ಗಂಗಾವತಿ (ಕೊಪ್ಪಳ) : ರಾಜ್ಯದಲ್ಲಿ ಮೊದಲ ಹೈಟೆಕ್ ತೋಟಗಾರಿಕಾ ಪ್ರದೇಶ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಎಂದು ಕೋರಿ ರಾಜ್ಯ ಸರ್ಕಾರಕ್ಕೆ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇಲ್ಲಿನ 140 ಎಕರೆಯಲ್ಲಿ ಈ ಉದ್ಯಾನವನ ನಿರ್ಮಾಣವಾಗಲು 100 ಕೋಟಿ ರೂಪಾಯಿ ಅಗತ್ಯವಿದೆ. ಒಂದೊಮ್ಮೆ ತೋಟಗಾರಿಕಾ ಉದ್ಯಾನ ಸ್ಥಾಪನೆಯಾದ್ರೆ ಸಾಕಷ್ಟು ಅನುಕೂಲವಾಗಲಿದೆ. ಒಣ ಬೇಸಾಯ ಆಧಾರಿತ ಕನಕಗಿರಿ ಕ್ಷೇತ್ರದಲ್ಲಿ ತೋಟಗಾರಿಕೆ ಉದ್ಯಾನವ ನಿರ್ಮಾಣವಾದ್ರೆ ಸಹಜವಾಗಿ ಈ ಭಾಗದ ಕೃಷಿ ಮತ್ತು ತೋಟಗಾರಿಕೆ ವಲಯ ಅಭಿವೃದ್ಧಿಯಾಗಲಿದೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಕೊಡಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ಒಣ ಬೇಸಾಯ ಆಧಾರಿತ ಕನಕಗಿರಿ ಕ್ಷೇತ್ರದಲ್ಲಿ ತೋಟಗಾರಿಕೆ ಉದ್ಯಾನವನ ನಿರ್ಮಾಣವಾದ್ರೆ ಸಹಜವಾಗಿ ಈ ಭಾಗದ ಕೃಷಿ ಮತ್ತು ತೋಟಗಾರಿಕೆ ವಲಯ ಅಭಿವೃದ್ಧಿಯಾಗಲಿದೆ. ಹಿಂದುಳಿದ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಕೊಡಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.