ETV Bharat / state

ಲಾಕ್​​​ಡೌನ್​​ನಲ್ಲಿ ಸಿಲುಕಿದವರಿಗೆ ಕೊಪ್ಪಳ ಜಿಲ್ಲಾಡಳಿತ ನೆರವು - gangavati koppala latest news

ಲಾಕ್​ಡೌನ್​​ ಘೋಷಣೆಯಾದ ಸಂದರ್ಭದಲ್ಲಿ ನಾನಾ ಕಾರಣಗಳಿಂದ ಇತರೆ ಜಿಲ್ಲೆ, ರಾಜ್ಯಕ್ಕೆ ಹೋದವರು ಅಲ್ಲೇ ಸಿಲುಕಿಕೊಂಡಿದ್ದಾರೆ. ತಮ್ಮ ಸ್ವಂತ ಊರುಗಳಿಗೆ ಹಿಂದಿರುಗಿ ಹೋಗಲಾಗದೆ ಪರದಾಡುತ್ತಿರುವವರಿಗೆ ಇದೀಗ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು, ಸೇವಾಸಿಂಧು ಎಂಬ ಆ್ಯಪ್​​ನಲ್ಲಿ ಪೂರ್ಣ ಮಾಹಿತಿ ಒದಗಿಸಿ ತಮ್ಮೂರಿಗೆ ತೆರಳಬಹುದಾಗಿದೆ.

Koppala district office helps to people those who are locked by lockdown
ಸೇವಾಸಿಂಧು: ಲಾಕ್​​​ಡೌನ್​​ನಲ್ಲಿ ಸಿಲುಕಿದವರ ನೆರವಿಗೆ ಜಿಲ್ಲಾಡಳಿತ....ಊರಿಗೆ ಹೋಗಲು ಅನೌನ್ಸ್​​ಮೆಂಟ್​
author img

By

Published : May 3, 2020, 11:01 AM IST

ಗಂಗಾವತಿ: ಕೆಲಸವನ್ನರಸಿ ಹಾಗೂ ನಾನಾ ಕಾರಣಕ್ಕೆ ಕೊಪ್ಪಳ ಜಿಲ್ಲೆಗೆ ಬಂದು ಲಾಕ್​ಡೌನ್​​ ಘೋಷಣೆಯಾದ ಬಳಿಕ ಹಿಂದಿರುಗಿ ಹೋಗಲಾಗದೆ ಪರದಾಡುತ್ತಿರುವವರಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಊರಿಗೆ ಹೋಗಲು ಅನೌನ್ಸ್​​ಮೆಂಟ್​

ಅನ್ಯ ರಾಜ್ಯ, ಜಿಲ್ಲೆಯ ವ್ಯಾಪಾರಸ್ಥರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಅಥವಾ ಯಾವುದೇ ಕಾರಣಕ್ಕಾಗಿ ಜಿಲ್ಲೆಗೆ ಬಂದು ಲಾಕ್​ಡೌನ್​​​ನಲ್ಲಿ ಸಿಲುಕಿದ್ದಾರೆ. ತಮ್ಮ ಸ್ವಂತ ಸ್ಥಳಕ್ಕೆ ಹೋಗಬಯಸುವವರು ಸೇವಾಸಿಂಧು ಎಂಬ ಆ್ಯಪ್​​ನಲ್ಲಿ ಪೂರ್ಣ ಮಾಹಿತಿ ಒದಗಿಸಬೇಕು. ಆಕಸ್ಮಿಕವಾಗಿ ಸೇವಾಸಿಂಧು ಆ್ಯಪ್ ಬಳಕೆ ಸಾಧ್ಯವಾಗದೇ ಹೋದಲ್ಲಿ ಆಯಾ ತಾಲೂಕಿನ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಸಂಪೂರ್ಣ ವಿವರ ನೀಡಬೇಕು. ಆ ಬಳಿಕ ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅನ್ಯ ಸ್ಥಳಕ್ಕೆ ಹೋಗಬಯಸುವವರಿಗೆ ಜಿಲ್ಲಾ ಕೇಂದ್ರದಿಂದ ಸಾರಿಗೆ ಸಂಸ್ಥೆಯ ವಾಹನದಲ್ಲಿ ವ್ಯವಸ್ಥೆ ಮಾಡಲಾಗುವುದು. ವಾಹನದ ಖರ್ಚನ್ನು ಪ್ರಯಾಣಿಸುವವರೇ ಭರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ಜಿಲ್ಲಾಡಳಿತದ ವತಿಯಿಂದ ಅನೌನ್ಸ್​​ಮೆಂಟ್​ ಮಾಡುವ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಯಿತು.

ಗಂಗಾವತಿ: ಕೆಲಸವನ್ನರಸಿ ಹಾಗೂ ನಾನಾ ಕಾರಣಕ್ಕೆ ಕೊಪ್ಪಳ ಜಿಲ್ಲೆಗೆ ಬಂದು ಲಾಕ್​ಡೌನ್​​ ಘೋಷಣೆಯಾದ ಬಳಿಕ ಹಿಂದಿರುಗಿ ಹೋಗಲಾಗದೆ ಪರದಾಡುತ್ತಿರುವವರಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಊರಿಗೆ ಹೋಗಲು ಅನೌನ್ಸ್​​ಮೆಂಟ್​

ಅನ್ಯ ರಾಜ್ಯ, ಜಿಲ್ಲೆಯ ವ್ಯಾಪಾರಸ್ಥರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಅಥವಾ ಯಾವುದೇ ಕಾರಣಕ್ಕಾಗಿ ಜಿಲ್ಲೆಗೆ ಬಂದು ಲಾಕ್​ಡೌನ್​​​ನಲ್ಲಿ ಸಿಲುಕಿದ್ದಾರೆ. ತಮ್ಮ ಸ್ವಂತ ಸ್ಥಳಕ್ಕೆ ಹೋಗಬಯಸುವವರು ಸೇವಾಸಿಂಧು ಎಂಬ ಆ್ಯಪ್​​ನಲ್ಲಿ ಪೂರ್ಣ ಮಾಹಿತಿ ಒದಗಿಸಬೇಕು. ಆಕಸ್ಮಿಕವಾಗಿ ಸೇವಾಸಿಂಧು ಆ್ಯಪ್ ಬಳಕೆ ಸಾಧ್ಯವಾಗದೇ ಹೋದಲ್ಲಿ ಆಯಾ ತಾಲೂಕಿನ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಸಂಪೂರ್ಣ ವಿವರ ನೀಡಬೇಕು. ಆ ಬಳಿಕ ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅನ್ಯ ಸ್ಥಳಕ್ಕೆ ಹೋಗಬಯಸುವವರಿಗೆ ಜಿಲ್ಲಾ ಕೇಂದ್ರದಿಂದ ಸಾರಿಗೆ ಸಂಸ್ಥೆಯ ವಾಹನದಲ್ಲಿ ವ್ಯವಸ್ಥೆ ಮಾಡಲಾಗುವುದು. ವಾಹನದ ಖರ್ಚನ್ನು ಪ್ರಯಾಣಿಸುವವರೇ ಭರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ಜಿಲ್ಲಾಡಳಿತದ ವತಿಯಿಂದ ಅನೌನ್ಸ್​​ಮೆಂಟ್​ ಮಾಡುವ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.