ETV Bharat / state

ಉದ್ಯಾನ ಒತ್ತುವರಿ: ಡಿಸಿಗೆ ಮನವಿ ಸಲ್ಲಿಸಿ ತೆರವಿಗೆ ಒತ್ತಾಯಿಸಿದ ಸದಸ್ಯೆ

author img

By

Published : Jan 13, 2021, 7:10 PM IST

ನಗರದಲ್ಲಿ ಉದ್ಯಾನ ಜಾಗವನ್ನು ರಾಜಕೀಯ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಮಾಡುವಂತೆ ಒತ್ತಾಯಿಸಿ ಡಿಸಿಗೆ ವಾರ್ಡ್ ಸದಸ್ಯೆ ಮನವಿ ಸಲ್ಲಿಸಿದ್ದಾರೆ.

Sucheta sirigeri
ಸುಚೇತಾ ಸಿರಿಗೇರಿ

ಗಂಗಾವತಿ: ಸಾರ್ವಜನಿಕ ಉಪಯೋಗಕ್ಕೆ ಎಂದು ಮೀಸಲಾಗಿದ್ದ ಉದ್ಯಾನದ ಜಾಗವನ್ನು ರಾಜಕೀಯ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಮಾಡುವಂತೆ ವಾರ್ಡ್ ಸದಸ್ಯೆಯೊಬ್ಬರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.

ವಾರ್ಡ್ ಸದಸ್ಯೆ ಸುಚೇತಾ ಸಿರಿಗೇರಿ

ಇಲ್ಲಿನ ವಿವೇಕಾನಂದ ಕಾಲೋನಿಗೆ ಪ್ರವೇಶಿಸುವ ಸಂದರ್ಭದಲ್ಲಿ ಬಲ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನಕ್ಕೆ ಮೀಸಲಾದ ಜಾಗವನ್ನು ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ ಎಂದು ವಾರ್ಡ್ ಸದಸ್ಯೆ ಸುಚೇತಾ ಸಿರಿಗೇರಿ ಆರೋಪಿಸಿದ್ದಾರೆ.

letter
ಮನವಿ ಪತ್ರ

ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕೋಟ್ಯಂತರ ಬೆಲೆ ಬಾಳುವ ಜಾಗ ಒತ್ತುವರಿಯಾಗುತ್ತದೆ. ಇದಕ್ಕೆ ನಗರಸಭೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಲೇ ಸಾರ್ವಜನಿಕ ಸ್ಥಳ ಒತ್ತುವರಿಯಾಗಲಿದೆ ಎಂದು ಸುಚೇತಾ ವಿವರಣೆ ನೀಡಿದರು.

ಗಂಗಾವತಿ: ಸಾರ್ವಜನಿಕ ಉಪಯೋಗಕ್ಕೆ ಎಂದು ಮೀಸಲಾಗಿದ್ದ ಉದ್ಯಾನದ ಜಾಗವನ್ನು ರಾಜಕೀಯ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಮಾಡುವಂತೆ ವಾರ್ಡ್ ಸದಸ್ಯೆಯೊಬ್ಬರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.

ವಾರ್ಡ್ ಸದಸ್ಯೆ ಸುಚೇತಾ ಸಿರಿಗೇರಿ

ಇಲ್ಲಿನ ವಿವೇಕಾನಂದ ಕಾಲೋನಿಗೆ ಪ್ರವೇಶಿಸುವ ಸಂದರ್ಭದಲ್ಲಿ ಬಲ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನಕ್ಕೆ ಮೀಸಲಾದ ಜಾಗವನ್ನು ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ ಎಂದು ವಾರ್ಡ್ ಸದಸ್ಯೆ ಸುಚೇತಾ ಸಿರಿಗೇರಿ ಆರೋಪಿಸಿದ್ದಾರೆ.

letter
ಮನವಿ ಪತ್ರ

ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕೋಟ್ಯಂತರ ಬೆಲೆ ಬಾಳುವ ಜಾಗ ಒತ್ತುವರಿಯಾಗುತ್ತದೆ. ಇದಕ್ಕೆ ನಗರಸಭೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಲೇ ಸಾರ್ವಜನಿಕ ಸ್ಥಳ ಒತ್ತುವರಿಯಾಗಲಿದೆ ಎಂದು ಸುಚೇತಾ ವಿವರಣೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.