ETV Bharat / state

ಬರೋಬ್ಬರಿ 39 ವರ್ಷಗಳ ಬಳಿಕ ಗ್ರಾಮದೇವಿ ಜಾತ್ರೆ... ಗ್ರಾಮಸ್ಥರಲ್ಲಿ ಸಂತಸ

author img

By

Published : May 10, 2019, 10:14 PM IST

ಬರೋಬ್ಬರಿ 39 ವರ್ಷಗಳ ಬಳಿಕ ಹಲಗೇರಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆ ನಡೆಯುತ್ತಿದ್ದು, ಗ್ರಾಮಸ್ಥರು ಮೊಗದಲ್ಲಿ ಸಂತಸ ಮನೆ ಮಾಡಿದೆ.

ಗ್ರಾಮದೇವತೆ ಶ್ರೀದ್ಯಾಮಮ್ಮ ದೇವಿಯ ಜಾತ್ರೆ

ಕೊಪ್ಪಳ: ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆ ಸಂಭ್ರಮದಿಂದ ಶುರುವಾಗಿದ್ದು, ಬರೋಬ್ಬರಿ 39 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದೆ. ಇದರಿಂದ ಗ್ರಾಮಸ್ಥರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆ

ಮೇ. 7ರಿಂದ 15ರವರೆಗೆ ಜಾತ್ರೆ ನಡೆಯಲಿದೆ. ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಕಟ್ಟುನಿಟ್ಟಿನ ಆಚರಣೆಗಳನ್ನು ಸರಳೀಕರಿಸಿ ಗ್ರಾಮಸ್ಥರು ಗ್ರಾಮದೇವತೆಯ ಜಾತ್ರೆಯನ್ನು ಆಚರಿಸುತ್ತಿದ್ದಾರೆ. ಜಾತ್ರೆಯ ನಿಮಿತ್ತ ಯಾರ ಮನೆಯಲ್ಲೂ ಕೂಡ ರೊಟ್ಟಿ ಮಾಡಿಲ್ಲ. ಕುಟ್ಟುವ, ಬೀಸುವ ಯಾವುದೇ ಕೆಲಸ ಮಾಡುತ್ತಿಲ್ಲ. ಗ್ರಾಮದಲ್ಲಿನ ಎಲ್ಲಾ ಗಿರಣಿಗಳು ಬಂದ್ ಆಗಿವೆ. ಎತ್ತು ಬಂಡಿಗಳನ್ನು ಸಹ ಕಟ್ಟಿಲ್ಲ. ಬರಿಗಾಲಲ್ಲಿ ಗ್ರಾಮಸ್ಥರು ಓಡಾಡುತ್ತಿದ್ದಾರೆ.

ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ಶ್ರೀ ದ್ಯಾಮಮ್ಮದೇವಿ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ತಮ್ಮ ಮನೆಯ ಬಳಿ ಬಂದ ಅಮ್ಮನವರಿಗೆ ಗ್ರಾಮಸ್ಥರು ಉಡಿ ತುಂಬಿ ಭಕ್ತಿ ಸಮರ್ಪಿಸಿದರು. ಮೆರವಣಿಗೆಗೆ ಕೋಲಾಟ, ನಂದಿಕೋಲು ಕುಣಿತ, ಡೊಳ್ಳು ಕುಣಿತ ಮೆರಗು ನೀಡಿದವು. ಬರೋಬ್ಬರಿ 39 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿರೋದು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

ಕೊಪ್ಪಳ: ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆ ಸಂಭ್ರಮದಿಂದ ಶುರುವಾಗಿದ್ದು, ಬರೋಬ್ಬರಿ 39 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದೆ. ಇದರಿಂದ ಗ್ರಾಮಸ್ಥರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆ

ಮೇ. 7ರಿಂದ 15ರವರೆಗೆ ಜಾತ್ರೆ ನಡೆಯಲಿದೆ. ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಕಟ್ಟುನಿಟ್ಟಿನ ಆಚರಣೆಗಳನ್ನು ಸರಳೀಕರಿಸಿ ಗ್ರಾಮಸ್ಥರು ಗ್ರಾಮದೇವತೆಯ ಜಾತ್ರೆಯನ್ನು ಆಚರಿಸುತ್ತಿದ್ದಾರೆ. ಜಾತ್ರೆಯ ನಿಮಿತ್ತ ಯಾರ ಮನೆಯಲ್ಲೂ ಕೂಡ ರೊಟ್ಟಿ ಮಾಡಿಲ್ಲ. ಕುಟ್ಟುವ, ಬೀಸುವ ಯಾವುದೇ ಕೆಲಸ ಮಾಡುತ್ತಿಲ್ಲ. ಗ್ರಾಮದಲ್ಲಿನ ಎಲ್ಲಾ ಗಿರಣಿಗಳು ಬಂದ್ ಆಗಿವೆ. ಎತ್ತು ಬಂಡಿಗಳನ್ನು ಸಹ ಕಟ್ಟಿಲ್ಲ. ಬರಿಗಾಲಲ್ಲಿ ಗ್ರಾಮಸ್ಥರು ಓಡಾಡುತ್ತಿದ್ದಾರೆ.

ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ಶ್ರೀ ದ್ಯಾಮಮ್ಮದೇವಿ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ತಮ್ಮ ಮನೆಯ ಬಳಿ ಬಂದ ಅಮ್ಮನವರಿಗೆ ಗ್ರಾಮಸ್ಥರು ಉಡಿ ತುಂಬಿ ಭಕ್ತಿ ಸಮರ್ಪಿಸಿದರು. ಮೆರವಣಿಗೆಗೆ ಕೋಲಾಟ, ನಂದಿಕೋಲು ಕುಣಿತ, ಡೊಳ್ಳು ಕುಣಿತ ಮೆರಗು ನೀಡಿದವು. ಬರೋಬ್ಬರಿ 39 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿರೋದು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

Intro:


Body:ಕೊಪ್ಪಳ:- ಗ್ರಾಮದಲ್ಲೀಗ ಬೀಸುವ, ಕುಟ್ಟುವ, ತಟ್ಟುವ ಸದ್ದು ಇಲ್ಲ. ಎತ್ತು ಬಂಡಿ ಹೂಡುವುದಿಲ್ಲ. ಕಾರಣ, ಆ ಗ್ರಾಮದ ಗ್ರಾಮ ದೇವತೆ ಜಾತ್ರೆ. ಆ ಗ್ರಾಮದಲ್ಲೀಗ ಗ್ರಾಮದೇವತೆ ಜಾತ್ರೆ ಪ್ರಾರಂಭವಾಗಿದ್ದು ಜಾತ್ರೆಯ ಸಂಭ್ರಮ ಮನೆ ಮಾಡಿದೆ...
ಹೌದು..., ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆ ಸಂಭ್ರಮದಿಂದ ಶುರುವಾಗಿದೆ. ಬರೋಬ್ಬರಿ 39 ವರ್ಷಗಳ ನಂತರ ಗ್ರಾಮ ದೇವತೆ ಜಾತ್ರೆ ನಡೆಯುತ್ತಿದ್ದು ಗ್ರಾಮಸ್ಥರು ಖುಷಿ ಖುಷಿಯಿಂದ ಜಾತ್ರೆಯನ್ನು ಮಾಡುತ್ತಿದ್ದಾರೆ. ಮೇ. 7 ರಿಂದ ಪ್ರಾರಂಭವಾಗಿರುವ ಜಾತ್ರೆ ಮೇ 15 ರವರೆಗೆ ನಡೆಯಲಿದೆ. ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಕಟ್ಟುನಿಟ್ಟಿನ ಆಚರಣೆಗಳು ಮಾಡಬೇಕಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಆಚರಣೆಗಳನ್ನು ಸರಳೀಕರಿಸಿ ಆಚರಣೆಗಳನ್ನು ಮಾಡುತ್ತಾ ಗ್ರಾಮದೇವತೆಯ ಜಾತ್ರೆಯನ್ನು ಆಚರಿಸುತ್ತಿದ್ದಾರೆ. ಪ್ರಮುಖವಾಗಿ ಜಾತ್ರೆ ಶುರುವಾದಾಗಿನಿಂದ ಯಾರ ಮನೆಯಲ್ಲೂ ಕೂಡ ರೊಟ್ಟಿ ಮಾಡಿಲ್ಲ, ಕುಟ್ಟುವ, ಬೀಸುವ ಕೆಲಸ ಮಾಡಿಲ್ಲ. ಗಿರಣಿಗಳು ಬಂದ್ ಆಗಿವೆ. ಎತ್ತು ಬಂಡಿಗಳನ್ನು ಸಹ ಕಟ್ಟಿಲ್ಲ. ಬರಿಗಾಲಲ್ಲಿ ಗ್ರಾಮಸ್ಥರು ಓಡಾಡುತ್ತಿದ್ದಾರೆ. ಗ್ರಾಮದಲ್ಲಿ ಓಡಾಡುವುದು ಕಡ್ಡಾಯವಾಗಿಲ್ಲ ವಾದರೂ ಆಚರಣೆ ನಂಬಿಕೆ ಅವರವರಿಗೆ ಬಿಟ್ಟ ವಿಚಾರವಾಗಿದೆ . ಈ ಎಷ್ಟೋ ವರ್ಷಗಳ ನಂತರ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿರೋದು ಖುಷಿಯಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಬೈಟ್1:- ಶಂಕ್ರಮ್ಮ, ಹಲಗೇರಿ ಗ್ರಾಮದ ಮಹಿಳೆ.

ಮೇ. 7 ರಿಂದ ಪ್ರಾರಂಭವಾಗಿರುವ ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ಶ್ರೀ ದ್ಯಾಮಮ್ಮದೇವಿ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಅಮ್ಮನವರ ಮೂರ್ತಿಯ ಮೆರವಣಿಗೆ ಗ್ರಾಮದಲ್ಲೆಲ್ಲಾ ಸಂಚರಿಸಿತು. ತಮ್ಮ ಮನೆಯ ಬಳಿ ಬಂದ ಅಮ್ಮನವರಿಗೆ ಗ್ರಾಮಸ್ಥರು ಉಡಿ ತುಂಬಿ, ಹಣ್ಣು ಕಾಯಿ ಮಾಡಿಸಿ ಭಕ್ತಿಯನ್ನು ಸಮರ್ಪಿಸಿದರು. ಅಮ್ಮನವರ ಈ ದಶಮಿ ದಿಂಡಿನ ವಿಜೃಂಭಣೆಯ ಮೆರವಣಿಗೆಗೆ ಕೋಲಾಟ, ನಂದಿಕೋಲು ಕುಣಿತ, ಡೊಳ್ಳು ಕುಣಿತ ಮೆರಗು ನೀಡಿದವು.

ಬೈಟ್2:- ಶಂಭುಲಿಂಗನಗೌಡ ಪಾಟೀಲ್, ಹಲಗೇರಿ ಗ್ರಾಮಸ್ಥ.


ಮೇ. 16 ರಂದು ರಥೋತ್ಸವ ನಡೆಯಲಿದ್ದು ಬರೋಬ್ಬರಿ 39 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿರೋದು ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಗ್ರಾಮ ದೇವತೆ ಜಾತ್ರೆಯಲ್ಲಿ ತಮ್ಮದೆ ಆದ ಸೇವೆ ಸಲ್ಲಿಸಿ ಅಮ್ಮನವರ ಕೃಪೆಗೆ ಗ್ರಾಮಸ್ಥರು ಪಾತ್ರರಾಗುತ್ತಿದ್ದಾರೆ.



Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.