ಗಂಗಾವತಿ: ವಿವಿಧ ಬ್ಯಾಂಕ್ಗಳಲ್ಲಿ ತೆರೆಯಲಾಗಿರುವ ಪ್ರಧಾನಮಂತ್ರಿ ಜನ್ಧನ್ ಯೋಜನೆಯಲ್ಲಿನ ಉಳಿತಾಯ ಖಾತೆಗೆ ಕೇಂದ್ರ ಸರ್ಕಾರ 500 ರೂಪಾಯಿ ಹಾಕಿದ್ದು, ಹಣ ಪಡೆದುಕೊಳ್ಳಲು ಫಲಾನುಭವಿಗಳು ನೂಕುನುಗ್ಗಲು ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಕೊರೊನಾ ವೈರಸ್ನಿಂದ ಇಡೀ ದೇಶ ಲಾಕ್ಡೌನ್ ಆದ ಹಿನ್ನೆಲೆ ಬಡ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಮುಂದಿನ ಮೂರು ತಿಂಗಳ ಕಾಲ ಪ್ರತಿ ತಿಂಗಳ ತಲಾ 500 ರೂಪಾಯಿ ಜಮೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆ ಶುಕ್ರವಾರ ಖಾತೆಗಳಿಗೆ ಹಣ ಜಮೆಯಾಗಿದೆ.
ತಮ್ಮ ಉಳಿತಾಯ ಖಾತೆಗೆ ಜಮೆಯಾದ ಸರ್ಕಾರದ ಹಣ ಪಡೆದುಕೊಳ್ಳಲು ಫಲಾನುಭವಿಗಳು ಏಕಕಾಲಕ್ಕೆ ಮುಗಿಬಿದ್ದ ಪರಿಣಾಮ ಶನಿವಾರ ಇಲ್ಲಿನ ನಾನಾ ಬ್ಯಾಂಕ್ಗಳ ಮುಂದೆ ಜನಜಂಗುಳಿ ಏರ್ಪಟ್ಟಿತ್ತು.
ಈಗಾಗಲೇ ಕೊರೊನಾ ಭೀತಿಯಿಂದಾಗಿ ಎಲ್ಲೆಡೆ ಲಾಕ್ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದ್ದರೂ ಜನ ಮಾತ್ರ ಇದಕ್ಕೆ ಸೂಕ್ತ ಸ್ಪಂದಿಸುತ್ತಿಲ್ಲ. ಕನಿಷ್ಠಪಕ್ಷ ಸಾಮಾಜಿಕ ಅಂತವರನ್ನೂ ಪಾಲಿಸದೇ ಜನ ಹಣಕ್ಕೆ ಮುಗಿಬೀಳುತ್ತಿರುವುದು ಕಂಡುಬರುತ್ತಿದೆ.