ETV Bharat / state

ಕೊಪ್ಪಳ: ಅಂಗಡಿಯಲ್ಲಿ ಮಲಗಿದ್ದಾಗ ಬೆಂಕಿ... ಯುವಕ ಸುಟ್ಟು ಕರಕಲು! - Fire from the short circuit to the shop

ಶಾರ್ಟ್ ಸರ್ಕ್ಯೂಟ್​ನಿಂದ ಅಂಗಡಿಗೆ ಹೊತ್ತಿದ್ದ ಬೆಂಕಿ ಒಬ್ಬ ಯುವಕನನ್ನು ಬಲಿ ಪಡೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

Fire kills youth in Koppal
ಬೆಂಕಿಯಿಂದ ಹೊತ್ತಿ ಉರಿದ ಅಂಗಡಿಯಲ್ಲಿ ಮಲಗಿದ್ದ ಯುವಕ ಸುಟ್ಟು ಕರಕಲು
author img

By

Published : Feb 13, 2021, 4:25 PM IST

ಕೊಪ್ಪಳ: ಶಾರ್ಟ್ ಸರ್ಕ್ಯೂಟ್​ನಿಂದ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡ ಘಟನೆಯಲ್ಲಿ ಯುವಕನೊಬ್ಬ ಸುಟ್ಟು ಕರಕಲಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ‌.

ಹೊತ್ತಿ ಉರಿದ ಅಂಗಡಿಯಲ್ಲಿ ಮಲಗಿದ್ದ ಯುವಕ ಸುಟ್ಟು ಕರಕಲು

ಘಟನೆಯಲ್ಲಿ ಹಣ್ಣಿನ ಅಂಗಡಿ, ವಾಚ್ ರಿಪೇರಿ ಅಂಗಡಿ ಹಾಗೂ ಚಪ್ಪಲಿ ಅಂಗಡಿ ಹೊತ್ತಿ ಉರಿದಿದ್ದವು. ಘಟನೆಯಲ್ಲಿ ಹಣ್ಣಿನ ಅಂಗಡಿ ಮಾಲೀಕನ ಅಣ್ಣನ ಮಗ ವೀರೇಶ (18) ಮೃತಪಟ್ಟಿದ್ದಾನೆ. ನಿನ್ನೆ ಯುವಕ ಹಣ್ಣಿನ ಅಂಗಡಿಯಲ್ಲಿ ಮಲಗಲು ತೆರಳಿದ್ದ ಸಂಗತಿ ಮನೆಯವರಿಗೆ ತಿಳಿದಿರಲಿಲ್ಲ. ಯುವಕ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದಾರೆ.

ಈಗ ಸುಟ್ಟು ಕರಕಲಾಗಿದ್ದ ಅಂಗಡಿಯಲ್ಲಿ ಹುಡುಕಾಟ ನಡೆಸಿದಾಗ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಸಾಂತ್ವನ ಹೇಳಿದರು.

ಕೊಪ್ಪಳ: ಶಾರ್ಟ್ ಸರ್ಕ್ಯೂಟ್​ನಿಂದ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡ ಘಟನೆಯಲ್ಲಿ ಯುವಕನೊಬ್ಬ ಸುಟ್ಟು ಕರಕಲಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ‌.

ಹೊತ್ತಿ ಉರಿದ ಅಂಗಡಿಯಲ್ಲಿ ಮಲಗಿದ್ದ ಯುವಕ ಸುಟ್ಟು ಕರಕಲು

ಘಟನೆಯಲ್ಲಿ ಹಣ್ಣಿನ ಅಂಗಡಿ, ವಾಚ್ ರಿಪೇರಿ ಅಂಗಡಿ ಹಾಗೂ ಚಪ್ಪಲಿ ಅಂಗಡಿ ಹೊತ್ತಿ ಉರಿದಿದ್ದವು. ಘಟನೆಯಲ್ಲಿ ಹಣ್ಣಿನ ಅಂಗಡಿ ಮಾಲೀಕನ ಅಣ್ಣನ ಮಗ ವೀರೇಶ (18) ಮೃತಪಟ್ಟಿದ್ದಾನೆ. ನಿನ್ನೆ ಯುವಕ ಹಣ್ಣಿನ ಅಂಗಡಿಯಲ್ಲಿ ಮಲಗಲು ತೆರಳಿದ್ದ ಸಂಗತಿ ಮನೆಯವರಿಗೆ ತಿಳಿದಿರಲಿಲ್ಲ. ಯುವಕ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದಾರೆ.

ಈಗ ಸುಟ್ಟು ಕರಕಲಾಗಿದ್ದ ಅಂಗಡಿಯಲ್ಲಿ ಹುಡುಕಾಟ ನಡೆಸಿದಾಗ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಸಾಂತ್ವನ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.