ETV Bharat / state

ಕೋಲಾರದಲ್ಲಿ ದಕ್ಷ ಅಧಿಕಾರಿ ದಿ. ಡಿ.ಕೆ. ರವಿ ಅವರ ಕನಸಿನ ಯೋಜನೆ ಮತ್ತೆ ಜಾರಿ

ಕೋಲಾರ ಜಿಲ್ಲೆಯಲ್ಲಿ ಜನರ ಅನುಕೂಲಕ್ಕಾಗಿ ಕಂದಾಯ ಅದಾಲತ್ ಅನ್ನು ಜಾರಿಗೊಳಿಸಲಾಗಿದ್ದು,ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದನೆ ದೊರೆಯುತ್ತಿದೆ.

author img

By

Published : Jun 25, 2019, 9:22 PM IST

ರೈತರಿಗೆ ವರದಾನವಾಗಿರುವ ಕಂದಾಯ ಅದಾಲತ್ ಮತ್ತೆ ಆಯೋಜನೆ

ಕೋಲಾರ: ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿಯವರ ಕನಸಿನ ಯೋಜನೆ ಕಂದಾಯ ಅದಾಲತ್ ಅನ್ನು ಕೋಲಾರ ಜಿಲ್ಲೆಯಲ್ಲಿ ಮತ್ತೆ ಜಾರಿಗೆ ತರಲಾಗಿದೆ.

ಈ ಯೋಜನೆ ಮೂಲಕವೇ ಡಿ.ಕೆ.ರವಿ ಕೋಲಾರ ಜಿಲ್ಲೆಯ ಜನರ ಮನೆ ಮಾತಾಗಿ ಜನಮನ ಗೆದ್ದಿದ್ರು, ಅಲ್ಲದೆ ಈ ಮಾದರಿ ಯೋಜನೆ ಸರ್ಕಾರದ ಗಮನ ಸೆಳೆದು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿತ್ತು. ಆದರೆ ಡಿ.ಕೆ ರವಿಯವರ ನಂತರ ಯೋಜನೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಂದಾಯ ಅದಾಲತ್​​ ಆರಂಭಿಸಿದ್ದಾರೆ. ಮೊದಲು ತಾಲೂಕು ಮಟ್ಟಗಳಲ್ಲಿ ಅದಾಲತ್​ ಮೂಲಕ ಪಿಂಚಣಿ ಹಾಗೂ ಕಂದಾಯ ಇಲಾಖೆಯ ಅರ್ಜಿಗಳನ್ನು ಸ್ವೀಕರಿಸಿ ಒಂದೇ ದಿನದಲ್ಲಿ ಇತ್ಯರ್ಥ ಮಾಡಲಾಗುತ್ತಿದೆ.

ರೈತರಿಗೆ ವರದಾನವಾಗಿರುವ ಕಂದಾಯ ಅದಾಲತ್ ಮತ್ತೆ ಆಯೋಜನೆ

ಈ ನಿಟ್ಟಿನಲ್ಲಿ ಇಂದು ಕೆಜಿಎಫ್​ ತಾಲೂಕು ಮಟ್ಟದಲ್ಲಿ ನೂರಾರು ಜನರಿಗೆ ಒಂದೇ ಸೂರಿನಡಿ ಸಮಸ್ಯೆಗಳನ್ನು ಅದಾಲತ್​ ಮೂಲಕ ಬಗೆಹರಿಸಲಾಯಿತು. ಈ ಅದಾಲತ್​ ನಲ್ಲಿ ಪ್ರಮುಖವಾಗಿ ಪಿಂಚಣಿ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನಗಳ​ ಅರ್ಜಿ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲೇ ಆದೇಶ ಮಾಡಿದ್ರೆ, ಕಂದಾಯ ಇಲಾಖೆಯ ಪಾವತಿ ವಾರಸುದಾರಿಕೆ ಬದಲಾವಣೆ, ​ಪಹಣಿ ತಿದ್ದುಪಡಿ, ಕಾಲಂ ನಂಬರ್​-9, ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುತ್ತದೆ. ಇಂಥದೊಂದು ಯೋಜನೆ ಈಗ ಮತ್ತೆ ಜಿಲ್ಲೆಯಲ್ಲಿ ಆರಂಭವಾಗಿರೋದು ರೈತರಿಗೆ, ವೃದ್ಧರಿಗೆ ಹಾಗೂ ಬಡವರಿಗೆ ಸಂತಸ ತಂದಿದೆ.

ಕೋಲಾರ: ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿಯವರ ಕನಸಿನ ಯೋಜನೆ ಕಂದಾಯ ಅದಾಲತ್ ಅನ್ನು ಕೋಲಾರ ಜಿಲ್ಲೆಯಲ್ಲಿ ಮತ್ತೆ ಜಾರಿಗೆ ತರಲಾಗಿದೆ.

ಈ ಯೋಜನೆ ಮೂಲಕವೇ ಡಿ.ಕೆ.ರವಿ ಕೋಲಾರ ಜಿಲ್ಲೆಯ ಜನರ ಮನೆ ಮಾತಾಗಿ ಜನಮನ ಗೆದ್ದಿದ್ರು, ಅಲ್ಲದೆ ಈ ಮಾದರಿ ಯೋಜನೆ ಸರ್ಕಾರದ ಗಮನ ಸೆಳೆದು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿತ್ತು. ಆದರೆ ಡಿ.ಕೆ ರವಿಯವರ ನಂತರ ಯೋಜನೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಂದಾಯ ಅದಾಲತ್​​ ಆರಂಭಿಸಿದ್ದಾರೆ. ಮೊದಲು ತಾಲೂಕು ಮಟ್ಟಗಳಲ್ಲಿ ಅದಾಲತ್​ ಮೂಲಕ ಪಿಂಚಣಿ ಹಾಗೂ ಕಂದಾಯ ಇಲಾಖೆಯ ಅರ್ಜಿಗಳನ್ನು ಸ್ವೀಕರಿಸಿ ಒಂದೇ ದಿನದಲ್ಲಿ ಇತ್ಯರ್ಥ ಮಾಡಲಾಗುತ್ತಿದೆ.

ರೈತರಿಗೆ ವರದಾನವಾಗಿರುವ ಕಂದಾಯ ಅದಾಲತ್ ಮತ್ತೆ ಆಯೋಜನೆ

ಈ ನಿಟ್ಟಿನಲ್ಲಿ ಇಂದು ಕೆಜಿಎಫ್​ ತಾಲೂಕು ಮಟ್ಟದಲ್ಲಿ ನೂರಾರು ಜನರಿಗೆ ಒಂದೇ ಸೂರಿನಡಿ ಸಮಸ್ಯೆಗಳನ್ನು ಅದಾಲತ್​ ಮೂಲಕ ಬಗೆಹರಿಸಲಾಯಿತು. ಈ ಅದಾಲತ್​ ನಲ್ಲಿ ಪ್ರಮುಖವಾಗಿ ಪಿಂಚಣಿ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನಗಳ​ ಅರ್ಜಿ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲೇ ಆದೇಶ ಮಾಡಿದ್ರೆ, ಕಂದಾಯ ಇಲಾಖೆಯ ಪಾವತಿ ವಾರಸುದಾರಿಕೆ ಬದಲಾವಣೆ, ​ಪಹಣಿ ತಿದ್ದುಪಡಿ, ಕಾಲಂ ನಂಬರ್​-9, ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುತ್ತದೆ. ಇಂಥದೊಂದು ಯೋಜನೆ ಈಗ ಮತ್ತೆ ಜಿಲ್ಲೆಯಲ್ಲಿ ಆರಂಭವಾಗಿರೋದು ರೈತರಿಗೆ, ವೃದ್ಧರಿಗೆ ಹಾಗೂ ಬಡವರಿಗೆ ಸಂತಸ ತಂದಿದೆ.

Intro:ಸ್ಲಗ್​: ಮತ್ತೆ ಕಂದಾಯ ಅದಾಲತ್​..

ಆಂಕರ್​: ಅದು ಒಬ್ಬ ದಕ್ಷ ಐಎಎಸ್​ ಅಧಿಕಾರಿಯೊಬ್ಬನ ಕನಸಿನ ಯೋಜನೆ, ಬಡವರ, ರೈತರಿಗೆ ವರದಾನವಾಗಿರುವ ಆ
ಯೋಜನೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು, ಇಡೀ ಜಿಲ್ಲೆಯಲ್ಲಿ ಜನರ ಮನ ಗೆದ್ದಿತ್ತು, ಈಗ ಮತ್ತೆ ಆ ಯೋಜನೆ ಜಿಲ್ಲೆಯಲ್ಲಿ ಆರಂಭವಾಗಿದೆ.. ಯಾವುದಾಯೋಜನೆ ಇಲ್ಲಿದೆ ಒಂದು ವರದಿ..Body:ಅರ್ಜಿ ಹಿಡಿದು ಸಾಲು ಗಟ್ಟಿ ನಿಂತಿರುವ ರೈತರು, ವೃದ್ದರು, ಸೇರಿದಂತೆ ನೂರಾರು ಜನ, ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುತ್ತಿರುವ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್​ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆದ ಕಂದಾಯ ಹಾಗೂ ಪಿಂಚಣಿ ಅದಾಲತ್​ ನಲ್ಲಿ. ಹೌದು ಇದು ಕೋಲಾರದ ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ ರವಿಯವರ ಕನಸಿನ ಯೋಜನೆ ಕಂದಾಯ ಅದಾಲತ್​.ಈ ಯೋಜನೆ ಮೂಲಕವೇ ಡಿ.ಕೆ.ರವಿ ಕೋಲಾರ ಜಿಲ್ಲೆಯ ಜನರ ಮನೆ ಮಾತಾಗಿ ಜನಮನಗೆದ್ದಿದ್ರು, ಅಲ್ಲದೆ ಈ ಮಾದರಿ ಯೋಜನೆ ಸರ್ಕಾರದ ಗಮನ ಸೆಳೆದು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿತ್ತು.ಆದ್ರೆ ಡಿ.ಕೆ ರವಿ ಹೋದ ನಂತರ ಯೋಜನೆ ಸ್ಥಗಿತಗೊಂಡಿತ್ತು.ಈಗ ಮತ್ತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಂದಾಯ ಅದಾಲತ್​​ ಆರಂಭಿಸಿದ್ದಾರೆ. ಮೊದಲು ತಾಲ್ಲೂಕು ಮಟ್ಟಗಳಲ್ಲಿ ಅದಾಲತ್​ ಮೂಲಕ ಪಿಂಚಣಿ ಹಾಗೂ ಕಂದಾಯ ಇಲಾಖೆಯ ಅರ್ಜಿಗಳನ್ನು ಸ್ವೀಕರಿಸಿ ಒಂದೇ ದಿನದಲ್ಲಿ ಇತ್ಯರ್ಥ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಕೆಜಿಎಫ್​ ತಾಲ್ಲೂಕು ಮಟ್ಟದಲ್ಲಿ ನೂರಾರು ಜನರಿಗೆ ಒಂದೇ ಸೂರಿನಡಿ ಸಮಸ್ಯಗಳನ್ನು ಅದಾಲತ್​ ಮೂಲಕ ಬಗೆಹರಿಸಲಾಯಿತು.

ಬೈಟ್​:1 ಜೆ.ಮಂಜುನಾಥ್​ (ಜಿಲ್ಲಾಧಿಕಾರಿ, ಕೋ​ಲಾರ)

         ಇನ್ನು ಇಂಥ ಮಹತ್ವದ ಯೋಜನೆಯಿಂದ ಕೋಲಾರ ಜಿಲ್ಲೆಯ ರೈತರು, ಶ್ರೀಮಂತರು, ಬಡವರು ಎನ್ನದೆ ಭೂಮಿ
ಉಳ್ಳವರು ಎಲ್ಲರಿಗೂ ಅನುಕೂಲವಾಗಿತ್ತು. ಸರ್ಕಾರಿ ಕಛೇರಿಗಳ ಬಳಿ ತಿಂಗಳುಗಟ್ಟಲೆ ಅಲೆದಾಡಿ, ಅಧಿಕಾರಿಗಳಿಗೆ ಕೇಳಿದಷ್ಟು ಲಂಚಕೊಟ್ರು ಬಗೆಯರಿಯದ ಸಮಸ್ಯೆಗಳನ್ನು ಒಂದೇ ಕ್ಷಣ ಕಾಲದಲ್ಲಿ ಸಮಸ್ಯೆಗಳನ್ನು ಬಗೆಹಿಸಿ ಅಧಿಕಾರಿಗಳು ಸ್ಥಳದಲ್ಲೇ ಆದೇಶ ಹೊರಡಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವ ಯೋಜನೆ ಇದು ಹಾಗಾಗಿನೇ ಈ ಯೋಜನೆ ಬಹಳ ಮಹತ್ವ ಹಾಗೂ ಪ್ರಸಿದ್ದಿ ಪಡೆದಿತ್ತು. ಈ ಅದಾಲತ್​ ನಲ್ಲಿ ಪ್ರಮುಖವಾಗಿ ಪಿಂಚಣಿ ಅದಾಲತ್​ ನಲ್ಲಿ ವಿದವಾ ವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನಗಳ​ ಅರ್ಜಿಯನ್ನು ಸ್ಥಳದಲ್ಲೇ ಆದೇಶ ಮಾಡಿದ್ರೆ, ಕಂದಾಯ ಇಲಾಖೆಯ ಪವತಿವಾರಸುದಾರಿಕೆ ದಲಾವಣೆ, ಆಕಾರ್​ಬಂದ್ ತಿದ್ದುಪಡಿ,​ ಪಹಣಿ ತಿದ್ದುಪಡಿ, ಕಾಲಂ ನಂಬರ್​-9, ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುತ್ತದೆ. ಇಂಥಾದೊಂದು ಯೋಜನೆ ಈಗ ಮತ್ತೆ ಜಿಲ್ಲೆಯಲ್ಲಿ ಆರಂಭವಾಗಿರೋದು ರೈತರಿಗೆ, ವೃದ್ದರಿಗೆ ಹಾಗೂ ಬಡವರಿಗೆ ಸಂತಸ ತಂದಿದೆ.

ಬೈಟ್​:2 ಮಂಜುನಾಥ್ (ಸ್ಥಳೀಯರು)​ Conclusion:ಒಟ್ಟಾರೆ ದಕ್ಷ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ ರವಿಯವರ ಕನಸಿನ ಯೋಜನೆಯನ್ನು ಜಿಲ್ಲೆಯಲ್ಲಿ ಮತ್ತೆ ಆರಂಭಿಸುವ ಮೂಲಕ ಅವರ ನೆನಪು ಮರುಕಳಿಸಿದೆ. ಜೊತೆಗೆ ಈ ಮಹತ್ವದ ಯೋಜನೆಯ ಮೂಲಕ ಮತ್ತಷ್ಟು ಜನ ರೈತರ, ಬಡವರ ಸಂಕಷ್ಟಗಳು ಬಗೆಹರಿಯಲಿವೆ ಅನ್ನೋದು ಸಂತಸದ ವಿಷಯ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.