ETV Bharat / state

ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಮನೆಗೆ ಹೊರಟಿದ್ದ ನವಜೋಡಿಗಳು: ಕೊಪ್ಪಳ ಪೊಲೀಸರು ಮಾಡಿದ್ದೇನು?

ತಮ್ಮ ಪತ್ನಿಯರನ್ನು ಕರೆದುಕೊಂಡು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಊರಿಗೆ ಹೊರಟಿದ್ದಾರೆ. ಕೂಡ್ಲಗಿಯ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿರುವ ಕಾರ್​​ನಲ್ಲಿ ನೂತನ ದಂಪತಿಗಳು ಸೇರಿ ಸುಮಾರು 7 ಜನರು ಮಸ್ಕಿ ತಾಲೂಕಿನ ಬಸಾಪುರಕ್ಕೆ ಹೊರಟಿದ್ದರು‌.

author img

By

Published : May 19, 2021, 3:50 PM IST

Updated : May 19, 2021, 4:46 PM IST

new-marrige-pair-of-government-car-abusers-in-koppal
ಸರ್ಕಾರಿ ಕಾರಿನಲ್ಲಿ ಬೀಗರ ಮನೆಗೆ ಹೊರಟಿದ್ದ ಜೋಡಿ

ಕೊಪ್ಪಳ: ಇತ್ತೀಚೆಗಷ್ಟೇ ಮದುವೆಯಾಗಿದ್ದ ನವಜೋಡಿಗಳು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಮನೆಗೆ ಹೋಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಸರ್ಕಾರಿ ಕಾರಿನಲ್ಲಿ ಬೀಗರ ಮನೆಗೆ ಹೊರಟಿದ್ದ ಜೋಡಿ

ಓದಿ: ಹಮಾಸ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೌಮ್ಯಾ ಸಂತೋಷ್ ಕುಟುಂಬಕ್ಕೆ ಕರೆ ಮಾಡಿದ ಇಸ್ರೇಲ್ ಅಧ್ಯಕ್ಷ ರುವೆನ್ ರಿವ್ಲಿನ್

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕೊಪ್ಪಳದಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದೆ. ಹೀಗಾಗಿ ಯಾವುದೇ ವಾಹನ ಓಡಾಡುವ ಹಾಗಿಲ್ಲ. ಆದರೆ ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದ ಬಸವರಾಜ ಹಾಗೂ ಮಾರುತಿ ಎಂಬ ಇಬ್ಬರು ಸಹೋದರರು ಐದು ದಿನಗಳ ಹಿಂದೆ ಮದುವೆಯಾಗಿದ್ದಾರೆ.

ತಮ್ಮ ಪತ್ನಿಯರನ್ನು ಕರೆದುಕೊಂಡು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಊರಿಗೆ ಹೊರಟಿದ್ದಾರೆ. ಕೂಡ್ಲಗಿಯ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿರುವ ಕಾರ್​​ನಲ್ಲಿ ನೂತನ ದಂಪತಿಗಳು ಸೇರಿ ಸುಮಾರು 7 ಜನರು ಮಸ್ಕಿ ತಾಲೂಕಿನ ಬಸಾಪುರಕ್ಕೆ ಹೊರಟಿದ್ದರು‌. ಕೊಪ್ಪಳದ ಗಡಿಯಾರ ಕಂಬ ಸರ್ಕಲ್​​ನಲ್ಲಿ ಕಾರು ಬರುತ್ತಿದ್ದಂತೆ ಪೊಲೀಸರು ತಪಾಸಣೆ ಮಾಡಿದ್ದಾರೆ.

ಸರ್ಕಾರಿ ನಾಮಫಲಕವಿದ್ದು, ಬಹಳ ಜನ ಇರುವುದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ತಪಾಸಣೆ ಮಾಡಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಮ್ಮನ್ನು ಬಿಟ್ಟುಬಿಡಿ ವಾಪಸ್ ಊರಿಗೆ ಹೋಗುತ್ತೇವೆ ಎಂದು ನೂತನ ವಧು-ವರರು ಕೇಳಿಕೊಂಡಿದ್ದು, ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಕೊಪ್ಪಳ: ಇತ್ತೀಚೆಗಷ್ಟೇ ಮದುವೆಯಾಗಿದ್ದ ನವಜೋಡಿಗಳು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಮನೆಗೆ ಹೋಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಸರ್ಕಾರಿ ಕಾರಿನಲ್ಲಿ ಬೀಗರ ಮನೆಗೆ ಹೊರಟಿದ್ದ ಜೋಡಿ

ಓದಿ: ಹಮಾಸ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೌಮ್ಯಾ ಸಂತೋಷ್ ಕುಟುಂಬಕ್ಕೆ ಕರೆ ಮಾಡಿದ ಇಸ್ರೇಲ್ ಅಧ್ಯಕ್ಷ ರುವೆನ್ ರಿವ್ಲಿನ್

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕೊಪ್ಪಳದಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದೆ. ಹೀಗಾಗಿ ಯಾವುದೇ ವಾಹನ ಓಡಾಡುವ ಹಾಗಿಲ್ಲ. ಆದರೆ ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದ ಬಸವರಾಜ ಹಾಗೂ ಮಾರುತಿ ಎಂಬ ಇಬ್ಬರು ಸಹೋದರರು ಐದು ದಿನಗಳ ಹಿಂದೆ ಮದುವೆಯಾಗಿದ್ದಾರೆ.

ತಮ್ಮ ಪತ್ನಿಯರನ್ನು ಕರೆದುಕೊಂಡು ಸರ್ಕಾರಿ ನಾಮಫಲಕದ ಕಾರಿನಲ್ಲಿ ಬೀಗರ ಊರಿಗೆ ಹೊರಟಿದ್ದಾರೆ. ಕೂಡ್ಲಗಿಯ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿರುವ ಕಾರ್​​ನಲ್ಲಿ ನೂತನ ದಂಪತಿಗಳು ಸೇರಿ ಸುಮಾರು 7 ಜನರು ಮಸ್ಕಿ ತಾಲೂಕಿನ ಬಸಾಪುರಕ್ಕೆ ಹೊರಟಿದ್ದರು‌. ಕೊಪ್ಪಳದ ಗಡಿಯಾರ ಕಂಬ ಸರ್ಕಲ್​​ನಲ್ಲಿ ಕಾರು ಬರುತ್ತಿದ್ದಂತೆ ಪೊಲೀಸರು ತಪಾಸಣೆ ಮಾಡಿದ್ದಾರೆ.

ಸರ್ಕಾರಿ ನಾಮಫಲಕವಿದ್ದು, ಬಹಳ ಜನ ಇರುವುದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ತಪಾಸಣೆ ಮಾಡಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಮ್ಮನ್ನು ಬಿಟ್ಟುಬಿಡಿ ವಾಪಸ್ ಊರಿಗೆ ಹೋಗುತ್ತೇವೆ ಎಂದು ನೂತನ ವಧು-ವರರು ಕೇಳಿಕೊಂಡಿದ್ದು, ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

Last Updated : May 19, 2021, 4:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.