ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದಲ್ಲಿರುವ ಚಿಯೋನ್ ನಗರದ ಆತ್ಮಭರಿತ ಎ.ಜೆ.ಸಭಾಲಯ ಚರ್ಚ್ನಲ್ಲಿ ಕ್ರಿಸಮಸ್ ಹಬ್ಬವನ್ನು ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಲಾಯಿತು.
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕ್ರಿಸಮಸ್ ಪ್ರಯುಕ್ತ ಕೇಕ್ ಕತ್ತರಿಸುವ ಸಂಭ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕೊರೊನಾ ವ್ಯಾಪಿಸಿದ ಸಂದರ್ಭದಲ್ಲಿ ಜನರು ಬಾಳಿ ಬದುಕಬೇಕು. ಹಾಗಾಗಿ ಸರ್ಕಾರದ ಕೋವಿಡ್ ನೀತಿ-ನಿಯಮಗಳನ್ನು ಪಾಲಿಸಿ ಸರಳವಾಗಿ ಹಬ್ಬ ಆಚರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ್, ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ್, ಸಭಾಪಾಲಕ ಎಸ್.ಕೆ.ಜೋಸ್, ಪುರಸಭೆ ಸದಸ್ಯ ಸಯ್ಯದ್ ಮೈನುದ್ದೀನ್ ಮುಲ್ಲಾ ಮತ್ತಿತರರಿದ್ದರು. ಕುಷ್ಟಗಿ ಕ್ರಿಸ್ತರಾಜ ದೇವಾಲಯ, ಅನ್ನದಾನೇಶ್ವರ ನಗರದ ಚರ್ಚನಲ್ಲಿಯೂ ಸರಳವಾಗಿ ಕ್ರಿಸ್ಮಸ್ ಆಚರಿಸಲಾಯಿತು.