ETV Bharat / state

ಕ್ಲಾಕ್​ ಟವರ್​ನಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆಂದ ಸಂಸದ: ಬಿಗಿ ಭದ್ರತೆಗೆ ಮುಂದಾದ ಪೊಲೀಸರು

author img

By

Published : Mar 18, 2022, 8:14 PM IST

Updated : Mar 18, 2022, 8:24 PM IST

ಜಿಲ್ಲಾಡಳಿತ ನೀಡಿದ್ದ ನೋಟಿಸ್​ ಮೀರಿ ಸಂಸದ ಮುನಿಸ್ವಾಮಿ ಕ್ಲಾಕ್​ಟವರ್​​ನಲ್ಲಿ ಪ್ರತಿಭಟನೆ ಮಾಡ್ತಾರೆ ಅನ್ನೋ ಮಾಹಿತಿ ಪಡೆದ ಪೊಲೀಸ್​ ಇಲಾಖೆ ಇಂದು ದಿನಪೂರ್ತಿ ಕ್ಲಾಕ್​ ಟವರ್ ಸುತ್ತ ಬಿಗಿ ಭದ್ರತೆ ಕಲ್ಪಿಸಿತ್ತು.

ಕ್ಲಾಕ್​ ಟವರ್​ನಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆಂದ ಸಂಸದ
ಕ್ಲಾಕ್​ ಟವರ್​ನಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆಂದ ಸಂಸದ

ಕೋಲಾರ: ಇಲ್ಲಿನ ಕ್ಲಾಕ್ ಟವರ್​ಗೆ ಹಲವು ವರ್ಷಗಳ ಇತಿಹಾಸ ಇದೆ. ನಿರ್ಮಾಣವಾದಾಗಿನಿಂದ ಕೇವಲ ಸಮಯ ತೋರಿಸುತ್ತಾ ನಿಂತಿದ್ದ ಕ್ಲಾಕ್ ಟವರ್​ಗೀಗ ಸಮಯ ಕೆಟ್ಟಿದೆ ಅನ್ನಿಸುತ್ತದೆ. ಹಾಗಾಗಿ ಸದ್ಯ ಇದೊಂದು ವಿವಾದದ ಕೇಂದ್ರವಾಗಿ ಕೋಲಾರ ಜಿಲ್ಲೆಯ ಜಿಲ್ಲಾಡಳಿತಕ್ಕೆ ತಲೆ ಬಿಸಿ ಉಂಟು ಮಾಡಿದೆ.

ಸುಮಾರು 35 ಅಡಿ ಉದ್ದದ ಕ್ಲಾಕ್​ ಟವರ್​ ಕಟ್ಟಡ, ಕಟ್ಟಡದ ಸುತ್ತಲು ಶಸ್ತ್ರಸಮೇತ ಸಜ್ಜಾಗಿ ನಿಂತಿರುವ ಪೊಲೀಸರು, ಅಲ್ಲಲ್ಲಿ ಆತಂಕ ಹಾಗೂ ಗಾಬರಿಯಿಂದಲೇ ಗಮನಿಸುತ್ತಿರುವ ಜನರು, ಜನರನ್ನು ಗುಂಪು ಸೇರದಂತೆ ಚದುರಿಸುತ್ತಿರುವ ಪೊಲೀಸರು... ಕೋಲಾರ ನಗರದ ಕ್ಲಾಕ್​ ಟವರ್​ ಸರ್ಕಲ್​​ನಲ್ಲಿ ಈ ದೃಶ್ಯಗಳು ಕಂಡುಬಂದವು.

ಕೋಲಾರ ಸಂಸದ ಎಸ್​.ಮುನಿಸ್ವಾಮಿ ಏಕಾಏಕಿ ಪತ್ರಿಕಾಗೋಷ್ಠಿ ಕರೆದು ಕ್ಲಾಕ್​ ಟವರ್​ನಲ್ಲಿ ರಾಷ್ಟ್ರದ್ವಜ ಹಾರಿಸುತ್ತೇನೆ. ಇಲ್ಲವಾದಲ್ಲಿ ಅಲ್ಲಿ ರಾಷ್ಟ್ರದ್ವಜ ಹಾರಿಸುವವರೆಗೂ ಏಕಾಂಗಿಯಾಗಿ ಮೌನ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದು ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕಾರಣ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕ್ಲಾಕ್​ ಟವರ್ ಪ್ರದೇಶದಲ್ಲಿ ಹಲವು ವರ್ಷಗಳಿಂದ ಹಿಂದೂಗಳ ಮೆರವಣಿಗೆಗೆ ನಿಷೇಧ ಹೇರಲಾಗಿದೆ.


ಇದನ್ನೂ ಓದಿ: ಉಕ್ರೇನ್​ನಲ್ಲಿ ಹತನಾಗಿದ್ದ ನವೀನ್ ​: ಮೆಡಿಕಲ್ ಕಾಲೇಜಿಗೆ ಪಾರ್ಥೀವ ಶರೀರ ನೀಡಲು ಮುಂದಾದ ಕುಟುಂಬ

ಮೊದಲು ಸಂಸದರಿಗೆ ಪ್ರತಿಭಟನೆ ಮಾಡದಂತೆ ನೋಟಿಸ್​ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ 144 ಸೆಕ್ಷನ್​ ಜಾರಿಯಲ್ಲಿದ್ದು, ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಮಾರ್ಚ್​-21ರ ನಂತರ ಏಳು ದಿನಗಳ ಒಳಗಾಗಿ ಪ್ರತಿಭಟನೆಗೆ ಅನುಮತಿ ನೀಡುವುದಾಗಿ ನೋಟಿಸ್​ನಲ್ಲಿ ಸೂಚನೆ ನೀಡಲಾಗಿದೆ. ಜೊತೆಗೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು ಕ್ಲಾಕ್​ ಟವರ್​ನಲ್ಲಿರುವ ಸದ್ಯದ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದೆ. ಈ ನಡುವೆ ಇಂದು ಜಿಲ್ಲಾಡಳಿತ ನೀಡಿದ್ದ ನೋಟಿಸ್​ ಮೀರಿ ಸಂಸದ ಮುನಿಸ್ವಾಮಿ ಕ್ಲಾಕ್​ಟವರ್​​ನಲ್ಲಿ ಪ್ರತಿಭಟನೆ ಮಾಡ್ತಾರೆ ಅನ್ನೋ ಮಾಹಿತಿ ಪಡೆದ ಪೊಲೀಸ್​ ಇಲಾಖೆ ಇಂದು ದಿನಪೂರ್ತಿ ಕ್ಲಾಕ್​ ಟವರ್​ನಲ್ಲಿ ಬಿಗಿ ಪೊಲೀಸ್​ ಭದ್ರತೆಯಲ್ಲಿತ್ತು.

ಈ ನಡುವೆ ಕೋಲಾರದ ಸೋಮೇಶ್ವರ ಸ್ವಾಮಿ ದೇವಾಲಯದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಮುನಿಸ್ವಾಮಿ, ಕಾನೂನಿನಡಿ ಎಲ್ಲರೂ ಒಂದೇ ಹಾಗಾಗಿ ಕಾನೂನಿಗೆ ತಲೆಬಾಗುತ್ತೇನೆ. ಮಾರ್ಚ್​-21ರ ನಂತರ ಪ್ರತಿಭಟನೆ ಮಾಡುತ್ತೇನೆ ಎಂದಿದ್ದಾರೆ.

ಕೋಲಾರ: ಇಲ್ಲಿನ ಕ್ಲಾಕ್ ಟವರ್​ಗೆ ಹಲವು ವರ್ಷಗಳ ಇತಿಹಾಸ ಇದೆ. ನಿರ್ಮಾಣವಾದಾಗಿನಿಂದ ಕೇವಲ ಸಮಯ ತೋರಿಸುತ್ತಾ ನಿಂತಿದ್ದ ಕ್ಲಾಕ್ ಟವರ್​ಗೀಗ ಸಮಯ ಕೆಟ್ಟಿದೆ ಅನ್ನಿಸುತ್ತದೆ. ಹಾಗಾಗಿ ಸದ್ಯ ಇದೊಂದು ವಿವಾದದ ಕೇಂದ್ರವಾಗಿ ಕೋಲಾರ ಜಿಲ್ಲೆಯ ಜಿಲ್ಲಾಡಳಿತಕ್ಕೆ ತಲೆ ಬಿಸಿ ಉಂಟು ಮಾಡಿದೆ.

ಸುಮಾರು 35 ಅಡಿ ಉದ್ದದ ಕ್ಲಾಕ್​ ಟವರ್​ ಕಟ್ಟಡ, ಕಟ್ಟಡದ ಸುತ್ತಲು ಶಸ್ತ್ರಸಮೇತ ಸಜ್ಜಾಗಿ ನಿಂತಿರುವ ಪೊಲೀಸರು, ಅಲ್ಲಲ್ಲಿ ಆತಂಕ ಹಾಗೂ ಗಾಬರಿಯಿಂದಲೇ ಗಮನಿಸುತ್ತಿರುವ ಜನರು, ಜನರನ್ನು ಗುಂಪು ಸೇರದಂತೆ ಚದುರಿಸುತ್ತಿರುವ ಪೊಲೀಸರು... ಕೋಲಾರ ನಗರದ ಕ್ಲಾಕ್​ ಟವರ್​ ಸರ್ಕಲ್​​ನಲ್ಲಿ ಈ ದೃಶ್ಯಗಳು ಕಂಡುಬಂದವು.

ಕೋಲಾರ ಸಂಸದ ಎಸ್​.ಮುನಿಸ್ವಾಮಿ ಏಕಾಏಕಿ ಪತ್ರಿಕಾಗೋಷ್ಠಿ ಕರೆದು ಕ್ಲಾಕ್​ ಟವರ್​ನಲ್ಲಿ ರಾಷ್ಟ್ರದ್ವಜ ಹಾರಿಸುತ್ತೇನೆ. ಇಲ್ಲವಾದಲ್ಲಿ ಅಲ್ಲಿ ರಾಷ್ಟ್ರದ್ವಜ ಹಾರಿಸುವವರೆಗೂ ಏಕಾಂಗಿಯಾಗಿ ಮೌನ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದು ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕಾರಣ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕ್ಲಾಕ್​ ಟವರ್ ಪ್ರದೇಶದಲ್ಲಿ ಹಲವು ವರ್ಷಗಳಿಂದ ಹಿಂದೂಗಳ ಮೆರವಣಿಗೆಗೆ ನಿಷೇಧ ಹೇರಲಾಗಿದೆ.


ಇದನ್ನೂ ಓದಿ: ಉಕ್ರೇನ್​ನಲ್ಲಿ ಹತನಾಗಿದ್ದ ನವೀನ್ ​: ಮೆಡಿಕಲ್ ಕಾಲೇಜಿಗೆ ಪಾರ್ಥೀವ ಶರೀರ ನೀಡಲು ಮುಂದಾದ ಕುಟುಂಬ

ಮೊದಲು ಸಂಸದರಿಗೆ ಪ್ರತಿಭಟನೆ ಮಾಡದಂತೆ ನೋಟಿಸ್​ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ 144 ಸೆಕ್ಷನ್​ ಜಾರಿಯಲ್ಲಿದ್ದು, ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಮಾರ್ಚ್​-21ರ ನಂತರ ಏಳು ದಿನಗಳ ಒಳಗಾಗಿ ಪ್ರತಿಭಟನೆಗೆ ಅನುಮತಿ ನೀಡುವುದಾಗಿ ನೋಟಿಸ್​ನಲ್ಲಿ ಸೂಚನೆ ನೀಡಲಾಗಿದೆ. ಜೊತೆಗೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು ಕ್ಲಾಕ್​ ಟವರ್​ನಲ್ಲಿರುವ ಸದ್ಯದ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದೆ. ಈ ನಡುವೆ ಇಂದು ಜಿಲ್ಲಾಡಳಿತ ನೀಡಿದ್ದ ನೋಟಿಸ್​ ಮೀರಿ ಸಂಸದ ಮುನಿಸ್ವಾಮಿ ಕ್ಲಾಕ್​ಟವರ್​​ನಲ್ಲಿ ಪ್ರತಿಭಟನೆ ಮಾಡ್ತಾರೆ ಅನ್ನೋ ಮಾಹಿತಿ ಪಡೆದ ಪೊಲೀಸ್​ ಇಲಾಖೆ ಇಂದು ದಿನಪೂರ್ತಿ ಕ್ಲಾಕ್​ ಟವರ್​ನಲ್ಲಿ ಬಿಗಿ ಪೊಲೀಸ್​ ಭದ್ರತೆಯಲ್ಲಿತ್ತು.

ಈ ನಡುವೆ ಕೋಲಾರದ ಸೋಮೇಶ್ವರ ಸ್ವಾಮಿ ದೇವಾಲಯದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಮುನಿಸ್ವಾಮಿ, ಕಾನೂನಿನಡಿ ಎಲ್ಲರೂ ಒಂದೇ ಹಾಗಾಗಿ ಕಾನೂನಿಗೆ ತಲೆಬಾಗುತ್ತೇನೆ. ಮಾರ್ಚ್​-21ರ ನಂತರ ಪ್ರತಿಭಟನೆ ಮಾಡುತ್ತೇನೆ ಎಂದಿದ್ದಾರೆ.

Last Updated : Mar 18, 2022, 8:24 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.