ETV Bharat / state

2000 G+1 ಮನೆಗಳ ನಿರ್ಮಾಣ ನನೆಗುದಿಗೆ: ಕೊನೆಗೂ ಹೊರಬಿತ್ತು ಅಸಲಿ ಕಾರಣ!

author img

By

Published : Aug 6, 2019, 5:39 PM IST

2012-13 ರ ಸಂದರ್ಭದಲ್ಲಿ ಅಂದಿನ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಅಧಿಕಾರದ ಅವಧಿಯಲ್ಲಿ ಕೊಪ್ಪಳ ನಗರದ ಹಿರೇಸಿಂಧೋಗಿ ರಸ್ತೆಯಲ್ಲಿ ನಿವೇಶನ ರಹಿತ, ವಸತಿ ರಹಿತ ನಗರವಾಸಿಗಳಿಗೆ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 2000 G+1 ಮನೆಗಳ ನಿರ್ಮಾಣ ಯೋಜನೆ ಕೈಗೊಳ್ಳಲಾಯಿತು

2000 G+1 ಮನೆಗಳ ನಿರ್ಮಾಣ ನೆನೆಗುದಿಗೆ

ಕೊಪ್ಪಳ: ನಗರದಲ್ಲಿ ಸುಮಾರು 8 ವರ್ಷಗಳಿಂದ‌ ವಾಜಪೇಯಿ ನಗರ ವಸತಿ ಯೋಜನೆಯ 2000 G+1 ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಯಾಕಾಗಿ ಹೀಗಾಯಿತು ಎಂಬ ಅಸಲಿ ಕಾರಣ ಅಚ್ಚರಿಯಾಗುವಂತಹದ್ದು.

ಹೌದು.., ಉದ್ದೇಶಿತ ಯೋಜನೆಯ ಭೂಮಿ ಎನ್ಎ ಆಗಿ ಇನ್ನೂ ಪರಿವರ್ತನೆಯಾಗಿಲ್ಲ ಎನ್ನಲಾಗಿದೆ. ಯಾವುದೇ ಒಂದು ಭೂಮಿಯನ್ನು ವಸತಿ ಪ್ರದೇಶವನ್ನಾಗಿ ಮಾಡಲು ಭೂಮಿ ಪರಿವರ್ತನೆ ಮಾಡಬೇಕಾಗಿರುವುದು ಮೊಟ್ಟಮೊದಲ ಕೆಲಸ. ಆದರೆ, ಸರ್ಕಾರಿ ವಸತಿ ಯೋಜನೆಗೆ ಬಳಕೆಯಾಗುವ ಅದೆಷ್ಟೋ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಿರುವುದಿಲ್ಲ ಅನ್ನೋದೆ ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

2000 G+1 ಮನೆಗಳ ನಿರ್ಮಾಣ ನೆನೆಗುದಿಗೆ

2012-13 ರ ಸಂದರ್ಭದಲ್ಲಿ ಅಂದಿನ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಅಧಿಕಾರದ ಅವಧಿಯಲ್ಲಿ ಕೊಪ್ಪಳ ನಗರದ ಹಿರೇಸಿಂಧೋಗಿ ರಸ್ತೆಯಲ್ಲಿ ನಿವೇಶನ ರಹಿತ, ವಸತಿ ರಹಿತ ನಗರವಾಸಿಗಳಿಗೆ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 2000 G+1 ಮನೆಗಳ ನಿರ್ಮಾಣ ಯೋಜನೆ ಕೈಗೊಳ್ಳಲಾಯಿತು. ಅದಕ್ಕೆ ಬೇಕಾದ ಭೂಮಿಯನ್ನು ಸಹ ಖರೀದಿಸಿ ಕಾಮಗಾರಿಯನ್ನೂ ಆರಂಭಿಸಲಾಯಿತು.

ಆದರೆ, ಆ ಭೂಮಿ ಈವರೆಗೂ ಸಹ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿಯೇ ಇಲ್ಲಿ 2000 ಮನೆಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. 30 ಸಾವಿರ ರೂಪಾಯಿ ಫಲಾನುಭವಿಗಳ ವಂತಿಗೆ ಹಣ, ಸರ್ಕಾರದ ಸಹಾಯಧನ ಹಾಗೂ ಬ್ಯಾಂಕ್​ನಿಂದ ಸಾಲ ಯೋಜನೆಯ ಹಣದೊಂದಿಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಯ ನಿರ್ಮಾಣ ಯೋಜನೆ ಕೈಗೊಳ್ಳಲಾಗಿತ್ತು.

ಕೊಪ್ಪಳ: ನಗರದಲ್ಲಿ ಸುಮಾರು 8 ವರ್ಷಗಳಿಂದ‌ ವಾಜಪೇಯಿ ನಗರ ವಸತಿ ಯೋಜನೆಯ 2000 G+1 ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಯಾಕಾಗಿ ಹೀಗಾಯಿತು ಎಂಬ ಅಸಲಿ ಕಾರಣ ಅಚ್ಚರಿಯಾಗುವಂತಹದ್ದು.

ಹೌದು.., ಉದ್ದೇಶಿತ ಯೋಜನೆಯ ಭೂಮಿ ಎನ್ಎ ಆಗಿ ಇನ್ನೂ ಪರಿವರ್ತನೆಯಾಗಿಲ್ಲ ಎನ್ನಲಾಗಿದೆ. ಯಾವುದೇ ಒಂದು ಭೂಮಿಯನ್ನು ವಸತಿ ಪ್ರದೇಶವನ್ನಾಗಿ ಮಾಡಲು ಭೂಮಿ ಪರಿವರ್ತನೆ ಮಾಡಬೇಕಾಗಿರುವುದು ಮೊಟ್ಟಮೊದಲ ಕೆಲಸ. ಆದರೆ, ಸರ್ಕಾರಿ ವಸತಿ ಯೋಜನೆಗೆ ಬಳಕೆಯಾಗುವ ಅದೆಷ್ಟೋ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಿರುವುದಿಲ್ಲ ಅನ್ನೋದೆ ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

2000 G+1 ಮನೆಗಳ ನಿರ್ಮಾಣ ನೆನೆಗುದಿಗೆ

2012-13 ರ ಸಂದರ್ಭದಲ್ಲಿ ಅಂದಿನ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಅಧಿಕಾರದ ಅವಧಿಯಲ್ಲಿ ಕೊಪ್ಪಳ ನಗರದ ಹಿರೇಸಿಂಧೋಗಿ ರಸ್ತೆಯಲ್ಲಿ ನಿವೇಶನ ರಹಿತ, ವಸತಿ ರಹಿತ ನಗರವಾಸಿಗಳಿಗೆ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 2000 G+1 ಮನೆಗಳ ನಿರ್ಮಾಣ ಯೋಜನೆ ಕೈಗೊಳ್ಳಲಾಯಿತು. ಅದಕ್ಕೆ ಬೇಕಾದ ಭೂಮಿಯನ್ನು ಸಹ ಖರೀದಿಸಿ ಕಾಮಗಾರಿಯನ್ನೂ ಆರಂಭಿಸಲಾಯಿತು.

ಆದರೆ, ಆ ಭೂಮಿ ಈವರೆಗೂ ಸಹ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿಯೇ ಇಲ್ಲಿ 2000 ಮನೆಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. 30 ಸಾವಿರ ರೂಪಾಯಿ ಫಲಾನುಭವಿಗಳ ವಂತಿಗೆ ಹಣ, ಸರ್ಕಾರದ ಸಹಾಯಧನ ಹಾಗೂ ಬ್ಯಾಂಕ್​ನಿಂದ ಸಾಲ ಯೋಜನೆಯ ಹಣದೊಂದಿಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಯ ನಿರ್ಮಾಣ ಯೋಜನೆ ಕೈಗೊಳ್ಳಲಾಗಿತ್ತು.

Intro:


Body:ಕೊಪ್ಪಳ:- ಕೊಪ್ಪಳ ನಗರದಲ್ಲಿ ಸುಮಾರು 8 ವರ್ಷಗಳಿಂದ‌ ವಾಜಪೇಯಿ ನಗರ ವಸತಿ ಯೋಜನೆಯ 2000 G+1 ಮನೆಗಳ ನಿರ್ಮಾಣ ನೆನೆಗುದಿಗೆ ಬಿದ್ದಿರುವುದಕ್ಕೆ ಅಸಲಿ ಕಾರಣ ಅಚ್ಚರಿಯಾಗುವಂತಹದ್ದು. ಅದೇನೆಂದರೆ ಉದ್ದೇಶಿತ ಯೋಜನೆಯ ಭೂಮಿ ಎನ್ಎ ಆಗಿ ಇನ್ನೂ ಪರಿವರ್ತನೆಯಾಗಿಲ್ಲ ಎಂಬುದು. ನೆನೆಗುದಿಗೆ ಬಿದ್ದಿರುವ ಈ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರು ಏನಂತಾರೆ? ಅನ್ನೋದಕ್ಕೆ ಈ ಸ್ಟೋರಿ ನೋಡಿ....

ಹೌದು...., ಯಾವುದೇ ಒಂದು ಭೂಮಿಯನ್ನು ವಸತಿ ಪ್ರದೇಶವನ್ನಾಗಿ ಮಾಡಲು ಭೂಮಿ ಪರಿವರ್ತನೆ ಮಾಡಬೇಕಾಗಿರುವುದು ಮೊಟ್ಟಮೊದಲ ಕೆಲಸ. ಆದರೆ ಸರ್ಕಾರಿ ವಸತಿ ಯೋಜನೆಗೆ ಬಳಕೆಯಾಗುವ ಅದೆಷ್ಟೋ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಿರುವುದಿಲ್ಲ ಅನ್ನೋದಕ್ಕೆ ಇದು ಸಾಕ್ಷಿಯಾಗುತ್ತದೆ. 2012-13 ರ ಸಂದರ್ಭದಲ್ಲಿ ಅಂದಿನ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಅಧಿಕಾರದ ಅವಧಿಯಲ್ಲಿ ಕೊಪ್ಪಳ ನಗರದ ಹಿರೇಸಿಂಧೋಗಿ ರಸ್ತೆಯಲ್ಲಿ ನಿವೇಶನರಹಿತ, ವಸತಿ ರಹಿತ ನಗರವಾಸಿಗಳಿಗೆ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 2000 G+1 ಮನೆಗಳ ನಿರ್ಮಾಣ ಯೋಜನೆ ಕೈಗೊಳ್ಳಲಾಯಿತು. ಅದಕ್ಕೆ ಬೇಕಾದ ಭೂಮಿಯನ್ನು ಸಹ ಖರೀದಿಸಿ ಕಾಮಗಾರಿಯನ್ನೂ ಆರಂಭಿಸಲಾಯಿತು. ಆದರೆ ಆ ಭೂಮಿ ಈವರೆಗೂ ಸಹ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿಯೇ ಇಲ್ಲಿ 2000 ಮನೆಗಳ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ. 30 ಸಾವಿರ ರೂಪಾಯಿ ಫಲಾನುಭವಿಗಳ ವಂತಿಗೆ ಹಣ, ಸರ್ಕಾರದ ಸಹಾಯಧನ ಹಾಗೂ ಬ್ಯಾಂಕ್ನಿಂದ ಸಾಲ ಯೋಜನೆಯ ಹಣದೊಂದಿಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಯೋಜನೆ ಕೈಗೊಳ್ಳಲಾಗಿತ್ತು. ಈಗ ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ ಅಲ್ಲಿ ಕೇವಲ 708 ಮನೆಗಳು ಮಾತ್ರ ನಿರ್ಮಾಣವಾಗಿವೆ. ಇವುಗಳ ಪೈಕಿ ಬಹಳಷ್ಟು ಮನೆಗಳು ಇನ್ನೂ ನಿರ್ಮಾಣದ ಹಂತದಲ್ಲಿವೆ. ಆದರೆ ಉಳಿದ ಮನೆಗಳ ನಿರ್ಮಾಣಕ್ಕೆ ಬ್ಯಾಂಕಿನಿಂದ ಸಾಲ ಸಿಗದ ಹಿನ್ನೆಲೆಯಲ್ಲಿ ಯೋಜನೆ ನೆನೆಗುದಿಗೆ ಬಿದ್ದಿದೆ. ಆ ವಸತಿ ಯೋಜನೆಯ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗದೆ ಇರುವುದು ಬ್ಯಾಂಕ್ ಗಳಿಂದ ಸಾಲ ಸಿಗದೇ ಇರುವುದಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಯೋಜನೆ ಆರಂಭದಲ್ಲಿ ಭೂಮಿಯನ್ನು ಮೊದಲು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಲು ಸಂಬಂಧಿಸಿದ ಏಜೆನ್ಸಿಯು ಹಾಗೂ ನಗರಸಭೆ ಜಿಲ್ಲಾಡಳಿತಕ್ಕೆ ಕಳುಹಿಸಬೇಕಾಗಿತ್ತು. ಆದರೆ ಅವು ಆ ಕೆಲಸ ಮಾಡಿದೆ ಇರುವುದರಿಂದ ಬ್ಯಾಂಕಿನಿಂದ ಲೋನ್ ಸಿಗದೆ ಮನೆ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಅಲ್ಲದೆ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲರೂ ತಮ್ಮ ವಂತಿಗೆ ಹಣವನ್ನು ಪಾವತಿ ಮಾಡಿರುವ ಕುರಿತಂತೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

ಬೈಟ್1:- ಪಿ. ಸುನೀಲಕುಮಾರ್, ಜಿಲ್ಲಾಧಿಕಾರಿ.

ನೆತ್ತಿಯ ಮೇಲೊಂದು ಸೂರು ಸಿಗುತ್ತದೆ ಎಂದು ಅನೇಕ ಅರ್ಹ ಫಲಾನುಭವಿಗಳು ಸಾಲಸೋಲ ಮಾಡಿ ವಂತಿಗೆ ಹಣ ತುಂಬಿದ್ದಾರೆ. ಆದರೆ ಯೋಜನೆ ನೆನೆಗುದಿಗೆ ಬೀಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಏಜೆನ್ಸಿಯು ಕಾರಣವಾಗಿದೆ ತಿಳಿದುಬಂದಿದೆ. ಹೀಗಾಗಿ ಎಲ್ಲರೂ ಸಹ ಸಮನ್ವಯದಿಂದ ಕೆಲಸ ಮಾಡುವ ಮೂಲಕ ಯೋಜನೆಯನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಆದಷ್ಟು ಬೇಗನೆ ಮನೆಗಳನ್ನು ಹಸ್ತಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಬೈಟ್2:- ಮುನೀರ್ ಅಹ್ಮದ್ ಸಿದ್ಧಿಕಿ, ಸ್ಥಳೀಯರು. (ಬ್ರಿಡ್ಜ್ ಬಳಿ ನಿಂತು ಮಾತನಾಡಿರುವವರು)

ಸಮನ್ವಯತೆ ಇರದಿದ್ದರೆ ಒಂದು ಯೋಜನೆಯ ಹೇಗೆಲ್ಲಾ ಹಿಂದೆ ಬೀಳುತ್ತದೆ ಎಂಬುದಕ್ಕೆ ಯೋಜನೆಯು ಸಾಕ್ಷಿಯಾಗುತ್ತಿದೆ. ಸಂಬಂಧಿಸಿದವರು ತಮ್ಮ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಮೂಲಕ ಫಲಾನುಭವಿಗಳ ಕನಸು ನನಸು ಮಾಡಬೇಕಿದೆ.










Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.