ETV Bharat / state

34 ದಿನಗಳ ಕ್ವಾರಂಟೈನ್​ ಮುಗಿಸಿ ತವರಿನತ್ತ ಪ್ರಯಾಣ ಬೆಳೆಸಿದ ರಾಜಸ್ಥಾನಿಗಳು

author img

By

Published : May 4, 2020, 8:50 AM IST

ಲಾಕಡೌನ್ ಹಿನ್ನೆಲೆಯಲ್ಲಿ, ಕಳೆದ ಮಾರ್ಚ್​ 31 ಕಳೆದ 34 ದಿನಗಳಿಂದ ಕುಷ್ಟಗಿಯಲ್ಲಿ ಕ್ವಾರಂಟೈನ್ ಆಗಿದ್ದ ರಾಜಸ್ಥಾನ ಮೂಲದ 24 ವಲಸೆ ಕಾರ್ಮಿಕರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕದಿಂದ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಅವರು ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ.

Rajasthanis traveled to their hometown after completing 34 days of quarantine
34 ದಿನಗಳ ಕ್ವಾರಂಟೈನ್​ ಮುಗಿಸಿ ತವರೂರಿನತ್ತ ಪ್ರಯಾಣ ಬೆಳೆಸಿದ ರಾಜಸ್ಥಾನಿಗಳು

ಕೊಪ್ಪಳ: ಕಳೆದ 34 ದಿನಗಳಿಂದ ಕುಷ್ಟಗಿಯಲ್ಲಿ ಕ್ವಾರಂಟೈನ್ ಆಗಿದ್ದ ರಾಜಸ್ಥಾನ ಮೂಲದ 24 ವಲಸೆ ಕಾರ್ಮಿಕರು ಭಾನುವಾರ ತಮ್ಮ ತವರೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಲಾಕ್​ ಡೌನ್ ಹಿನ್ನೆಲೆಯಲ್ಲಿ, ಕಳೆದ ಮಾರ್ಚ್​ 31ರಂದು ಇಲ್ಲಿನ ಕುಷ್ಟಗಿಯ ಕ್ಯಾದಿಗುಪ್ಪ ಕ್ರಾಸ್​ನಲ್ಲಿ ಸಿಲುಕಿದ್ದ 108 ಜನರನ್ನ ಪರಿಶಿಷ್ಟ ಜಾತಿ ವಸತಿ ನಿಲಯದಲ್ಲಿ ಕ್ವಾರಂಟೈನ್​ಲ್ಲಿಟ್ಟು ಊಟ, ಆರೋಗ್ಯ, ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅವರನ್ನ ಊರಿಗೆ ಮರಳಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕದ ಬಸ್ ವ್ಯವಸ್ಥೆ ಕಲ್ಪಿಸಿದ್ದು, ರಾಜಸ್ಥಾನದ 24 ಜನರ ಮೊದಲ ತಂಡ ನಿನ್ನೆ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಬಸ್ ಹೊರಡುವ ಮುನ್ನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ತಹಶೀಲ್ದಾರ್​ ಎಂ.ಸಿದ್ದೇಶ್​ ಮೊದಲ ತಂಡವನ್ನ ಬೀಳ್ಕೊಟ್ಟರು.

ಶಾಸಕ ಅಮರೇಗೌಡ ಅವರು, ರಾಜಸ್ಥಾನದ ಜನರನ್ನ ಅವರ ರಾಜ್ಯಕ್ಕೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯನ್ನ ನಮ್ಮ ಸಾರಿಗೆ ಇಲಾಖೆ ಸಿಬ್ಬಂದಿಗೆ ವಹಿಸಿದ್ದಾರೆ. ರಾಜಸ್ಥಾನಕ್ಕೆ ತಲುಪಲು 3 ರಿಂದ 4 ದಿನ ಹಿಡಿಯಲಿದೆ. ಇನ್ನುಳಿದ ಮಧ್ಯಪ್ರದೇಶದ 74 ಜನರನ್ನ ಆ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತ್ಯೇಕ ಮೂರು ಬಸ್​ಗಳಲ್ಲಿ ಮಂಗಳವಾರ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.

ಕೊಪ್ಪಳ: ಕಳೆದ 34 ದಿನಗಳಿಂದ ಕುಷ್ಟಗಿಯಲ್ಲಿ ಕ್ವಾರಂಟೈನ್ ಆಗಿದ್ದ ರಾಜಸ್ಥಾನ ಮೂಲದ 24 ವಲಸೆ ಕಾರ್ಮಿಕರು ಭಾನುವಾರ ತಮ್ಮ ತವರೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಲಾಕ್​ ಡೌನ್ ಹಿನ್ನೆಲೆಯಲ್ಲಿ, ಕಳೆದ ಮಾರ್ಚ್​ 31ರಂದು ಇಲ್ಲಿನ ಕುಷ್ಟಗಿಯ ಕ್ಯಾದಿಗುಪ್ಪ ಕ್ರಾಸ್​ನಲ್ಲಿ ಸಿಲುಕಿದ್ದ 108 ಜನರನ್ನ ಪರಿಶಿಷ್ಟ ಜಾತಿ ವಸತಿ ನಿಲಯದಲ್ಲಿ ಕ್ವಾರಂಟೈನ್​ಲ್ಲಿಟ್ಟು ಊಟ, ಆರೋಗ್ಯ, ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅವರನ್ನ ಊರಿಗೆ ಮರಳಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕದ ಬಸ್ ವ್ಯವಸ್ಥೆ ಕಲ್ಪಿಸಿದ್ದು, ರಾಜಸ್ಥಾನದ 24 ಜನರ ಮೊದಲ ತಂಡ ನಿನ್ನೆ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಬಸ್ ಹೊರಡುವ ಮುನ್ನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ತಹಶೀಲ್ದಾರ್​ ಎಂ.ಸಿದ್ದೇಶ್​ ಮೊದಲ ತಂಡವನ್ನ ಬೀಳ್ಕೊಟ್ಟರು.

ಶಾಸಕ ಅಮರೇಗೌಡ ಅವರು, ರಾಜಸ್ಥಾನದ ಜನರನ್ನ ಅವರ ರಾಜ್ಯಕ್ಕೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯನ್ನ ನಮ್ಮ ಸಾರಿಗೆ ಇಲಾಖೆ ಸಿಬ್ಬಂದಿಗೆ ವಹಿಸಿದ್ದಾರೆ. ರಾಜಸ್ಥಾನಕ್ಕೆ ತಲುಪಲು 3 ರಿಂದ 4 ದಿನ ಹಿಡಿಯಲಿದೆ. ಇನ್ನುಳಿದ ಮಧ್ಯಪ್ರದೇಶದ 74 ಜನರನ್ನ ಆ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತ್ಯೇಕ ಮೂರು ಬಸ್​ಗಳಲ್ಲಿ ಮಂಗಳವಾರ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.