ETV Bharat / state

ವರ್ತೂರು​ ಪ್ರಕಾಶ್​ ಅಪಹರಣ ಪ್ರಕರಣ: ಕೋಲಾರ ಪೊಲೀಸರಿಂದ ತನಿಖೆ ಚುರುಕು​

author img

By

Published : Dec 3, 2020, 7:03 AM IST

Updated : Dec 3, 2020, 7:16 AM IST

ವರ್ತೂರು​ ಪ್ರಕಾಶ್​ ಅಪಹರಣ ಪ್ರಕರಣ ಬೆಂಗಳೂರಿನಿಂದ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Varthoor Prakash abduction case
Varthoor Prakash abduction case

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕೋಲಾರದಿಂದ ಆರಂಭವಾಗಿ ಬೆಂಗಳೂರು ತಲುಪಿ ಇದೀಗ ಮತ್ತೆ ಕೋಲಾರ ಪೊಲೀಸರಿಗೆ ವರ್ಗಾವಣೆಯಾಗಿದೆ.

ವರ್ತೂರು​ ಅಪಹರಣ ಪ್ರಕರಣ ಕುರಿತು ಬೆಂಗಳೂರಿನ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಬೆಂಗಳೂರಿನಿಂದ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಕೋಲಾರ ಪೊಲೀಸರು ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರನ್ನು ವಿಚಾರಣೆ ನಡೆಸಿದರು. ಕೋಲಾರ ತಾಲೂಕಿನ ಬೆಗ್ಲಿ ಹೊಸಹಳ್ಳಿ ಬಳಿ ಇರುವ ರಕ್ಷಿತ್ ಫಾರ್ಮ್ ಹೌಸ್‌ನಲ್ಲಿ ಸಂಜೆ 6 ರಿಂದ 7 ಗಂಟೆಯವರೆಗೆ ಎಎಸ್​ಪಿ ಜಾಹ್ನವಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆ ಪೊಲೀಸರಿಗೆ ಪ್ರಕಾಶ್ ಕೆಲ ಮಹತ್ವದ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ; ತನಿಖೆ ಮುಂದುವರೆದಿದೆ ಎಂದ ಬೊಮ್ಮಾಯಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಎಸ್​ಪಿ ಇಲಕ್ಕಿಯಾ ಕರುಣಾಗರನ್​ ನಿರ್ದೇಶನದಂತೆ ಎಎಸ್​ಪಿ ಜಾಹ್ನವಿ ನೇತೃತ್ವದಲ್ಲಿ ಓರ್ವ ಡಿವೈಎಸ್‌ಪಿ, 3 ಜನ ಇನ್ಸ್​ಪೆಕ್ಟರ್ ಹಾಗೂ ಐವರು ಪಿಎಸ್‌ಐಗಳ ವಿಶೇಷ ತಂಡ ರಚನೆ ಮಾಡಿ ವಿಚಾರಣೆ ಮುಂದುವರೆಸಿದ್ದಾರೆ. ಈಗಾಗಲೇ ಪ್ರಕಾಶ್‌ ಆರೋಗ್ಯ ತಪಾಸಣೆ ಕೂಡ ಮಾಡಲಾಗಿದ್ದು, ಹಲ್ಲೆ ನಡೆದಿರುವ ಸ್ಥಳ ಹಾಗೂ ಸಂಬಂಧಪಟ್ಟ ಸಾಕ್ಷ್ಯಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ, ಪ್ರಾಣ ಬೆದರಿಕೆ, ಕೊಲೆ ಯತ್ನ ನಡೆದಿರುವ ಹಿನ್ನೆಲೆಯಲ್ಲಿ ಅವರಿಗೆ ಇಲಾಖೆಯಿಂದ ಓರ್ವ ಅಂಗ ರಕ್ಷಕನನ್ನು ನೇಮಕ ಮಾಡಲಾಗಿದ್ದು, ಫಾರ್ಮ್ ಹೌಸ್​ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕೋಲಾರದಿಂದ ಆರಂಭವಾಗಿ ಬೆಂಗಳೂರು ತಲುಪಿ ಇದೀಗ ಮತ್ತೆ ಕೋಲಾರ ಪೊಲೀಸರಿಗೆ ವರ್ಗಾವಣೆಯಾಗಿದೆ.

ವರ್ತೂರು​ ಅಪಹರಣ ಪ್ರಕರಣ ಕುರಿತು ಬೆಂಗಳೂರಿನ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಬೆಂಗಳೂರಿನಿಂದ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಕೋಲಾರ ಪೊಲೀಸರು ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರನ್ನು ವಿಚಾರಣೆ ನಡೆಸಿದರು. ಕೋಲಾರ ತಾಲೂಕಿನ ಬೆಗ್ಲಿ ಹೊಸಹಳ್ಳಿ ಬಳಿ ಇರುವ ರಕ್ಷಿತ್ ಫಾರ್ಮ್ ಹೌಸ್‌ನಲ್ಲಿ ಸಂಜೆ 6 ರಿಂದ 7 ಗಂಟೆಯವರೆಗೆ ಎಎಸ್​ಪಿ ಜಾಹ್ನವಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆ ಪೊಲೀಸರಿಗೆ ಪ್ರಕಾಶ್ ಕೆಲ ಮಹತ್ವದ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ; ತನಿಖೆ ಮುಂದುವರೆದಿದೆ ಎಂದ ಬೊಮ್ಮಾಯಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಎಸ್​ಪಿ ಇಲಕ್ಕಿಯಾ ಕರುಣಾಗರನ್​ ನಿರ್ದೇಶನದಂತೆ ಎಎಸ್​ಪಿ ಜಾಹ್ನವಿ ನೇತೃತ್ವದಲ್ಲಿ ಓರ್ವ ಡಿವೈಎಸ್‌ಪಿ, 3 ಜನ ಇನ್ಸ್​ಪೆಕ್ಟರ್ ಹಾಗೂ ಐವರು ಪಿಎಸ್‌ಐಗಳ ವಿಶೇಷ ತಂಡ ರಚನೆ ಮಾಡಿ ವಿಚಾರಣೆ ಮುಂದುವರೆಸಿದ್ದಾರೆ. ಈಗಾಗಲೇ ಪ್ರಕಾಶ್‌ ಆರೋಗ್ಯ ತಪಾಸಣೆ ಕೂಡ ಮಾಡಲಾಗಿದ್ದು, ಹಲ್ಲೆ ನಡೆದಿರುವ ಸ್ಥಳ ಹಾಗೂ ಸಂಬಂಧಪಟ್ಟ ಸಾಕ್ಷ್ಯಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ, ಪ್ರಾಣ ಬೆದರಿಕೆ, ಕೊಲೆ ಯತ್ನ ನಡೆದಿರುವ ಹಿನ್ನೆಲೆಯಲ್ಲಿ ಅವರಿಗೆ ಇಲಾಖೆಯಿಂದ ಓರ್ವ ಅಂಗ ರಕ್ಷಕನನ್ನು ನೇಮಕ ಮಾಡಲಾಗಿದ್ದು, ಫಾರ್ಮ್ ಹೌಸ್​ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

Last Updated : Dec 3, 2020, 7:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.