ETV Bharat / state

ಗಂಗಾವತಿಯಲ್ಲಿ ಭತ್ತದ ಬೆಳೆ ಹಾನಿ: ಮಾಜಿ ಸಚಿವ ಶಿವರಾಜ ತಂಗಡಗಿ ಭೇಟಿ - Kanakagiri Assembly constituency

ಗಂಗಾವತಿ ತಾಲ್ಲೂಕಿನ ನಾನಾ ಭಾಗಗಳಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಗೆ ಭತ್ತದ ಗದ್ದೆಗಳಿಗೆ ಹಾನಿಯಾಗಿದ್ದು, ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

author img

By

Published : Apr 8, 2020, 9:21 AM IST

ಗಂಗಾವತಿ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಭತ್ತದ ಬೆಳೆ ನಾಶವಾಗಿದ್ದು, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Paddy Damage in Gangavathi
ಗಂಗಾವತಿ ಭತ್ತ ಹಾನಿ

ಗಂಗಾವತಿ ತಾಲೂಕಿನ ಹೇರೂರು, ಕೇಸರಹಟ್ಟಿ, ಮಸಾರಿಕ್ಯಾಂಪ್, ಗುಳದಳ್ಳಿ, ಕಲ್ಗುಡಿ ಸೇರಿದಂತೆ ಮರಳಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಸಂಚರಿಸಿ ರೈತರ ಹೊಲಕ್ಕೆ ಭೇಟಿ ನೀಡಿ ಭತ್ತದ ಬೆಳೆ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಇನ್ನೂ, ಈ ಬಗ್ಗೆ ಬಳಿಕ ಮಾತನಾಡಿದ ಅವರು, ಭತ್ತ ಹಾನಿ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಹಾನಿಗೀಡಾದ ರೈತರಿಗೆ ಆರ್ಥಿಕ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು. ಅಲ್ಲದೇ ಕಂದಾಯ, ಕೃಷಿ ಇಲಾಖೆಗಳ ಜಂಟಿ ಕಾರ್ಯಚರಣೆಗೆ ಒತ್ತಾಯಿಸಲಾಗುವುದು ಎಂದರು.

ಗಂಗಾವತಿ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಭತ್ತದ ಬೆಳೆ ನಾಶವಾಗಿದ್ದು, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Paddy Damage in Gangavathi
ಗಂಗಾವತಿ ಭತ್ತ ಹಾನಿ

ಗಂಗಾವತಿ ತಾಲೂಕಿನ ಹೇರೂರು, ಕೇಸರಹಟ್ಟಿ, ಮಸಾರಿಕ್ಯಾಂಪ್, ಗುಳದಳ್ಳಿ, ಕಲ್ಗುಡಿ ಸೇರಿದಂತೆ ಮರಳಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಸಂಚರಿಸಿ ರೈತರ ಹೊಲಕ್ಕೆ ಭೇಟಿ ನೀಡಿ ಭತ್ತದ ಬೆಳೆ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಇನ್ನೂ, ಈ ಬಗ್ಗೆ ಬಳಿಕ ಮಾತನಾಡಿದ ಅವರು, ಭತ್ತ ಹಾನಿ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಹಾನಿಗೀಡಾದ ರೈತರಿಗೆ ಆರ್ಥಿಕ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು. ಅಲ್ಲದೇ ಕಂದಾಯ, ಕೃಷಿ ಇಲಾಖೆಗಳ ಜಂಟಿ ಕಾರ್ಯಚರಣೆಗೆ ಒತ್ತಾಯಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.