ETV Bharat / state

ಬೆಳೆ ಸಮೀಕ್ಷೆ ಯೋಜನೆಯನ್ನು ಕೃಷಿ ಉತ್ಸವದಂತೆ ಆಚರಿಸಿ: ರೈತರಿಗೆ ತಹಶೀಲ್ದಾರ್​ ಕರೆ

author img

By

Published : Aug 14, 2020, 9:05 PM IST

ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್​ನ್ನು ಸರ್ಕಾರ ಪರಿಚಯಿಸಿದ್ದು, ಕುಷ್ಟಗಿ ತಾಲೂಕಿನ ರೈತರೆಲ್ಲರೂ ಈ ಸರ್ವೇಗೆ ಸಾಥ್​ ನೀಡಿ, ಈ ತಿಂಗಳ 24ರ ಒಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು ಎಂದು ತಹಶೀಲ್ದಾರ್​​ ಎಂ.ಸಿದ್ದೇಶ್​ ಹೇಳಿದ್ದಾರೆ.

Tehsidar Calls up
ಸಭೆಯಲ್ಲಿ ರೈತರಿಗೆ ಮಾಹಿತಿ ನೀಡಿದ ತಹಶೀಲ್ದಾರ್​

ಕುಷ್ಟಗಿ: 2020-21ನೇ ಸಾಲಿನ ಸ್ವಯಂ ಬೆಳೆ ಸಮೀಕ್ಷೆ ಯೋಜನೆಯನ್ನು ಕೃಷಿ ಉತ್ಸವದಂತೆ ನಿರ್ವಹಿಸಬೇಕೆಂದು ತಹಶೀಲ್ದಾರ ಎಂ.ಸಿದ್ದೇಶ್​​ ತಾಲೂಕಿನ ರೈತರಿಗೆ ಕರೆ ನೀಡಿದ್ಧಾರೆ.

ಸಭೆಯಲ್ಲಿ ರೈತರಿಗೆ ಮಾಹಿತಿ ನೀಡಿದ ತಹಶೀಲ್ದಾರ್​

ನಗರದ ತಹಶೀಲ್ದಾರ ಕಚೇರಿಯಲ್ಲಿ ವಿಶಿಷ್ಟ ತಂತ್ರಾಂಶದ ಆ್ಯಪ್ ಮೂಲಕ ಸ್ವಯಂ ಬೆಳೆ ಸಮೀಕ್ಷೆ ಕಾರ್ಯ ನಿರ್ವಹಣೆ ಸಭೆಯಲ್ಲಿ ಫಾರ್ಮರ್ ಕ್ರಾಪ್ ಆ್ಯಪ್ ಸಮೀಕ್ಷೆ ಕುರಿತು ಮಾಹಿತಿ ನೀಡಿದರು. ಈ ಹಿಂದಿನ ಸಮೀಕ್ಷೆಗಳು ಇಲಾಖಾ ಅಧಿಕಾರಿಗಳಿಂದ ಕೇಂದ್ರೀಕೃತವಾಗಿದ್ದವು, ಆದರೆ ಈ ವಿಶಿಷ್ಟ ತಂತ್ರಾಂಶದ ಆ್ಯಪ್ ರೈತರಿಂದ ಕೇಂದ್ರೀಕೃತವಾಗಿದೆ. ಈ ಕಾರ್ಯವನ್ನು ನೀವು ಉತ್ಸವದ ರೀತಿಯಲ್ಲಿ ನಿರ್ವಹಿಸಬೇಕಿದೆ. ಇದಕ್ಕೆ ಕಂದಾಯ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಮಾರ್ಗದರ್ಶಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.

ಈ ಸಮೀಕ್ಷಾ ಕಾರ್ಯದಲ್ಲಿ ಎಲ್ಲಾ ರೈತ ಬಾಂಧವರು ತಮ್ಮನ್ನು ತಾವು ತೊಡಗಿಸಿಕೊಂಡು ಸಹಕಾರ ನೀಡಬೇಕಿದೆ. ಈ ಸರ್ವೇಗೆ ರೈತರ ಬಳಿಯೇ ಆ್ಯಂಡ್ರಾಯ್ಡ್​​ ಮೊಬೈಲ್​​ ಫೋನ್​ ಇರಬೇಕು ಎಂಬುದಿಲ್ಲ, ತಮ್ಮ ಮನೆಯಲ್ಲಿ ಯಾರ ಬಳಿ ಈ ಮೊಬೈಲ್​ ಇದ್ದರೂ ಸಹ ಅದರಿಂದ ಸಮೀಕ್ಷಾ ವಿವರ ದಾಖಲಿಸಬಹುದು. ಈ ತಿಂಗಳ 24ರೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಸರ್ಕಾರ ಸೂಚಿಸಿದ್ದು, ಆ.24ರ ನಂತರ ಉಳಿದವರ ಸಮೀಕ್ಷಾ ಕಾರ್ಯವನ್ನು ನಿಯೋಜಿಸಿ ಪಿಆರ್​​ಸಿ ಹಾಗೂ ಇಲಾಖಾ ಅಧಿಕಾರಿಗಳ ಮೂಲಕ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕುಷ್ಟಗಿ: 2020-21ನೇ ಸಾಲಿನ ಸ್ವಯಂ ಬೆಳೆ ಸಮೀಕ್ಷೆ ಯೋಜನೆಯನ್ನು ಕೃಷಿ ಉತ್ಸವದಂತೆ ನಿರ್ವಹಿಸಬೇಕೆಂದು ತಹಶೀಲ್ದಾರ ಎಂ.ಸಿದ್ದೇಶ್​​ ತಾಲೂಕಿನ ರೈತರಿಗೆ ಕರೆ ನೀಡಿದ್ಧಾರೆ.

ಸಭೆಯಲ್ಲಿ ರೈತರಿಗೆ ಮಾಹಿತಿ ನೀಡಿದ ತಹಶೀಲ್ದಾರ್​

ನಗರದ ತಹಶೀಲ್ದಾರ ಕಚೇರಿಯಲ್ಲಿ ವಿಶಿಷ್ಟ ತಂತ್ರಾಂಶದ ಆ್ಯಪ್ ಮೂಲಕ ಸ್ವಯಂ ಬೆಳೆ ಸಮೀಕ್ಷೆ ಕಾರ್ಯ ನಿರ್ವಹಣೆ ಸಭೆಯಲ್ಲಿ ಫಾರ್ಮರ್ ಕ್ರಾಪ್ ಆ್ಯಪ್ ಸಮೀಕ್ಷೆ ಕುರಿತು ಮಾಹಿತಿ ನೀಡಿದರು. ಈ ಹಿಂದಿನ ಸಮೀಕ್ಷೆಗಳು ಇಲಾಖಾ ಅಧಿಕಾರಿಗಳಿಂದ ಕೇಂದ್ರೀಕೃತವಾಗಿದ್ದವು, ಆದರೆ ಈ ವಿಶಿಷ್ಟ ತಂತ್ರಾಂಶದ ಆ್ಯಪ್ ರೈತರಿಂದ ಕೇಂದ್ರೀಕೃತವಾಗಿದೆ. ಈ ಕಾರ್ಯವನ್ನು ನೀವು ಉತ್ಸವದ ರೀತಿಯಲ್ಲಿ ನಿರ್ವಹಿಸಬೇಕಿದೆ. ಇದಕ್ಕೆ ಕಂದಾಯ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಮಾರ್ಗದರ್ಶಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.

ಈ ಸಮೀಕ್ಷಾ ಕಾರ್ಯದಲ್ಲಿ ಎಲ್ಲಾ ರೈತ ಬಾಂಧವರು ತಮ್ಮನ್ನು ತಾವು ತೊಡಗಿಸಿಕೊಂಡು ಸಹಕಾರ ನೀಡಬೇಕಿದೆ. ಈ ಸರ್ವೇಗೆ ರೈತರ ಬಳಿಯೇ ಆ್ಯಂಡ್ರಾಯ್ಡ್​​ ಮೊಬೈಲ್​​ ಫೋನ್​ ಇರಬೇಕು ಎಂಬುದಿಲ್ಲ, ತಮ್ಮ ಮನೆಯಲ್ಲಿ ಯಾರ ಬಳಿ ಈ ಮೊಬೈಲ್​ ಇದ್ದರೂ ಸಹ ಅದರಿಂದ ಸಮೀಕ್ಷಾ ವಿವರ ದಾಖಲಿಸಬಹುದು. ಈ ತಿಂಗಳ 24ರೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಸರ್ಕಾರ ಸೂಚಿಸಿದ್ದು, ಆ.24ರ ನಂತರ ಉಳಿದವರ ಸಮೀಕ್ಷಾ ಕಾರ್ಯವನ್ನು ನಿಯೋಜಿಸಿ ಪಿಆರ್​​ಸಿ ಹಾಗೂ ಇಲಾಖಾ ಅಧಿಕಾರಿಗಳ ಮೂಲಕ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.