ETV Bharat / state

ಬೈಕ್ ಸವಾರನಿಂದ 4 ಲಕ್ಷ ರೂ. ದೋಚಿದ ಖದೀಮರ ತಂಡ..! - ಗಂಗಾವತಿಯಲ್ಲಿ ಬೈಕ್​ ಸವಾರನಿಂದ ಹಣ ಕಳ್ಳತನ

ಬೈಕ್ ಸವಾರನನ್ನು ಹಿಂಬಾಲಿಸಿದ ಖದೀಮರ ತಂಡ, ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಂತೆ ಹಣದ ಬ್ಯಾಗ್​ ಎಗರಿಸಿದ್ದಾರೆ. ಬೈಕ್ ಸವಾರ ಬ್ಯಾಂಕ್​ನಿಂದ ಹಣ ತರುತ್ತಿದ್ದ ಬಗ್ಗೆ ಖದೀಮರು ನಿಗಾ ಇಟ್ಟಿದ್ದರು ಎನ್ನಲಾಗ್ತಿದೆ.

4 lakh rupees theft from bike rider at Ganagavati
ಗಂಗಾವತಿಯಲ್ಲಿ ಬೈಕ್​ ಸವಾರನಿಂದ ಹಣ ಕಳ್ಳತನ
author img

By

Published : Feb 15, 2021, 7:08 PM IST

ಗಂಗಾವತಿ : ಹಾಡು ಹಗಲೇ ಖದೀಮರ ತಂಡ ಬೈಕ್ ಸವಾರನಿಂದ ನಾಲ್ಕು ಲಕ್ಷ ರೂಪಾಯಿ ಎಗರಿಸಿದ ಘಟನೆ ನಗರದ ಇಂದಿರಾ ವೃತ್ತದಲ್ಲಿ ನಡೆದಿದೆ.

ವಿರುಪಾಪುರದ ಗಂಗಾಧರ ನರಸಾಪುರ ಹಣ ಕಳೆದುಕೊಂಡವರು. ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಒಡವೆಗಳನ್ನು ಅಡವಿಟ್ಟು ನಾಲ್ಕು ಲಕ್ಷ ರೂಪಾಯಿ ನಗದು ಪಡೆದುಕೊಂಡ ಗಂಗಾಧರ, ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಜುಲೈ ನಗರದ ಶ್ರೀನಿವಾಸ್ ಪೆಟ್ರೋಲ್ ಬಂಕ್​ಗೆ ತೆರಳಿದ್ದರು. ಪೆಟ್ರೋಲ್ ತುಂಬಿಸುವ ವೇಳೆ ಬ್ಯಾಗ್​ನಲ್ಲಿದ್ದ ಹಣವನ್ನು ಖದೀಮರು ದೋಚಿದ್ದಾರೆ.

ಓದಿ : ಬೇರೆ ಜಾತಿ ಯುವಕನೊಂದಿಗೆ ಪ್ರೀತಿ: ಮಹಿಳೆ ಜೀವಂತ ಸುಟ್ಟ ಕುಟುಂಬ!

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಖದೀಮರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಗಂಗಾವತಿ : ಹಾಡು ಹಗಲೇ ಖದೀಮರ ತಂಡ ಬೈಕ್ ಸವಾರನಿಂದ ನಾಲ್ಕು ಲಕ್ಷ ರೂಪಾಯಿ ಎಗರಿಸಿದ ಘಟನೆ ನಗರದ ಇಂದಿರಾ ವೃತ್ತದಲ್ಲಿ ನಡೆದಿದೆ.

ವಿರುಪಾಪುರದ ಗಂಗಾಧರ ನರಸಾಪುರ ಹಣ ಕಳೆದುಕೊಂಡವರು. ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಒಡವೆಗಳನ್ನು ಅಡವಿಟ್ಟು ನಾಲ್ಕು ಲಕ್ಷ ರೂಪಾಯಿ ನಗದು ಪಡೆದುಕೊಂಡ ಗಂಗಾಧರ, ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಜುಲೈ ನಗರದ ಶ್ರೀನಿವಾಸ್ ಪೆಟ್ರೋಲ್ ಬಂಕ್​ಗೆ ತೆರಳಿದ್ದರು. ಪೆಟ್ರೋಲ್ ತುಂಬಿಸುವ ವೇಳೆ ಬ್ಯಾಗ್​ನಲ್ಲಿದ್ದ ಹಣವನ್ನು ಖದೀಮರು ದೋಚಿದ್ದಾರೆ.

ಓದಿ : ಬೇರೆ ಜಾತಿ ಯುವಕನೊಂದಿಗೆ ಪ್ರೀತಿ: ಮಹಿಳೆ ಜೀವಂತ ಸುಟ್ಟ ಕುಟುಂಬ!

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಖದೀಮರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.