ETV Bharat / state

ಕೊಪ್ಪಳ: ಮುಷ್ಕರನಿರತ ಸಿಬ್ಬಂದಿ ವಿರುದ್ಧ ವರ್ಗಾವಣೆ ಅಸ್ತ್ರ ಪ್ರಯೋಗ

author img

By

Published : Apr 11, 2021, 1:26 PM IST

ಕೊಪ್ಪಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕರು, ನಿರ್ವಾಹಕರು ಹಾಗೂ ಕಂಪ್ಯೂಟರ್ ಆಪರೇಟರ್​ಗಳನ್ನು ಬೀದರ್ ಹಾಗೂ ಯಾದಗಿರಿ ವಿಭಾಗಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ksrtc
ksrtc

ಕೊಪ್ಪಳ: ಮುಷ್ಕರನಿರತ ಸಾರಿಗೆ ಸಿಬ್ಬಂದಿ ಮೇಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದು, ಕೊಪ್ಪಳ ಘಟಕದ ಕೆಲ ನೌಕರರನ್ನು ಅಂತರ್ ವಿಭಾಗಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆ ಪ್ರತಿ
ವರ್ಗಾವಣೆ ಪ್ರತಿ

ಕೊಪ್ಪಳ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕರು, ನಿರ್ವಾಹಕರು ಹಾಗೂ ಕಂಪ್ಯೂಟರ್ ಆಪರೇಟರ್​ಗಳನ್ನು ಬೀದರ್ ಹಾಗೂ ಯಾದಗಿರಿ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಕೊಪ್ಪಳ ಘಟಕದಲ್ಲಿ ಕಂಪ್ಯೂಟರ್ ಆಪರೇಟರ್​ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ ರೆಡ್ಡಿ ಎಂಬುವರನ್ನು ಯಾದಗಿರಿ ವಿಭಾಗದ ಗುರುಮಠಕಲ್​ಗೆ, ಮಂಜುನಾಥ ಕುಂದಗೋಳ ಎಂಬುವರನ್ನು ಕಲಬುರಗಿ ವಿಭಾಗದ ಕಾಳಗಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.

ಇನ್ನು ಕೊಪ್ಪಳ ವಿಭಾಗದ ವಿವಿಧ ಘಟಕಗಳ ಚಾಲಕ ಹಾಗೂ ನಿರ್ವಾಹಕರಾದ ನಾಗೇಶ ಬಡಿಗೇರ, ಶ್ಯಾಮೀದಸಾಬ, ಬಸನಗೌಡ ಪಾಟೀಲ್, ಬಿ.ಬಿ. ನಾಗಪ್ಪ, ನಾಗರಾಜ ಹಾಗೂ ಡಿ.ಬಿ.ಶ್ರೀಶೈಲ ಎಂಬುವರನ್ನು ಅಂತರ್ ವಿಭಾಗಕ್ಕೆ ವರ್ಗಾವಣೆ ಮಾಡುವ ಮೂಲಕ ಮುಷ್ಕರ ನಿರತ ಸಿಬ್ಬಂದಿಗೆ ಈಕರಸಾ ಸಂಸ್ಥೆ ಶಾಕ್ ನೀಡಿದೆ.

ಕೊಪ್ಪಳ: ಮುಷ್ಕರನಿರತ ಸಾರಿಗೆ ಸಿಬ್ಬಂದಿ ಮೇಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದು, ಕೊಪ್ಪಳ ಘಟಕದ ಕೆಲ ನೌಕರರನ್ನು ಅಂತರ್ ವಿಭಾಗಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆ ಪ್ರತಿ
ವರ್ಗಾವಣೆ ಪ್ರತಿ

ಕೊಪ್ಪಳ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕರು, ನಿರ್ವಾಹಕರು ಹಾಗೂ ಕಂಪ್ಯೂಟರ್ ಆಪರೇಟರ್​ಗಳನ್ನು ಬೀದರ್ ಹಾಗೂ ಯಾದಗಿರಿ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಕೊಪ್ಪಳ ಘಟಕದಲ್ಲಿ ಕಂಪ್ಯೂಟರ್ ಆಪರೇಟರ್​ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ ರೆಡ್ಡಿ ಎಂಬುವರನ್ನು ಯಾದಗಿರಿ ವಿಭಾಗದ ಗುರುಮಠಕಲ್​ಗೆ, ಮಂಜುನಾಥ ಕುಂದಗೋಳ ಎಂಬುವರನ್ನು ಕಲಬುರಗಿ ವಿಭಾಗದ ಕಾಳಗಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.

ಇನ್ನು ಕೊಪ್ಪಳ ವಿಭಾಗದ ವಿವಿಧ ಘಟಕಗಳ ಚಾಲಕ ಹಾಗೂ ನಿರ್ವಾಹಕರಾದ ನಾಗೇಶ ಬಡಿಗೇರ, ಶ್ಯಾಮೀದಸಾಬ, ಬಸನಗೌಡ ಪಾಟೀಲ್, ಬಿ.ಬಿ. ನಾಗಪ್ಪ, ನಾಗರಾಜ ಹಾಗೂ ಡಿ.ಬಿ.ಶ್ರೀಶೈಲ ಎಂಬುವರನ್ನು ಅಂತರ್ ವಿಭಾಗಕ್ಕೆ ವರ್ಗಾವಣೆ ಮಾಡುವ ಮೂಲಕ ಮುಷ್ಕರ ನಿರತ ಸಿಬ್ಬಂದಿಗೆ ಈಕರಸಾ ಸಂಸ್ಥೆ ಶಾಕ್ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.