ETV Bharat / state

ಇದೇ ಮೊದಲ ಬಾರಿಗೆ ಊರಿಗೆ ಬಂತು ಬಸ್: ಗ್ರಾಮಸ್ಥರಲ್ಲಿ ಖುಷಿಯೋ ಖುಷಿ - ಕನಕಗಿರಿ ವಿಧಾನಸಭಾ ಕ್ಷೇತ್ರ

ಕನಕಗಿರಿ ವಿಧಾನಸಭಾ ಕ್ಷೇತ್ರದ ಬುನ್ನಟ್ಟಿ ಗ್ರಾಮಸ್ಥರ ಮೊಗದಲ್ಲಿ ಇಂದು ಸಂತಸ ಮನೆಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷವಾಗಿದ್ದರೂ ಕೆಂಪು ಬಸ್ಸಿನ ಮುಖ ಕಂಡಿರದ ಈ ಊರಿಗೆ ಇಂದು ಮೊದಲ ಬಾರಿಗೆ ಕೆಂಪು ಬಣ್ಣದ ಸರ್ಕಾರಿ ಬಸ್​ ಬಂದಿರುವುದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.

bus-transport-started-in-gangavathi
ಮೊದಲ ಬಾರಿಗೆ ಸಂಚಾರಿ ಸೇವೆ ಆರಂಭಿಸಿದ ಬಸ್
author img

By

Published : Mar 1, 2020, 8:05 PM IST

ಗಂಗಾವತಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಆ ಗ್ರಾಮ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷವಾಗಿದ್ದರೂ ಸರ್ಕಾರಿ ಬಸ್ಸಿನ ಮುಖ ಕಂಡಿರಲಿಲ್ಲ. ಆದರೆ ಭಾನುವಾರದಿಂದ ಮೊದಲ ಬಾರಿಗೆ ಸಂಚಾರಿ ಸೇವೆ ಆರಂಭಿಸಲಾಗಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ ಬಸ್​ ಕಂಡ ಬುನ್ನಟ್ಟಿ ಗ್ರಾಮ ​

ತಾಲೂಕು ಪಂಚಾಯತ್​ನ್ನು ಪ್ರತಿನಿಧಿಸುವ ಉಪಾಧ್ಯಕ್ಷೆ ಭೀಮಮ್ಮ ರಾಮನಗೌಡ ಅವರ ಸ್ವಂತ ಊರಾದ ಕನಕಗಿರಿ ವಿಧಾನಸಭಾ ಕ್ಷೇತ್ರದ ಬುನ್ನಟ್ಟಿ ಗ್ರಾಮಕ್ಕೆ ಈವರೆಗೆ ಸಾರಿಗೆ ವಾಹನದ ಸೌಲಭ್ಯವೇ ಇರಲಿಲ್ಲ. ಸುಮಾರು 800 ಜನ ಇರುವ ಈ ಗ್ರಾಮದಲ್ಲಿ 80ಕ್ಕೂ ಹೆಚ್ಚು ಶಾಲಾ-ಕಾಲೇಜಿನ ಮಕ್ಕಳಿದ್ದು, ನಿತ್ಯವೂ ಸಮೀಪದ ನವಲಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಅಲ್ಲಿಂದ ಬೇರೆಡೆ ಹೋಗುವ ಸ್ಥಿತಿ ಇತ್ತು. ಇದೀಗ ಈ ಗ್ರಾಮದಿಂದಲೇ ವಾಹನ ಸೌಲಭ್ಯ ಕಲ್ಪಿಸಿರುವುದು ಜನರ ಸಂತಸಕ್ಕೆ ಕಾರಣವಾಗಿದೆ.

ಬುನ್ನಟ್ಟಿಯಿಂದ ಸಂಚರಿಸುವ ಸಾರಿಗೆ ವಾಹನ ನವಲಿ ಮಾರ್ಗವಾಗಿ ಗಂಗಾವತಿ ತಲುಪಲಿದೆ. ಗ್ರಾಮದಿಂದ 20 ಕಿ.ಮೀ. ದೂರವಿರುವ ಕನಕಗಿರಿಗೆ ಒಂದು ಪ್ರತ್ಯೇಕ ವಾಹನ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ ಎಂದು ತಾಲೂಕು ಪಂಚಾಯತ್​ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.

ಗಂಗಾವತಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಆ ಗ್ರಾಮ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷವಾಗಿದ್ದರೂ ಸರ್ಕಾರಿ ಬಸ್ಸಿನ ಮುಖ ಕಂಡಿರಲಿಲ್ಲ. ಆದರೆ ಭಾನುವಾರದಿಂದ ಮೊದಲ ಬಾರಿಗೆ ಸಂಚಾರಿ ಸೇವೆ ಆರಂಭಿಸಲಾಗಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ ಬಸ್​ ಕಂಡ ಬುನ್ನಟ್ಟಿ ಗ್ರಾಮ ​

ತಾಲೂಕು ಪಂಚಾಯತ್​ನ್ನು ಪ್ರತಿನಿಧಿಸುವ ಉಪಾಧ್ಯಕ್ಷೆ ಭೀಮಮ್ಮ ರಾಮನಗೌಡ ಅವರ ಸ್ವಂತ ಊರಾದ ಕನಕಗಿರಿ ವಿಧಾನಸಭಾ ಕ್ಷೇತ್ರದ ಬುನ್ನಟ್ಟಿ ಗ್ರಾಮಕ್ಕೆ ಈವರೆಗೆ ಸಾರಿಗೆ ವಾಹನದ ಸೌಲಭ್ಯವೇ ಇರಲಿಲ್ಲ. ಸುಮಾರು 800 ಜನ ಇರುವ ಈ ಗ್ರಾಮದಲ್ಲಿ 80ಕ್ಕೂ ಹೆಚ್ಚು ಶಾಲಾ-ಕಾಲೇಜಿನ ಮಕ್ಕಳಿದ್ದು, ನಿತ್ಯವೂ ಸಮೀಪದ ನವಲಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಅಲ್ಲಿಂದ ಬೇರೆಡೆ ಹೋಗುವ ಸ್ಥಿತಿ ಇತ್ತು. ಇದೀಗ ಈ ಗ್ರಾಮದಿಂದಲೇ ವಾಹನ ಸೌಲಭ್ಯ ಕಲ್ಪಿಸಿರುವುದು ಜನರ ಸಂತಸಕ್ಕೆ ಕಾರಣವಾಗಿದೆ.

ಬುನ್ನಟ್ಟಿಯಿಂದ ಸಂಚರಿಸುವ ಸಾರಿಗೆ ವಾಹನ ನವಲಿ ಮಾರ್ಗವಾಗಿ ಗಂಗಾವತಿ ತಲುಪಲಿದೆ. ಗ್ರಾಮದಿಂದ 20 ಕಿ.ಮೀ. ದೂರವಿರುವ ಕನಕಗಿರಿಗೆ ಒಂದು ಪ್ರತ್ಯೇಕ ವಾಹನ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ ಎಂದು ತಾಲೂಕು ಪಂಚಾಯತ್​ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.