ಕುಷ್ಟಗಿ(ಕೊಪ್ಪಳ): ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಹೆರಿಗೆಗೆ ದಾಖಲಾದ ಮಹಿಳೆ ರಕ್ತದ ಕೊರತೆಯಿಂದ ನರಳುತ್ತಿದ್ದಳು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಮಹಿಳೆ ಸಂಕಷ್ಟಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಸ್ಪಂದಿಸಿದ್ದಾರೆ.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು, ಹೊಸಪೇಟೆಯಿಂದ ಕುಷ್ಟಗಿಗೆ ವಾಪಸಾಗುತ್ತಿದ್ದರು. ಆ ವೇಳೆ ಮಹಿಳೆಗೆ ಅಗತ್ಯವಾದ ಓ ಪಾಸಿಟಿವ್ ಸಕಾಲಕ್ಕೆ ಸಿಗದೇ ಕಂಗಾಲಾಗಿದ್ದರು. ಬಳಿಕ ಶಾಸಕ ಬಯ್ಯಾಪುರ ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಅವರು, ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ರಕ್ತದ ವ್ಯವಸ್ಥೆ ಮಾಡಿಸಿದರು.
ಈ ವೇಳೆ ಡಾ. ಕೆ.ಎಸ್. ರಡ್ಡಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.