ETV Bharat / state

ಕೊಪ್ಪಳದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು: ಆರೋಪಿ ಅರೆಸ್ಟ್

ಕೊಪ್ಪಳ ಕಾರಟಗಿ ಪಟ್ಟಣದ ಎರಡು ಮನೆಗಳಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

author img

By

Published : Nov 22, 2019, 11:40 AM IST

ಆರೋಪಿ ಅಂದರ್​

ಕೊಪ್ಪಳ: ಕಾರಟಗಿ ಪಟ್ಟಣದ ಎರಡು ಮನೆಗಳಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಲೋಣಿ ಓಣಿಯ ಮಲ್ಲಪ್ಪ ಕೇಲೂರು ಎಂಬವರ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು, 23 ಗ್ರಾಂ ಚಿನ್ನ ಮತ್ತು 40 ಗ್ರಾಂ ಬೆಳ್ಳಿ, ಹಾಗೂ ವೀರೇಶ ಗೌಡ ಎಂಬವರ ಮನೆಯ ಬೀಗ ಮುರಿದು 50 ಗ್ರಾಂ ಚಿನ್ನ, ಒಂದು ಮೊಬೈಲ್ ಹಾಗೂ 68 ಸಾವಿರ ರೂಪಾಯಿ ನಗದು ಕಳವು ಮಾಡಿದ್ದರು.

ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು, ಆರೋಪಿ ಕಾರಟಗಿಯ ಯಮನೂರ ಬಾಲಪ್ಪ ಜೀರಾಳ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 63 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ: ಕಾರಟಗಿ ಪಟ್ಟಣದ ಎರಡು ಮನೆಗಳಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಲೋಣಿ ಓಣಿಯ ಮಲ್ಲಪ್ಪ ಕೇಲೂರು ಎಂಬವರ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು, 23 ಗ್ರಾಂ ಚಿನ್ನ ಮತ್ತು 40 ಗ್ರಾಂ ಬೆಳ್ಳಿ, ಹಾಗೂ ವೀರೇಶ ಗೌಡ ಎಂಬವರ ಮನೆಯ ಬೀಗ ಮುರಿದು 50 ಗ್ರಾಂ ಚಿನ್ನ, ಒಂದು ಮೊಬೈಲ್ ಹಾಗೂ 68 ಸಾವಿರ ರೂಪಾಯಿ ನಗದು ಕಳವು ಮಾಡಿದ್ದರು.

ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು, ಆರೋಪಿ ಕಾರಟಗಿಯ ಯಮನೂರ ಬಾಲಪ್ಪ ಜೀರಾಳ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 63 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Intro:Body:ಕೊಪ್ಪಳ:- ಮನೆಯಲ್ಲಿನ‌ ನಗ ನಾಣ್ಯ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾರಟಗಿ ಪೊಲೀಸರು ಬಂಧಿಸಿದ್ದಾರೆ. ಯಮನೂರ ಬಾಲಪ್ಪ ಜೀರಾಳ ಬಂಧಿತ ಆರೋಪಿ.
ಜಿಲ್ಲೆಯ ಕಾರಟಗಿ ಪಟ್ಟಣದ ಸಾಲೋಣಿ ಓಣಿಯಲ್ಲಿ ಮಲ್ಲಪ್ಪ ಕೇಲೂರು ಎಂಬುವವರ ಮನೆ ಬೀಗ ಮುರಿದು 23 ಗ್ರಾಂ ಬಂಗಾರದ ಹಾಗೂ 40 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳುವು ಮಾಡಲಾಗಿತ್ತು. ಇನ್ನು ವೀರೇಶಗೌಡ ಎಂಬುವವರ ಮನೆಯ ಬೀಗ ಮುರಿದು 50 ಗ್ರಾಂ ಚಿನ್ನದ ಆಭರಣ, ಒಂದು ಮೊಬೈಲ್ ಹಾಗೂ 68 ಸಾವಿರ ರುಪಾಯಿ ನಗದು ಕಳುವಾಗಿತ್ತು. ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣಗಳ ಕುರಿತು ತನಿಖೆ ನಡೆಸಿದಾಗ ಎರಡೂ ಮನೆಗಳಲ್ಲಿ ಕಳ್ಳತನ ಮಾಡಿದ್ದ ಕಾರಟಗಿಯ ಯಮನೂರ ಬಾಲಪ್ಪ ಜೀರಾಳ ಎಂಬಾತನನ್ನು ಬಂಧಿಸಿ ಆರೋಪಿಯಿಂದ 63 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.