ಗಂಗಾವತಿ: ರಸ್ತೆ ಕಸಗುಡಿಸಿ ಜಾಗೃತಿ ಮೂಡಿಸಿದ ನಗರಸಭೆ ಅಧ್ಯಕ್ಷೆ-ಉಪಾಧ್ಯಕ್ಷೆ - gangavati koppala latest news
ನಗರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಹಾಗೂ ಉಪಾಧ್ಯಕ್ಷೆ ಸುಧಾ, ರಸ್ತೆಯಲ್ಲಿ ಕಸಗುಡಿಸುವ ಮೂಲಕ ಚಾಲನೆ ನೀಡಿದರು.

ರಸ್ತೆ ಕಸಗುಡಿಸಿ ಜಾಗೃತಿ ಮೂಡಿಸಿದ ನಗರಸಭೆ ಅಧ್ಯಕ್ಷೆ-ಉಪಾಧ್ಯಕ್ಷೆ
ಗಂಗಾವತಿ: ನಗರಸಭೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಧ್ಯಕ್ಷೆ ಮಾಲಾಶ್ರೀ ಹಾಗೂ ಉಪಾಧ್ಯಕ್ಷೆ ಸುಧಾ, ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶಕ್ಕೆ ರಸ್ತೆಯಲ್ಲಿ ಕಸ ಗುಡಿಸಿ ಎಲ್ಲರ ಗಮನ ಸೆಳೆದರು.
ರಸ್ತೆ ಕಸಗುಡಿಸಿ ಜಾಗೃತಿ ಮೂಡಿಸಿದ ನಗರಸಭೆ ಅಧ್ಯಕ್ಷೆ-ಉಪಾಧ್ಯಕ್ಷೆ
ಈ ಸುದ್ದಿಯನ್ನೂ ಓದಿ: ಆರಕ್ಷಕರ ಆಯಾಸ ತಣಿಸಲು ಪೊಲೀಸ್ ಇಲಾಖೆಯಿಂದ ಜಲ ಕ್ರೀಡೆ ತರಬೇತಿ
ನಗರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ಕೆ ಕಸಗುಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಶಾಮೀದ ಮನಿಯಾರ, ಮನೋಹರಸ್ವಾಮಿ, ಪೌರಾಯುಕ್ತ ಜಮಖಂಡಿ ಮೊದಲಾದವರು ಸಾಥ್ ನೀಡಿದರು.