ETV Bharat / state

ಅಂಜನಾದ್ರಿ ಟು ಅಯೋಧ್ಯೆಗೆ ರೈಲು ಓಡಿಸಲು ಸಿದ್ದತೆ: ಸಂಸದ ಸಂಗಣ್ಣ ಕರಡಿ - ಅಯೋಧ್ಯೆಗೆ ರೈಲು

ಕೊಪ್ಪಳದ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಓಡಿಸಲು ಸಿದ್ದತೆ ನಡೆದಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಸಂಸದ ಸಂಗಣ್ಣ ಕರಡಿ
ಸಂಸದ ಸಂಗಣ್ಣ ಕರಡಿ
author img

By ETV Bharat Karnataka Team

Published : Jan 17, 2024, 5:15 PM IST

Updated : Jan 17, 2024, 5:40 PM IST

ಸಂಸದ ಸಂಗಣ್ಣ ಕರಡಿ

ಕೊಪ್ಪಳ : ಜನವರಿ 22 ರಂದು ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತೆರಳಲು ಕೊಪ್ಪಳದ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಓಡಿಸಲು ಸಿದ್ದತೆ ನಡೆದಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.

ಕೊಪ್ಪಳದ ಭಾಗ್ಯನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಮಂದಿರ ಉದ್ಘಾಟನೆಯಲ್ಲಿಯೂ ಕಾಂಗ್ರೆಸ್ಸಿನವರು ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನ ಇದು ಬಿಜೆಪಿಯವರ ಕಾರ್ಯಕ್ರಮ ಎನ್ನುತ್ತಿದ್ದಾರೆ. ಶ್ರೀರಾಮನ ಬದಲಿಗೆ ವಾಲ್ಮೀಕಿ ಮಂದಿರ ಆಗಬೇಕು ಎನ್ನುತ್ತಾರೆ. ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಆಗುತ್ತೇನು? ಶ್ರೀರಾಮನನ್ನು ಪರಿಚಯಿಸಿದ್ದೇ ವಾಲ್ಮೀಕಿ ಎನ್ನುವುದು ಸಾರ್ವಕಾಲಿಕ ಸತ್ಯ. ರಾಜಕೀಯಕ್ಕಾಗಿ ವಿರೋಧಿ ಹೇಳಿಕೆ ನೀಡಬಾರದು ಎಂದರು.

ಉಡಾನ್ ಯೋಜನೆಗೆ ಹಣ ಕೊಡಿಸಿ: 16 ವರ್ಷಗಳ ಹಿಂದೆ ಅಡಿಗಲ್ಲು ಹಾಕಿದ್ದ ಮೆಹಬೂಬ್​ ನಗರ - ಮುನಿರಾಬಾದ್ ರೈಲ್ವೇ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಆದರೆ, ನನ್ನ ಅವಧಿಯಲ್ಲಿ ಕಾಮಗಾರಿ ಆರಂಭವಾಗಿ ಈ ತಿಂಗಳ ಅಂತ್ಯಕ್ಕೆ ಸಿಂಧನೂರುವರೆಗೂ ರೈಲು ಓಡಲಿದೆ. ಈಗಿನ ಸಂಸದರಿಂದ ಕೊಪ್ಪಳ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎನ್ನುವ ಸಚಿವ ಶಿವರಾಜ ತಂಗಡಗಿಗೆ ಚಾಟಿ ಬೀಸಿದ ಅವರು, ನಿಮಗೆ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ಮೊದಲು ಉಡಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಹಣ ಕೊಡಿಸಿ. ಮೊದಲು ದರೋಜಿ ಬಾಗಲಕೋಟೆ ರೈಲ್ವೆ ಲೈನ್​ಗೆ ರಾಜ್ಯ ಸರ್ಕಾರದ ಹಣ ಕೊಡಿಸಿ. ಅದನ್ನೆಲ್ಲ ಬಿಟ್ಟು ನಾವೇನು ಮಾಡಿಲ್ಲ ಎನ್ನುವ ಉದ್ದಟತನದ ಮಾತನಾಡದಿರಿ ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ಗೃಹ ಲಕ್ಷ್ಮಿ ಹಣ ಹಾಕಲು ಸರ್ವರ್ ಸಮಸ್ಯೆ ಆಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಬರುವ ಕಿಸಾನ್ ಸಮ್ಮಾನ್ ಹಣ ರೈತರ ಖಾತೆಗೆ ಜಮಾ ಆಗಿದೆ. ಅಂದರೆ ರಾಜ್ಯ ಸರ್ಕಾರದ ಹಣ ಜಮಾ ಮಾಡಲು ಮಾತ್ರ ಸರ್ವರ್ ಸಮಸ್ಯೆ ಉಂಟಾಗುತ್ತಾ ಎಂದು ಪ್ರಶ್ನಿಸಿದರು?. ಕಾಂಗ್ರೆಸ್ ಸರ್ಕಾರದ ಮಂತ್ರಿಯೊಬ್ಬರು ಪರಿಹಾರದ ಹಣದಾಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಅವರಿಗೆ ರೈತರೇ ಕೇಳುತ್ತಿದ್ದಾರೆ ನಿಮಗೆ 25 ಲಕ್ಷ ಕೊಡ್ತೀವಿ, ನೀವು ಆತ್ಮಹತ್ಯೆ ಮಾಡಿಕೊಳ್ಳಿ ಎಂದು. ರಾಜಕೀಯದಲ್ಲಿರಲು ಇವರಿಗೆ ನೈತಿಕತೆ ಇಲ್ಲ ಎಂದರು.

ಇಷ್ಟುದಿನ ಸೇವೆ ಮಾಡಿದ್ದು ನನಗೆ ಖುಷಿ ತಂದಿದೆ: ಕೊಪ್ಪಳ ವಿಧಾನಸಭಾ, ಲೋಕಸಭಾ ಕ್ಷೇತ್ರದ ಜನ ನನಗೆ 1978 ರಿಂದ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಋಣದ ಭಾರ ದೊಡ್ಡದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರು ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಬೇರೆಯವರಿಗೆ ಟಿಕೆಟ್ ನೀಡಿದರೆ ನಾನೇ ಬಂದು ಪ್ರಚಾರ ಮಾಡುತ್ತೇನೆ. ಎಲ್ಲರೂ ಸೇರಿ ನರೇಂದ್ರ ಮೋದಿ‌ ಅವರಿಗೆ ಆಶೀರ್ವಾದ ಮಾಡುವ ಕೆಲಸ ಮಾಡೋಣ. ಇಷ್ಟುದಿನ ಸೇವೆ ಮಾಡಿದ್ದು ನನಗೆ ಖುಷಿ ತಂದಿದೆ ಎಂದು ಹೇಳಿದರು.

ಯಾವತ್ತಾದರೂ ಒಂದು ದಿನ ರಾಜಕಾರಣಿಗಳು ರಿಟೈರ್ ಆಗಬೇಕು. ಪ್ರತಿ ಸಲ ನಾನು ಟಿಕೆಟ್​ಗಾಗಿ ಹೋರಾಟ ಮಾಡುತ್ತಿದ್ದೆ. ಆದರೆ, ಈ ಬಾರಿ ಅಂತಹ ಭಾವನೆ ನನಗೆ ಇಲ್ಲ. ನರೇಂದ್ರ ಮೋದಿಯವರನ್ನು ಜಗತ್ತಿನ ನಾಯಕನನ್ನಾಗಿ ಮಾಡಬೇಕು ಎನ್ನುವುದೊಂದೇ ಗುರಿಯನ್ನು ನಾನು ಹೊಂದಿದ್ದೇನೆ ಎಂದರು.

ಇದನ್ನೂ ಓದಿ: ಕೊಪ್ಪಳ: ಉಪವಾಸ ಸತ್ಯಾಗ್ರಹ ಕೈಬಿಟ್ಟ ಸಂಸದ ಸಂಗಣ್ಣ ಕರಡಿ

ಸಂಸದ ಸಂಗಣ್ಣ ಕರಡಿ

ಕೊಪ್ಪಳ : ಜನವರಿ 22 ರಂದು ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತೆರಳಲು ಕೊಪ್ಪಳದ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಓಡಿಸಲು ಸಿದ್ದತೆ ನಡೆದಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.

ಕೊಪ್ಪಳದ ಭಾಗ್ಯನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಮಂದಿರ ಉದ್ಘಾಟನೆಯಲ್ಲಿಯೂ ಕಾಂಗ್ರೆಸ್ಸಿನವರು ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನ ಇದು ಬಿಜೆಪಿಯವರ ಕಾರ್ಯಕ್ರಮ ಎನ್ನುತ್ತಿದ್ದಾರೆ. ಶ್ರೀರಾಮನ ಬದಲಿಗೆ ವಾಲ್ಮೀಕಿ ಮಂದಿರ ಆಗಬೇಕು ಎನ್ನುತ್ತಾರೆ. ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಆಗುತ್ತೇನು? ಶ್ರೀರಾಮನನ್ನು ಪರಿಚಯಿಸಿದ್ದೇ ವಾಲ್ಮೀಕಿ ಎನ್ನುವುದು ಸಾರ್ವಕಾಲಿಕ ಸತ್ಯ. ರಾಜಕೀಯಕ್ಕಾಗಿ ವಿರೋಧಿ ಹೇಳಿಕೆ ನೀಡಬಾರದು ಎಂದರು.

ಉಡಾನ್ ಯೋಜನೆಗೆ ಹಣ ಕೊಡಿಸಿ: 16 ವರ್ಷಗಳ ಹಿಂದೆ ಅಡಿಗಲ್ಲು ಹಾಕಿದ್ದ ಮೆಹಬೂಬ್​ ನಗರ - ಮುನಿರಾಬಾದ್ ರೈಲ್ವೇ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಆದರೆ, ನನ್ನ ಅವಧಿಯಲ್ಲಿ ಕಾಮಗಾರಿ ಆರಂಭವಾಗಿ ಈ ತಿಂಗಳ ಅಂತ್ಯಕ್ಕೆ ಸಿಂಧನೂರುವರೆಗೂ ರೈಲು ಓಡಲಿದೆ. ಈಗಿನ ಸಂಸದರಿಂದ ಕೊಪ್ಪಳ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎನ್ನುವ ಸಚಿವ ಶಿವರಾಜ ತಂಗಡಗಿಗೆ ಚಾಟಿ ಬೀಸಿದ ಅವರು, ನಿಮಗೆ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ಮೊದಲು ಉಡಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಹಣ ಕೊಡಿಸಿ. ಮೊದಲು ದರೋಜಿ ಬಾಗಲಕೋಟೆ ರೈಲ್ವೆ ಲೈನ್​ಗೆ ರಾಜ್ಯ ಸರ್ಕಾರದ ಹಣ ಕೊಡಿಸಿ. ಅದನ್ನೆಲ್ಲ ಬಿಟ್ಟು ನಾವೇನು ಮಾಡಿಲ್ಲ ಎನ್ನುವ ಉದ್ದಟತನದ ಮಾತನಾಡದಿರಿ ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ಗೃಹ ಲಕ್ಷ್ಮಿ ಹಣ ಹಾಕಲು ಸರ್ವರ್ ಸಮಸ್ಯೆ ಆಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಬರುವ ಕಿಸಾನ್ ಸಮ್ಮಾನ್ ಹಣ ರೈತರ ಖಾತೆಗೆ ಜಮಾ ಆಗಿದೆ. ಅಂದರೆ ರಾಜ್ಯ ಸರ್ಕಾರದ ಹಣ ಜಮಾ ಮಾಡಲು ಮಾತ್ರ ಸರ್ವರ್ ಸಮಸ್ಯೆ ಉಂಟಾಗುತ್ತಾ ಎಂದು ಪ್ರಶ್ನಿಸಿದರು?. ಕಾಂಗ್ರೆಸ್ ಸರ್ಕಾರದ ಮಂತ್ರಿಯೊಬ್ಬರು ಪರಿಹಾರದ ಹಣದಾಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಅವರಿಗೆ ರೈತರೇ ಕೇಳುತ್ತಿದ್ದಾರೆ ನಿಮಗೆ 25 ಲಕ್ಷ ಕೊಡ್ತೀವಿ, ನೀವು ಆತ್ಮಹತ್ಯೆ ಮಾಡಿಕೊಳ್ಳಿ ಎಂದು. ರಾಜಕೀಯದಲ್ಲಿರಲು ಇವರಿಗೆ ನೈತಿಕತೆ ಇಲ್ಲ ಎಂದರು.

ಇಷ್ಟುದಿನ ಸೇವೆ ಮಾಡಿದ್ದು ನನಗೆ ಖುಷಿ ತಂದಿದೆ: ಕೊಪ್ಪಳ ವಿಧಾನಸಭಾ, ಲೋಕಸಭಾ ಕ್ಷೇತ್ರದ ಜನ ನನಗೆ 1978 ರಿಂದ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಋಣದ ಭಾರ ದೊಡ್ಡದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರು ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಬೇರೆಯವರಿಗೆ ಟಿಕೆಟ್ ನೀಡಿದರೆ ನಾನೇ ಬಂದು ಪ್ರಚಾರ ಮಾಡುತ್ತೇನೆ. ಎಲ್ಲರೂ ಸೇರಿ ನರೇಂದ್ರ ಮೋದಿ‌ ಅವರಿಗೆ ಆಶೀರ್ವಾದ ಮಾಡುವ ಕೆಲಸ ಮಾಡೋಣ. ಇಷ್ಟುದಿನ ಸೇವೆ ಮಾಡಿದ್ದು ನನಗೆ ಖುಷಿ ತಂದಿದೆ ಎಂದು ಹೇಳಿದರು.

ಯಾವತ್ತಾದರೂ ಒಂದು ದಿನ ರಾಜಕಾರಣಿಗಳು ರಿಟೈರ್ ಆಗಬೇಕು. ಪ್ರತಿ ಸಲ ನಾನು ಟಿಕೆಟ್​ಗಾಗಿ ಹೋರಾಟ ಮಾಡುತ್ತಿದ್ದೆ. ಆದರೆ, ಈ ಬಾರಿ ಅಂತಹ ಭಾವನೆ ನನಗೆ ಇಲ್ಲ. ನರೇಂದ್ರ ಮೋದಿಯವರನ್ನು ಜಗತ್ತಿನ ನಾಯಕನನ್ನಾಗಿ ಮಾಡಬೇಕು ಎನ್ನುವುದೊಂದೇ ಗುರಿಯನ್ನು ನಾನು ಹೊಂದಿದ್ದೇನೆ ಎಂದರು.

ಇದನ್ನೂ ಓದಿ: ಕೊಪ್ಪಳ: ಉಪವಾಸ ಸತ್ಯಾಗ್ರಹ ಕೈಬಿಟ್ಟ ಸಂಸದ ಸಂಗಣ್ಣ ಕರಡಿ

Last Updated : Jan 17, 2024, 5:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.