ETV Bharat / state

ಪ್ರಕಾಶ್ ಕಂದಕೂರರ 'ಬೈಟ್ ಆಫ್ ಲವ್' ಛಾಯಾಚಿತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ - ಬೈಟ್ ಆಫ್ ಲವ್​ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

ಇತ್ತೀಚೆಗಷ್ಟೇ ಕೊಲ್ಕತ್ತಾದ ಗ್ರೀನ್ ಗೋ ಕ್ಲಬ್​ನಿಂದ 'ಪಿನ್ ಪಾಯಿಂಟ್-2021' ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ನಡೆಯಿತು. ಇದರಲ್ಲಿ 'ತಾಯಿ ಮತ್ತು ಮಗು' ವಿಭಾಗದಲ್ಲಿ ಪ್ರಕಾಶ ಕಂದಕೂರು ಅವರ ಬೈಟ್ ಆಫ್ ಲವ್ ಶೀರ್ಷಿಕೆಯ ಛಾಯಾಚಿತ್ರ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ.

ಬೈಟ್ ಆಫ್ ಲವ್
ಬೈಟ್ ಆಫ್ ಲವ್
author img

By

Published : Mar 5, 2021, 8:09 PM IST

ಕೊಪ್ಪಳ: ನಗರದ ಸೃಜನಶೀಲ ಛಾಯಾಗ್ರಾಹಕ ಪ್ರಕಾಶ್ ಕಂದಕೂರ ಅವರ ಛಾಯಾಚಿತ್ರ ರಾಷ್ಟ್ರಮಟ್ಟದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ.

ಇತ್ತೀಚೆಗಷ್ಟೇ ಕೊಲ್ಕತ್ತಾದ ಗ್ರೀನ್ ಗೋ ಕ್ಲಬ್​ನಿಂದ ಪಿನ್ ಪಾಯಿಂಟ್-2021 ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ನಡೆಯಿತು. ಇದರಲ್ಲಿ 'ತಾಯಿ ಮತ್ತು ಮಗು' ವಿಭಾಗದಲ್ಲಿ ಪ್ರಕಾಶ ಕಂದಕೂರು ಅವರ ಬೈಟ್ ಆಫ್ ಲವ್ ಶೀರ್ಷಿಕೆಯ ಛಾಯಾಚಿತ್ರ, ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ. ಅಲ್ಲದೆ, ವಿವಿಧ ವಿಭಾಗಗಳಲ್ಲಿ ಅವರ ಒಟ್ಟು ಏಳು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.

national-level-award-for-prakash-kandakurus-bite-of-love
ಛಾಯಾಗ್ರಾಹಕ ಪ್ರಕಾಶ್ ಕಂದಕೂರ

ದೇಶದ ವಿವಿಧ ರಾಜ್ಯಗಳ 245 ಜನ ಛಾಯಾಗ್ರಾಹಕರ 3,900ಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ಅಂತರಾಷ್ಟ್ರೀಯ ತೀರ್ಪುಗಾರರಾದ ಡಾ.ಬಿ.ಕೆ.ಸಿನ್ಹಾ, ಮಾನಸಿ ಚಟರ್ಜಿ, ಸುಬ್ರತ್ ಕುಮಾರ, ಸೌನಕ್ ಬ್ಯಾನರ್ಜಿ, ಸೌಗತ ಲಾಹಿರಿ, ಮಾನಸಿ ರಾಯ್, ಪಾರ್ಥ ಸಾರತಿ ಸರ್ಕಾರ, ಅಸೀಮ್ ಕುಮಾರ್ ಚೌದರಿ, ಶರ್ಮಾಲಿ ದಾಸ್ ಅವರು ಛಾಯಾಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಬರುವ ಏಪ್ರಿಲ್ 20 ರಂದು ಕೊಲ್ಕತ್ತಾದಲ್ಲಿ ಛಾಯಾಚಿತ್ರ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ.

ಕೊಪ್ಪಳ: ನಗರದ ಸೃಜನಶೀಲ ಛಾಯಾಗ್ರಾಹಕ ಪ್ರಕಾಶ್ ಕಂದಕೂರ ಅವರ ಛಾಯಾಚಿತ್ರ ರಾಷ್ಟ್ರಮಟ್ಟದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ.

ಇತ್ತೀಚೆಗಷ್ಟೇ ಕೊಲ್ಕತ್ತಾದ ಗ್ರೀನ್ ಗೋ ಕ್ಲಬ್​ನಿಂದ ಪಿನ್ ಪಾಯಿಂಟ್-2021 ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ ನಡೆಯಿತು. ಇದರಲ್ಲಿ 'ತಾಯಿ ಮತ್ತು ಮಗು' ವಿಭಾಗದಲ್ಲಿ ಪ್ರಕಾಶ ಕಂದಕೂರು ಅವರ ಬೈಟ್ ಆಫ್ ಲವ್ ಶೀರ್ಷಿಕೆಯ ಛಾಯಾಚಿತ್ರ, ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ. ಅಲ್ಲದೆ, ವಿವಿಧ ವಿಭಾಗಗಳಲ್ಲಿ ಅವರ ಒಟ್ಟು ಏಳು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.

national-level-award-for-prakash-kandakurus-bite-of-love
ಛಾಯಾಗ್ರಾಹಕ ಪ್ರಕಾಶ್ ಕಂದಕೂರ

ದೇಶದ ವಿವಿಧ ರಾಜ್ಯಗಳ 245 ಜನ ಛಾಯಾಗ್ರಾಹಕರ 3,900ಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ಅಂತರಾಷ್ಟ್ರೀಯ ತೀರ್ಪುಗಾರರಾದ ಡಾ.ಬಿ.ಕೆ.ಸಿನ್ಹಾ, ಮಾನಸಿ ಚಟರ್ಜಿ, ಸುಬ್ರತ್ ಕುಮಾರ, ಸೌನಕ್ ಬ್ಯಾನರ್ಜಿ, ಸೌಗತ ಲಾಹಿರಿ, ಮಾನಸಿ ರಾಯ್, ಪಾರ್ಥ ಸಾರತಿ ಸರ್ಕಾರ, ಅಸೀಮ್ ಕುಮಾರ್ ಚೌದರಿ, ಶರ್ಮಾಲಿ ದಾಸ್ ಅವರು ಛಾಯಾಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಬರುವ ಏಪ್ರಿಲ್ 20 ರಂದು ಕೊಲ್ಕತ್ತಾದಲ್ಲಿ ಛಾಯಾಚಿತ್ರ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.