ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಗೌಡಪ್ಪ ಚಹಾ ಅಂಗಡಿಯ ಮಾಲೀಕ ಮಹಾಂತಗೌಡ ಸಂಗನಗೌಡ ಮಾಲಿಪಾಟೀಲ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮ ಮಂದಿರ ಸಮರ್ಪಣಾ ನಿಧಿಗೆ 10ಸಾವಿರ ರೂ. ನೀಡಿದ್ದಾರೆ.
![Ram mandir](https://etvbharatimages.akamaized.net/etvbharat/prod-images/kn-kst-01-20-rama-mandir-kushtagi-kac10028_20012021045455_2001f_1611098695_837.jpg)
ಪಟ್ಟಣದ 15ನೇ ವಾರ್ಡಿನ ಗಾಂಧಿ ನಗರದ ನಿವಾಸಿ ಮಹಾಂತಗೌಡ ಸಂಗನಗೌಡ ಮಾಲಿಪಾಟೀಲ ಅವರು, ಕುಷ್ಟಗಿಯ ಕೊಪ್ಪಳ ರಸ್ತೆಯಲ್ಲಿ ಚಿಕ್ಕ ಚಹಾದ ಅಂಗಡಿ ಇಟ್ಟುಕೊಂಡಿದ್ದಾರೆ.
ಶ್ರೀರಾಮ ಭಕ್ತನಾಗಿರುವ ಮಹಾಂತಗೌಡ ರಾಮ ಮಂದಿರಕ್ಕೆ 10 ಸಾವಿರ ರೂ.ಗಳ ಅಳಿಲು ಸೇವೆ ಸಲ್ಲಿಸಿ ಕುಷ್ಟಗಿ ತಾಲೂಕಿನಲ್ಲಿ ಗಮನಾರ್ಹ ಎನಿಸಿದ್ದಾರೆ.