ಕೊಪ್ಪಳ:- ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಕೊಪ್ಪಳದಲ್ಲಿಯೂ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಅನೇಕರು ಸಮಾಜಕ್ಕೆ ತಮ್ಮದೇ ಆದ ಶಕ್ತಿ ಅನುಸಾರ ಸಹಾಯ ಮಾಡಿ ಮಾನವೀಯತೆ ತೋರುತ್ತಿದ್ದಾರೆ.
ಇಂದು ನಗರದಲ್ಲಿ ಪೌರಕಾರ್ಮಿಕರಿಗೆ ಕರ್ನಾಟಕ ನವನಿರ್ಮಾಣ ಸೇನೆ ಹಾಗೂ ಕವಲೂರು ಎಜುಕೇಷನ್ ಟ್ರಸ್ಟ್ನಿಂದ ಸಹಾಯ ಮಾಡಲಾಯಿತು. ಕವಲೂರು ಎಜುಕೇಷನ್ ಟ್ರಸ್ಟ್ನ ವಿಜಯಕುಮಾರ್ ಕವಲೂರು ನಗರಸಭೆಯ ಸುಮಾರು 165 ಪೌರಕಾರ್ಮಿಕ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಪೇಸ್ಟ್, ರವೆ, ಸಾಬೂನು ಸೇರಿದಂತೆ ಇತರ ವಸ್ತುಗಳನ್ನು ವಿತರಿಸಿದರು.
ಒಟ್ಟು 410 ರೂಪಾಯಿ ಮೌಲ್ಯದ ಒಂದು ಕಿಟ್ ಇದಾಗಿದ್ದು, 165 ಕಿಟ್ಗಳನ್ನು ವಿತರಿಸಿದರು. ಇನ್ನು ಇತ್ತ ಪಾಟೀಲ್ ಬೋರ್ವೆಲ್ಸ್ನಿಂದ ಕರ್ತವ್ಯ ನಿರತ ಸಿಬ್ಬಂದಿ ಹಾಗೂ ಜಿಲ್ಲಾಸ್ಪತ್ರೆ ಬಳಿ ಉಪಾಹಾರ, ನೀರು ನೀಡುವ ಮೂಲಕ ಮಾನವೀಯತೆ ಮೆರೆದರು.