ETV Bharat / state

ಪಿಆರ್​ಗಳ ಗೌರವ ಧನ ನೇರ ಅವರ ಖಾತೆಗೆ ಜಮೆ: ತಹಶೀಲ್ದಾರ್​ ಎಂ.ಸಿದ್ದೇಶ್

author img

By

Published : Aug 21, 2020, 10:35 PM IST

ಕುಷ್ಟಗಿ ತಹಶೀಲ್ದಾರ್​ ಕಚೇರಿಯಲ್ಲಿ ಸ್ವಯಂ ಬೆಳೆ ಸಮೀಕ್ಷೆಯ ತ್ವರಿತ ಕಾರ್ಯಕ್ಕೆ ನಿಯೋಜಿಸಿದ ಪಿಆರ್​ಗಳಿಗೆ ಮಾಹಿತಿ ಸಭೆ ನಡೆಸಲಾಯಿತು.

Self Crop Survey  meeting  In Kushtagi Tahsildar Office
ಪಿಆರ್​ಗಳ ಗೌರವ ಧನ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುವುದು: ತಹಶೀಲ್ದಾರ್​ ಎಂ.ಸಿದ್ದೇಶ್

ಕುಷ್ಟಗಿ (ಕೊಪ್ಪಳ): ಸ್ವಯಂ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರ ಸಹಾಯಕ್ಕೆ ನೆರವಾಗುವ ಪಿಆರ್​ಗಳಿಗೆ ನಿಗದಿಪಡಿಸಿರುವ ಗೌರವ ಧನವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ತಹಶೀಲ್ದಾರ್​ ಎಂ.ಸಿದ್ದೇಶ್ ತಿಳಿಸಿದ್ದಾರೆ.

ಪಿಆರ್​ಗಳ ಗೌರವ ಧನ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುವುದು: ತಹಶೀಲ್ದಾರ್​ ಎಂ.ಸಿದ್ದೇಶ್

ತಹಶೀಲ್ದಾರ್​ ಕಚೇರಿಯಲ್ಲಿ ಸ್ವಯಂ ಬೆಳೆ ಸಮೀಕ್ಷೆಯ ತ್ವರಿತ ಕಾರ್ಯಕ್ಕೆ ನಿಯೋಜಿಸಿದ ಪಿಆರ್​ಗಳಿಗೆ ಮಾಹಿತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಪಿಆರ್​ಗಳಿಗೆ 400 ಪ್ಲಾಟ್ ನಿಗದಿಯಾಗಿದೆ. ಪ್ಲಾಟ್​ಗೆ ನಿಗದಿಪಡಿಸಿದ ಗೌರವಧನವನ್ನು ನೇರವಾಗಿ ಪಿಆರ್​ಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ಪಿಆರ್​ಗಳು ರೈತರಿಗೆ ಸ್ವಯಂ ಬೆಳೆ ಸಮೀಕ್ಷೆಯಿಂದಾಗುವ ಲಾಭಗಳ ಕುರಿತು ಮಾಹಿತಿ ನೀಡಬೇಕು. ರೈತರಿಗೆ ಮೊಬೈಲ್ ಆ್ಯಪ್ ಡೌನಲೋಡ್, ಮಿಶ್ರ ಬೆಳೆಯ ಗೊಂದಲ ಸರಿಪಡಿಸಿದರೆ ಈ ಮುಂಗಾರಿನ ಈ ಟಾಸ್ಕ್ ಕೊನೆಗೊಳ್ಳಲಿದೆ.

ತಾಲೂಕಿನಲ್ಲಿ1 ಲಕ್ಷದ 5 ಸಾವಿರ ಪ್ಲಾಟ್​ಗಳಿದ್ದು, ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಿಆರ್​ಗಳು ಮನಸ್ಸು ಮಾಡಿದರೆ ವಾರದಲ್ಲಿ ಪೂರ್ಣಗೊಳಿಸುವ ಸಾದ್ಯತೆಗಳಿವೆ. ಗಣೇಶ ಹಬ್ಬದ ರಜೆಗೆ ಬಂದಿರುವವರು ಗಣೇಶೋತ್ಸವ ಆಚರಿಸುವ ಜೊತೆಗೆ ಬೆಳೆ ಸಮೀಕ್ಷೆಯ ಉತ್ಸವ ಆಚರಿಸಬೇಕೆಂದು ಕರೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಅವರು, ಕುಷ್ಟಗಿ ತಾಲೂಕಿನಲ್ಲಿ 8 ಸಾವಿರ ಪ್ಲಾಟ್​ಗಳ ಸಮೀಕ್ಷೆ ನಡೆಸಲಾಗಿದೆ ಎಂದರು.

ಕುಷ್ಟಗಿ (ಕೊಪ್ಪಳ): ಸ್ವಯಂ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರ ಸಹಾಯಕ್ಕೆ ನೆರವಾಗುವ ಪಿಆರ್​ಗಳಿಗೆ ನಿಗದಿಪಡಿಸಿರುವ ಗೌರವ ಧನವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ತಹಶೀಲ್ದಾರ್​ ಎಂ.ಸಿದ್ದೇಶ್ ತಿಳಿಸಿದ್ದಾರೆ.

ಪಿಆರ್​ಗಳ ಗೌರವ ಧನ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುವುದು: ತಹಶೀಲ್ದಾರ್​ ಎಂ.ಸಿದ್ದೇಶ್

ತಹಶೀಲ್ದಾರ್​ ಕಚೇರಿಯಲ್ಲಿ ಸ್ವಯಂ ಬೆಳೆ ಸಮೀಕ್ಷೆಯ ತ್ವರಿತ ಕಾರ್ಯಕ್ಕೆ ನಿಯೋಜಿಸಿದ ಪಿಆರ್​ಗಳಿಗೆ ಮಾಹಿತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಪಿಆರ್​ಗಳಿಗೆ 400 ಪ್ಲಾಟ್ ನಿಗದಿಯಾಗಿದೆ. ಪ್ಲಾಟ್​ಗೆ ನಿಗದಿಪಡಿಸಿದ ಗೌರವಧನವನ್ನು ನೇರವಾಗಿ ಪಿಆರ್​ಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ಪಿಆರ್​ಗಳು ರೈತರಿಗೆ ಸ್ವಯಂ ಬೆಳೆ ಸಮೀಕ್ಷೆಯಿಂದಾಗುವ ಲಾಭಗಳ ಕುರಿತು ಮಾಹಿತಿ ನೀಡಬೇಕು. ರೈತರಿಗೆ ಮೊಬೈಲ್ ಆ್ಯಪ್ ಡೌನಲೋಡ್, ಮಿಶ್ರ ಬೆಳೆಯ ಗೊಂದಲ ಸರಿಪಡಿಸಿದರೆ ಈ ಮುಂಗಾರಿನ ಈ ಟಾಸ್ಕ್ ಕೊನೆಗೊಳ್ಳಲಿದೆ.

ತಾಲೂಕಿನಲ್ಲಿ1 ಲಕ್ಷದ 5 ಸಾವಿರ ಪ್ಲಾಟ್​ಗಳಿದ್ದು, ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಿಆರ್​ಗಳು ಮನಸ್ಸು ಮಾಡಿದರೆ ವಾರದಲ್ಲಿ ಪೂರ್ಣಗೊಳಿಸುವ ಸಾದ್ಯತೆಗಳಿವೆ. ಗಣೇಶ ಹಬ್ಬದ ರಜೆಗೆ ಬಂದಿರುವವರು ಗಣೇಶೋತ್ಸವ ಆಚರಿಸುವ ಜೊತೆಗೆ ಬೆಳೆ ಸಮೀಕ್ಷೆಯ ಉತ್ಸವ ಆಚರಿಸಬೇಕೆಂದು ಕರೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಅವರು, ಕುಷ್ಟಗಿ ತಾಲೂಕಿನಲ್ಲಿ 8 ಸಾವಿರ ಪ್ಲಾಟ್​ಗಳ ಸಮೀಕ್ಷೆ ನಡೆಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.