ETV Bharat / state

ಮಂಡ್ಯ ಬಳಿ ಭೀಕರ ಅಪಘಾತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ... ಗಾಯಾಳುಗಳಿಗೆ ಮುಂದುವರಿದ ಚಿಕಿತ್ಸೆ! - ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ

ನಾಗಮಂಗಲ ತಾಲೂಕಿನ  ರಾಮೇನಹಳ್ಳಿ ಬಳಿಯ ಜೀವರ್ಗಿ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ನಿನ್ನೆ ಆರು ಮಂದಿ ದುರ್ಮರಣವನ್ನಪ್ಪಿದ್ದು, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತ
author img

By

Published : Nov 21, 2019, 11:35 PM IST

Updated : Nov 22, 2019, 7:31 AM IST

ಮಂಡ್ಯ: ಟಾಟಾ ಸುಮೋ, ಗೂಡ್ಸ್​​​​ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ನಾಗಮಂಗಲ ಪಟ್ಟಣದವರಾಗಿದ್ದಾರೆ.

mandya accident
ಮಂಡ್ಯ ಬಳಿ ಭೀಕರ ರಸ್ತೆ ಅಪಘಾತ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಮದೇವನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದು, ಅವರನ್ನ ಸಾಯದಾ ಮತ್ತು ಅಕ್ಬರ್​ ಅಲಿ ಎಂದು ಗುರುತಿಸಲಾಗಿದೆ.

accident-bitween-cruzor-and-tata-sumo
ಭೀಕರ ರಸ್ತೆ ಅಪಘಾತ

ಮೃತಪಟ್ಟ ದುರ್ದೈವಿಗಳು :
ಬಾಕರ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್ (50),ತಾಹೀರ್ ಬಿನ್ ಸುಲ್ತಾನ್ ಷರೀಫ್(30),ನೌಷದ್ ಬಿನ್ ಮಕ್ಬೂಲ್ ಪಾಷ(45),ಹಸೀನ್ ತಾಜ್ ಕೋಂ ಖಲೀಂ(50),ಮೆಹಬೂಬ್ ಜಾನ್ ಬಿನ್ ದಸ್ತರ್ ಖಾನ್(50), ಸಾಯದಾ,ಅಕ್ಬರ್ ಅಲಿ ಹಾಗೂ ಮಕ್ಸೂದ್ ಬಿನ್ ಮಹಮ್ಮದ್ (25) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡ್ಯ: ಟಾಟಾ ಸುಮೋ, ಗೂಡ್ಸ್​​​​ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ನಾಗಮಂಗಲ ಪಟ್ಟಣದವರಾಗಿದ್ದಾರೆ.

mandya accident
ಮಂಡ್ಯ ಬಳಿ ಭೀಕರ ರಸ್ತೆ ಅಪಘಾತ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಮದೇವನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದು, ಅವರನ್ನ ಸಾಯದಾ ಮತ್ತು ಅಕ್ಬರ್​ ಅಲಿ ಎಂದು ಗುರುತಿಸಲಾಗಿದೆ.

accident-bitween-cruzor-and-tata-sumo
ಭೀಕರ ರಸ್ತೆ ಅಪಘಾತ

ಮೃತಪಟ್ಟ ದುರ್ದೈವಿಗಳು :
ಬಾಕರ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್ (50),ತಾಹೀರ್ ಬಿನ್ ಸುಲ್ತಾನ್ ಷರೀಫ್(30),ನೌಷದ್ ಬಿನ್ ಮಕ್ಬೂಲ್ ಪಾಷ(45),ಹಸೀನ್ ತಾಜ್ ಕೋಂ ಖಲೀಂ(50),ಮೆಹಬೂಬ್ ಜಾನ್ ಬಿನ್ ದಸ್ತರ್ ಖಾನ್(50), ಸಾಯದಾ,ಅಕ್ಬರ್ ಅಲಿ ಹಾಗೂ ಮಕ್ಸೂದ್ ಬಿನ್ ಮಹಮ್ಮದ್ (25) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Intro:Body:

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಈ ವರ್ಷ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಸದ್ಯ ಗೆಲುವಿನ ಟ್ರ್ಯಾಕ್​​ನಲ್ಲಿರುವ ಬಿಟೌನ್ ಅಕ್ಕಿ ಈ ವರ್ಷ ವಿಶೇಷ ದಾಖಲೆಯನ್ನು ಬರೆಯಲು ಸಜ್ಜಾಗಿದ್ದಾರೆ.



ಅಕ್ಷಯ್ ಕುಮಾರ್ ಅಭಿನಯದಲ್ಲಿ ಕೇಸರಿ, ಮಿಷನ್ ಮಂಗಳ್​ ಹಾಗೂ ಹೌಸ್​ಫುಲ್​ 4 ಈ ವರ್ಷ ತೆರೆಗೆ ಬಂದಿದೆ. ಈ ವರ್ಷಾಂತ್ಯದಲ್ಲಿ ಗುಡ್​ನ್ಯೂಸ್ ಚಿತ್ರ ರಿಲೀಸ್ ಆಗಲಿದ್ದು, ಕಲೆಕ್ಷನ್ ವಿಚಾರದಲ್ಲಿ ಅಕ್ಕಿ ಸಾವಿರ ಕೋಟಿ ಗಡಿ ದಾಟಲಿದ್ದಾರೆ ಎಂದು ಬಾಲಿವುಡ್ ಸಿನಿ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ.



ಮಾರ್ಚ್​ನಲ್ಲಿ ತೆರೆಕಂಡ 'ಕೇಸರಿ' ಅಕ್ಷಯ್ ಕುಮಾರ್ ಅಭಿನಯದ ವರ್ಷದ ಮೊದಲ ಸಿನಿಮಾವಾಗಿತ್ತು. ಈ ಚಿತ್ರ ಬರೋಬ್ಬರಿ ₹203 ಕೋಟಿ ಚಾಚುವ ಮೂಲಕ ಅಕ್ಷಯ್ ಕೆರಿಯರ್​​ನಲ್ಲೇ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಯಿತು.



ನಂತರದಲ್ಲಿ ಇಸ್ರೋ ವಿಜ್ಞಾನಿಗಳ ಮಂಗಳಯಾನದ ಸಾಹಸಗಾಥೆ 'ಮಿಷನ್ ಮಂಗಳ್​' ಹೆಸರಿನಲ್ಲಿ ತೆರೆಗೆ ಬಂದಿತ್ತು. ಈ ಚಿತ್ರ ₹277 ಕೋಟಿ ಗಳಿಕೆ ಮಾಡಿ ಕೇಸರಿ ದಾಖಲೆ ಮುರಿಯಿತು. ಈ ಎರಡು ಚಿತ್ರದಿಂದ ಅಕ್ಕಿ ಗಲ್ಲಾಪೆಟ್ಟಿಗೆ ಒಟ್ಟಾರೆ ಗಳಿಕೆ ₹480 ಕೋಟಿಗೆ ಏರಿಕೆಯಾಯಿತು.



ಇತ್ತೀಚೆಗೆ ತೆರೆಕಂಡ 'ಹೌಸ್​ಫುಲ್​ 4' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಕಲೆಕ್ಷನ್ ವಿಚಾರದಲ್ಲಿ ಭಾರಿ ಹಿಂದೆ ಉಳಿಯಲಿಲ್ಲ. ನಾಲ್ಕನೇ ವಾರದ ಮುಕ್ತಾಯಕ್ಕೆ 'ಹೌಸ್​ಫುಲ್ 4' ಸಿನಿಮಾ ವಿಶ್ವಾದ್ಯಂತ ₹290 ಕೋಟಿ ಗಳಿಸಿದೆ. ಈ ಮೂರು ಸಿನಿಮಾದ ಮೂಲಕ ಬಾಲಿವುಡ್ ಕಿಲಾಡಿ ₹770 ಕೋಟಿ ಹಣವನ್ನು ಗಲ್ಲಾಪೆಟ್ಟಿಯಲ್ಲಿ ದೋಚಿದ್ದಾರೆ.



ಅಕ್ಷಯ್ ಅಭಿನಯದ ಮುಂದಿನ ಚಿತ್ರ 'ಗುಡ್​ನ್ಯೂಸ್' ಟ್ರೇಲರ್ ಈಗಾಗಲೇ ರಿಲೀಸ್ ಆಗಿದ್ದು, ಅದ್ಭುತ ರೆಸ್ಪಾನ್ಸ್ ದೊರೆತಿದೆ. 'ಗುಡ್​ನ್ಯೂಸ್' ಚಿತ್ರದ ಟ್ರೇಲರ್ ನಾಲ್ಕು ದಿನದಲ್ಲಿ 50 ಮಿಲಿಯನ್ ವೀಕ್ಷಣೆ ಪಡೆದಿದೆ. ಡಿ.27ರಂದು ಈ ಚಿತ್ರ ತೆರೆಗಪ್ಪಳಿಸಲಿದ್ದು, ಅಕ್ಷಯ್ ಸಾವಿರ ಕೋಟಿಯ ಒಡೆಯರಾಗುತ್ತಾರಾ ಎನ್ನುವುದು ವರ್ಷಾಂತ್ಯಕ್ಕೆ ತಿಳಿದು ಬರಲಿದೆ.



ಸಲ್ಲು ರೆಕಾರ್ಡ್​ ಬ್ರೇಕ್​​..?



2016ರಲ್ಲಿ ಬಾಕ್ಸಾಫೀಸ್ ಸುಲ್ತಾನ್​ ಸಲ್ಮಾನ್​ ಖಾನ್ ಒಂದು ವರ್ಷದಲ್ಲಿ ₹970 ಕೋಟಿ ಗಳಿಕೆ ಮಾಡಿದ್ದರು. 'ಭಜರಂಗಿ ಭಾಯಿಜಾನ್' ಹಾಗೂ 'ಪ್ರೇಮ್​​ ರತನ್ ಧನ್​ಪಾಯೋ' ಚಿತ್ರಗಳ ಮೂಲಕ ಸಾವಿರ ಕೋಟಿಯ ಸನಿಹ ಬಂದಿದ್ದರು. ಆದರೆ ಈ ದಾಖಲೆಯನ್ನು ಅಕ್ಷಯ್ ಕುಮಾರ್​ ಮೂರು ವರ್ಷದ ಬಳಿಕ ಬ್ರೇಕ್​ ಮಾಡುವ ಅವಕಾಶ ಹೊಂದಿದ್ದಾರೆ.


Conclusion:
Last Updated : Nov 22, 2019, 7:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.