ETV Bharat / state

ಕುಷ್ಟಗಿಯಲ್ಲಿ ನಾಲ್ವರು ಪಿಎಸ್​ಐ ಆಗಿ ನೇಮಕ.. ಅಣ್ತಮ್ಮ ಇಬ್ಬರಿಗೂ ಒಲಿದ ಅದೃಷ್ಟ..

author img

By

Published : Jan 21, 2022, 9:36 PM IST

ಕುಷ್ಟಗಿ ತಾಲೂಕಿನಲ್ಲಿ ನಾಲ್ವರು ಪಿಎಸ್​ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಇವರೆಲ್ಲಾ ಗ್ರಾಮೀಣ ಪ್ರತಿಭೆಗಳಾಗಿರೋದು ವಿಶೇಷ. ಇವರಲ್ಲಿ ಓರ್ವರು ಮಾಜಿ ಯೋಧರಾಗಿದ್ದು, ಇನ್ನೂ ಮೂವರು ಈಗಾಗಲೇ ಪೊಲೀಸ್​ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು..

IN kushtagi four get PSI Job
ಕುಷ್ಟಗಿಯಲ್ಲಿ ನಾಲ್ವರಿಗೆ ಒಲಿದ ಪಿಎಸ್​ಐ ಭಾಗ್ಯ

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ನಾಲ್ವರು ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಮೂವರು ಈಗಾಗಲೇ ಪೊಲೀಸ್​​ ಇಲಾಖೆಯಲ್ಲಿದ್ದು, ಓರ್ವರು ಮಾಜಿ ಸೈನಿಕರಾಗಿದ್ದಾರೆ.

ಮೂವರು ಮೊದಲೇ ಪೊಲೀಸ್​ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೀಗ ಪಿಎಸ್​ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಮಾಜಿ ಯೋಧರೊಬ್ಬರು ಈಗ ಪೊಲೀಸ್​​ ಇಲಾಖೆಯಲ್ಲಿ ಪಿಎಸ್​ಐ ಆಗಿದ್ದಾರೆ.

ಮಾಜಿ ಯೋಧ ಪಿಎಸ್​ಐ: ಕುಷ್ಟಗಿ ತಾಲೂಕಿನ ಕಲ್ಲಗೋನಾಳ ಗ್ರಾಮದ ಬಸವರಾಜ ಶಂಕ್ರಪ್ಪ ಪಾಟೀಲ್​​ ಅವರು ಅಕ್ಟೋಬರ್17, 1998ರಲ್ಲಿ ಮರಾಠ ಲೈಟ್ ಇನ್​​ಫೆಂಟ್ರಿ ರೆಜಿಮೆಂಟ್ ಸೆಂಟರ್​ನಲ್ಲಿ ಸಿಪಾಯಿ ಹುದ್ದೆಗೆ ಆಯ್ಕೆಯಾಗಿದ್ದರು.

21 ವರ್ಷ ಸೇವೆ ಸಲ್ಲಿಸಿ, ಬಳಿಕ ಜುಲೈ31, 2019ರಲ್ಲಿ ನಿವೃತ್ತರಾದರು. ಇದೀಗ ಯಾವುದೇ ಕೋಚಿಂಗ್ ಇಲ್ಲದೇ, ನಿರಂತರ ಅಧ್ಯಯನದಿಂದ ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವ.. ಸಚಿವ ವಿ.ಸೋಮಣ್ಣ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು..

ಅಣ್ಣ- ತಮ್ಮ ಇಬ್ಬರೂ ಪಿಎಸ್​ಐ: ತಾಲೂಕಿನ ಹಿರೇನಂದಿಹಾಳ ಗ್ರಾಮದ ರೈತಾಪಿ ಕುಟುಂಬದ ಸಕ್ರಗೌಡ ವೀರಾಪೂರ ಮತ್ತು ಲಕ್ಷ್ಮವ್ವ ದಂಪತಿ ಪುತ್ರರಾದ ಸಿದ್ದಣ್ಣ ವೀರಾಪೂರ ಹಾಗೂ ವೀರೇಶಿ ವೀರಾಪೂರ ಅವರು ಪಿಎಸ್​ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

ಸಿದ್ದಣ್ಣ ಕೆಎಸ್​ಆರ್​ಪಿಯಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದು, ಸಿವಿಲ್​​​ ಪೊಲೀಸರಾಗಿ ವೀರೇಶ್‌ 5 ವರ್ಷ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ತಿಂಗಳ ರಜೆ ತೆಗೆದುಕೊಂಡು ಓದಿ, ಇಬ್ಬರು ಸಹೋದರರು ಈ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ದುರಗಪ್ಪ ಹಿರೇಬಂಡಿಹಾಳ ಅವರು, ಪ್ರಾಥಮಿಕ ಶಿಕ್ಷಣವನ್ನು ನೆರೆಬೆಂಚಿಯಲ್ಲಿ ಮುಗಿಸಿದ್ದಾರೆ. ಹೈಸ್ಕೂಲ್ ಶಿಕ್ಷಣವನ್ನು ಹಿರೇಅರಳಹಳ್ಳಿಯಲ್ಲಿ ಮುಗಿಸಿ, ಸದ್ಯ ಕನಕಗಿರಿ ಪೊಲೀಸ್​​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಎಎಸ್, ಪಿಎಸ್​​ಐ, ಎಫ್​​ಡಿಎ, ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದಾಗ ಪಿಎಸ್​ಐ ಹುದ್ದೆ ಲಭಿಸಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ನಾಲ್ವರು ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಮೂವರು ಈಗಾಗಲೇ ಪೊಲೀಸ್​​ ಇಲಾಖೆಯಲ್ಲಿದ್ದು, ಓರ್ವರು ಮಾಜಿ ಸೈನಿಕರಾಗಿದ್ದಾರೆ.

ಮೂವರು ಮೊದಲೇ ಪೊಲೀಸ್​ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೀಗ ಪಿಎಸ್​ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಮಾಜಿ ಯೋಧರೊಬ್ಬರು ಈಗ ಪೊಲೀಸ್​​ ಇಲಾಖೆಯಲ್ಲಿ ಪಿಎಸ್​ಐ ಆಗಿದ್ದಾರೆ.

ಮಾಜಿ ಯೋಧ ಪಿಎಸ್​ಐ: ಕುಷ್ಟಗಿ ತಾಲೂಕಿನ ಕಲ್ಲಗೋನಾಳ ಗ್ರಾಮದ ಬಸವರಾಜ ಶಂಕ್ರಪ್ಪ ಪಾಟೀಲ್​​ ಅವರು ಅಕ್ಟೋಬರ್17, 1998ರಲ್ಲಿ ಮರಾಠ ಲೈಟ್ ಇನ್​​ಫೆಂಟ್ರಿ ರೆಜಿಮೆಂಟ್ ಸೆಂಟರ್​ನಲ್ಲಿ ಸಿಪಾಯಿ ಹುದ್ದೆಗೆ ಆಯ್ಕೆಯಾಗಿದ್ದರು.

21 ವರ್ಷ ಸೇವೆ ಸಲ್ಲಿಸಿ, ಬಳಿಕ ಜುಲೈ31, 2019ರಲ್ಲಿ ನಿವೃತ್ತರಾದರು. ಇದೀಗ ಯಾವುದೇ ಕೋಚಿಂಗ್ ಇಲ್ಲದೇ, ನಿರಂತರ ಅಧ್ಯಯನದಿಂದ ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವ.. ಸಚಿವ ವಿ.ಸೋಮಣ್ಣ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು..

ಅಣ್ಣ- ತಮ್ಮ ಇಬ್ಬರೂ ಪಿಎಸ್​ಐ: ತಾಲೂಕಿನ ಹಿರೇನಂದಿಹಾಳ ಗ್ರಾಮದ ರೈತಾಪಿ ಕುಟುಂಬದ ಸಕ್ರಗೌಡ ವೀರಾಪೂರ ಮತ್ತು ಲಕ್ಷ್ಮವ್ವ ದಂಪತಿ ಪುತ್ರರಾದ ಸಿದ್ದಣ್ಣ ವೀರಾಪೂರ ಹಾಗೂ ವೀರೇಶಿ ವೀರಾಪೂರ ಅವರು ಪಿಎಸ್​ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

ಸಿದ್ದಣ್ಣ ಕೆಎಸ್​ಆರ್​ಪಿಯಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದು, ಸಿವಿಲ್​​​ ಪೊಲೀಸರಾಗಿ ವೀರೇಶ್‌ 5 ವರ್ಷ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ತಿಂಗಳ ರಜೆ ತೆಗೆದುಕೊಂಡು ಓದಿ, ಇಬ್ಬರು ಸಹೋದರರು ಈ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ದುರಗಪ್ಪ ಹಿರೇಬಂಡಿಹಾಳ ಅವರು, ಪ್ರಾಥಮಿಕ ಶಿಕ್ಷಣವನ್ನು ನೆರೆಬೆಂಚಿಯಲ್ಲಿ ಮುಗಿಸಿದ್ದಾರೆ. ಹೈಸ್ಕೂಲ್ ಶಿಕ್ಷಣವನ್ನು ಹಿರೇಅರಳಹಳ್ಳಿಯಲ್ಲಿ ಮುಗಿಸಿ, ಸದ್ಯ ಕನಕಗಿರಿ ಪೊಲೀಸ್​​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಎಎಸ್, ಪಿಎಸ್​​ಐ, ಎಫ್​​ಡಿಎ, ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದಾಗ ಪಿಎಸ್​ಐ ಹುದ್ದೆ ಲಭಿಸಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.