ETV Bharat / state

ಕುಷ್ಟಗಿಯಲ್ಲಿ ಬ್ಯಾಂಕ್ ಮುಂದೆ ಜನಜಂಗುಳಿ: ಸಾಮಾಜಿಕ ಅಂತರ ಮರೆತ ಜನ

author img

By

Published : May 11, 2020, 8:49 PM IST

ಕೊರೊನಾ ಭೀತಿ ಹಿನ್ನೆಲೆ ಪ್ರತಿಯೊಂದು ಸ್ಥಳದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಆದರೆ ಲಾಕ್​ಡೌನ್​​ ಸಡಿಲಿಕೆಯಾದ ಬಳಿಕ ಹಲವು ಕಡೆ ಈ ನಿಯಮವನ್ನು ಉಲ್ಲಂಘಿಸುತ್ತಿರುವ ಘಟನೆ ವರದಿಯಗುತ್ತಿದೆ.

people violate the rule of Social distance in Kustagi
ಕುಷ್ಟಗಿಯ ಬ್ಯಾಂಕ್ ಮುಂದೆ ಜನವೋ ಜನ: ಕೇಳೋರೆ ಇಲ್ಲ ಸಾಮಾಜಿಕ ಅಂತರ

ಕುಷ್ಟಗಿ(ಕೊಪ್ಪಳ): ಜಿಲ್ಲೆ ಸದ್ಯ ಗ್ರೀನ್​ ಝೋನ್​​​​ನಲ್ಲಿದ್ದು, ಲಾಕ್​​ಡೌನ್ ಸಡಿಲಿಕೆಯಿಂದ ಜನತೆಯಲ್ಲಿ ಕೊರೊನಾ ವೈರಸ್ ಭೀತಿ ಮಾಯವಾದಂತಿದೆ. ಈ ನಡುವೆ ಜಿಲ್ಲೆಯ ಹಲವೆಡೆ ಸಾಮಾಜಿಕ ಅಂತರ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.

ಸರ್ಕಾರ ಸಾಮಾಜಿಕ ಅಂತರದ ಬಗ್ಗೆ ಎಷ್ಟೇ ತಿಳಿ ಹೇಳಿದರೂ ನಿಯಮ ಗಾಳಿಗೆ ತೂರಿ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಜನ ತೊಡಗಿದ್ದಾರೆ. ನಗರದ ಎಸ್​​ಬಿಐ ಬ್ಯಾಂಕ್​​ ಬಳಿ ಜನರು ಸಾಮಾಜಿಕ ಅಂತರ ಮರೆತು ನೂಕುನುಗ್ಗಲಿನಲ್ಲಿ ತಮ್ಮ ಕೆಲಸಕ್ಕೆ ಮುಗಿಬಿದ್ದ ಘಟನೆ ನಡೆದಿದೆ. ಬ್ಯಾಂಕ್​ ಹೊರ ಭಾಗ ಚೌಕಾಕಾರದ ಬಾಕ್ಸ್ ನಿರ್ಮಿಸಿದ್ದರು. ಅದನ್ನೂ ಯಾರೂ ಗಣನೆಗೆ ತೆಗೆದುಕೊಂಡಂತೆ ಕಾಣಿಸಲಿಲ್ಲ.

ಜನ್​ಧನ್​ ಖಾತೆ, ಹಣ ಜಮಾ ಮಾಡಲು, ಉಜ್ವಲ ಯೋಜನೆ ಫಲಾನುಭವಿಗಳು ಬ್ಯಾಂಕ್​​ ಮುಂದೆ ಸೇರಿದ್ದು, ಸಾಮಾಜಿಕ ಅಂತರ ಗಾಳಿಗೆ ತೂರಿದ್ದರೂ ಬ್ಯಾಂಕ್​​ ಸಿಬ್ಬಂದಿ ಮಾತ್ರ ಪ್ರಶ್ನಿಸದೆ ಸುಮ್ಮನಾಗಿದ್ದರು ಎನ್ನಲಾಗಿದೆ.

ಕುಷ್ಟಗಿ(ಕೊಪ್ಪಳ): ಜಿಲ್ಲೆ ಸದ್ಯ ಗ್ರೀನ್​ ಝೋನ್​​​​ನಲ್ಲಿದ್ದು, ಲಾಕ್​​ಡೌನ್ ಸಡಿಲಿಕೆಯಿಂದ ಜನತೆಯಲ್ಲಿ ಕೊರೊನಾ ವೈರಸ್ ಭೀತಿ ಮಾಯವಾದಂತಿದೆ. ಈ ನಡುವೆ ಜಿಲ್ಲೆಯ ಹಲವೆಡೆ ಸಾಮಾಜಿಕ ಅಂತರ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.

ಸರ್ಕಾರ ಸಾಮಾಜಿಕ ಅಂತರದ ಬಗ್ಗೆ ಎಷ್ಟೇ ತಿಳಿ ಹೇಳಿದರೂ ನಿಯಮ ಗಾಳಿಗೆ ತೂರಿ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಜನ ತೊಡಗಿದ್ದಾರೆ. ನಗರದ ಎಸ್​​ಬಿಐ ಬ್ಯಾಂಕ್​​ ಬಳಿ ಜನರು ಸಾಮಾಜಿಕ ಅಂತರ ಮರೆತು ನೂಕುನುಗ್ಗಲಿನಲ್ಲಿ ತಮ್ಮ ಕೆಲಸಕ್ಕೆ ಮುಗಿಬಿದ್ದ ಘಟನೆ ನಡೆದಿದೆ. ಬ್ಯಾಂಕ್​ ಹೊರ ಭಾಗ ಚೌಕಾಕಾರದ ಬಾಕ್ಸ್ ನಿರ್ಮಿಸಿದ್ದರು. ಅದನ್ನೂ ಯಾರೂ ಗಣನೆಗೆ ತೆಗೆದುಕೊಂಡಂತೆ ಕಾಣಿಸಲಿಲ್ಲ.

ಜನ್​ಧನ್​ ಖಾತೆ, ಹಣ ಜಮಾ ಮಾಡಲು, ಉಜ್ವಲ ಯೋಜನೆ ಫಲಾನುಭವಿಗಳು ಬ್ಯಾಂಕ್​​ ಮುಂದೆ ಸೇರಿದ್ದು, ಸಾಮಾಜಿಕ ಅಂತರ ಗಾಳಿಗೆ ತೂರಿದ್ದರೂ ಬ್ಯಾಂಕ್​​ ಸಿಬ್ಬಂದಿ ಮಾತ್ರ ಪ್ರಶ್ನಿಸದೆ ಸುಮ್ಮನಾಗಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.