊಮ್ಮೆ ಸಿ.ಎಂ. ಆಗಲಿ ಅಂತಿದ್ದಾರೆ ಎಂದರು.

Intro:ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಾಕ್ ಸಮರ ತಾರಕಕ್ಕೇರಿದೆ. ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ನರೇಂದ್ರ ಸ್ವಾಮಿ, ನಾವು 78 ಶಾಸಕರಿದ್ರು ಅಧಿಕಾರವನ್ನು 37 ಶಾಸಕರಿದ್ದವರಿಗೆ ಕೊಟ್ಟಿದ್ದೇವೆ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ನಮ್ಮ ಹೈ ಕಮಾಂಡ್ ವಿಚಾರಕ್ಕೆ ನಾವೆಲ್ಲ ಬದ್ದರಾಗಿ ಯಾವುದನ್ನು ಪ್ರಶ್ನೆ ಮಾಡಿಲ್ಲ. ಅಧಿಕಾರ ಬಿಟ್ಟು ಕೊಟ್ಟ ಮೇಲೆ ಅಧಿಕಾರ ಮಾಡೋರು ಕಾಂಗ್ರೆಸ್ ಜೆಡಿಎಸ್‌ನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅದನ್ನ ಬಿಟ್ಟು ಈಗ ನಮಗೆ ಕಾಂಗ್ರೆಸ್ ನವರು ಸಹಕಾರ ನೀಡ್ತಿಲ್ಲ ಅನ್ನೋದ್ನ ಮಾಧ್ಯಮದ ಮುಂದೆ ಮಾತನಾಡೋದು ಸರಿ ಅಲ್ಲ ಎಂದರು.
ಸುಮಲತಾಗೆ ಜೆಡಿಎಸ್ ನಾಯಕರು ಬೆಂಬಲ ನೀಡಿದರು ಎಂಬ ವಿಚಾರವಾಗಿ ಎಲ್ಲದಕ್ಕೂ ಸಾಕ್ಷಿ ಇದೆ, ಮುಂದಿನ ದಿ‌ನಗಳಲ್ಲಿ ಇದೆಲ್ಲವು ಚರ್ಚೆಗೆ ಬರಲಿದೆ. ಯಾರ್ಯಾರು ಕುಮಾರಸ್ವಾಮಿವರಿಗೆ ಮೋಸ ಮಾಡಿದ್ದಾರೆ. ದೇವೇಗೌಡ್ರ ಹೆಸರೇಳ್ತಿದ್ದವರು ಯಾರ್ಯಾರು ಎಲ್ಲೆಲ್ಲಿ ಮೋಸ ಮಾಡಿದ್ದಾರೆ. ಇವೆಲ್ಲವು ಚರ್ಚೆಗೆ ಈಗಾಗಲೇ ಬಂದು ಬಿಟ್ಟಿದೆ. ಮಂಡ್ಯದಲ್ಲಿ ಏನೇನ್ ನಡೆದಿದೆ ಎಲ್ಲವು ಮುಂದಿನ‌ ದಿನದಲ್ಲಿ ಗೊತ್ತಾಗುತ್ತೆ ಎಂದರು.
ಉಚ್ಚಾಟಿತ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಕೈ ಪಕ್ಷದ ಪರಾಜಿತ ನಾಯಕರು ಸುಮಲತಾ ಪರ ಕೆಲ್ಸ ಮಾಡಿದ್ರು ಹೇಳಿಕೆ ವಿಚಾರವಾಗಿ, ಈಗ ಆರೋಪ ಮಾಡೋದಕ್ಕೆ ದಾಖಲೆಗಳು ಬೇಕು. ಅಥವಾ ಏನಾದ್ರು ಹೇಳಿಕೆ ಕೊಡೋದಕ್ಕೂ ದಾಖಲೆ ಬೇಕು. ನಾನಂತು ಅವ್ರು ಯಾವ ದೃಷ್ಟಿಯಲ್ಲಿ ಯಾರನ್ನು ಉದ್ದೇಶಿಸಿ ಹೇಳಿಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ನಾನು ತಟಸ್ಥವಾಗಿದ್ದೆ ಅನ್ನೋ ನನ್ನ ಹೇಳಿಕೆಯನ್ನು‌ ನಮ್ಮ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟಪಡಿಸಿದ್ದೇನೆ. ಅವ್ರ ವೈಯಕ್ತಿಕ ವಿಚಾರಗಳಿಗೆ ನಾನು ಬೆಲೆ ಕೊಡುವುವುದಿಲ್ಲ ಎಂದರು.
ಈ ಬಾರಿ ಮಂಡ್ಯ ಲೋಕಸಭಾ ಜಿಲ್ಲೆಯ ತೀರ್ಪು ಜನರ ತೀರ್ಪಾಗಿದ್ದು ಜನರ ತೀರ್ಪಾಗಿರುತ್ತೆ ಎಂದರು.
ಇನ್ನು ಸುಮಲತಾ ಪರ ಕೆಲ್ಸ ಮಾಡಿಲ್ಲದಿದ್ರೆ ಮಹದೇಶ್ವರ ಸನ್ನಿಧಿಯಲ್ಲಿ ಆಣೆ ಮಾಡೋ ಬಗ್ಗೆ ಶಾಸಕರ ಸವಾಲ್ ವಿಚಾರವಾಗಿ ಯೋಗ್ಯರಾಗಿರೋರು ಮಾತ್ರ ಮಾತನಾಡಿದಾಗ ಮಾತ್ರ ಉತ್ತರ ಕೊಡ್ತಿನಿ. ನನಗೆ ಅಂತವರಿಗೆಲ್ಲಾ ಉತ್ತರ ಕೊಡಬೇಕಾದ ಅನಿವಾರ್ಯತೆ ಇಲ್ಲ ಎಂದರು.
ನನ್ನ ಪಕ್ಷದ ಬಗೆಯಾಗಲಿ, ನನ್ನ ತೀರ್ಮಾನದ ಬಗೆಯಾಗಲಿ ಮಾತನಾಡುವುದಕ್ಕೆ ಆಗ್ಲಿ, ಪ್ರಶ್ನೆ ಮಾಡೋದಿಕ್ಕೆ ಆಗ್ಲಿ ಆತನಿಗೆ ಯಾವ ಅರ್ಹತೆ ಕೂಡ ಇಲ್ಲ. ನಾನಂತು ಸ್ಪಷ್ಟಪಡಿಸಿದ್ದೀನಿ, ನಾನೊಬ್ಬ ಸ್ವಾಭಿಮಾನಿ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗೋ ವಿಚಾರನಾ ನಾನು ಯಾವತ್ತು ಮಾಡಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಿದ್ರಾಮಯ್ಯ ಅಭಿಮಾನಿ ಅವ್ರು ಅಭಿವೃದ್ದಿಯ ಹರಿಕಾರ. ಆಗಾಗಿ ಶ್ರೀಸಾಮಾನ್ಯ ಜನ್ರು ಕೂಡ ಸಿದ್ರಾಮಯ್ಯ ಮತ್ತೊಮ್ಮೆ ಸಿ.ಎಂ. ಆಗ್ಲಿ ಅಂತಿದ್ದಾರೆ. ಇದ್ರಲ್ಲಿ ನಾನು‌ ಕೂಡ ಒಬ್ಬ. ಅವತ್ತು ಸಿದ್ರಾಮಯ್ಯ ಮತ್ತೆ ಸಿ.ಎಂ.ಆಗ್ತಾರೆ ಅಂತಾ ಅವ್ರನ್ನ ಸೋಲಿಸಿದ್ರು ಎಂದರು.Body:ಕೊತ್ತತ್ತಿ ಯತೀಶ್ ಬಾಬುConclusion:
Last Updated : May 21, 2019, 12:37 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.