ETV Bharat / state

ಎಂಟಿಬಿ, ವಿಶ್ವನಾಥ್​​, ಶಂಕರ್​ಗೆ ಪರಿಷತ್​​ ಟಿಕೆಟ್​ ನೀಡಬೇಕು: ಸಚಿವ ಹೆಚ್​.ನಾಗೇಶ್​​

author img

By

Published : Jun 5, 2020, 3:17 PM IST

ವಿಧಾನ ಪರಿಷತ್​​​​​ ಟಿಕೆಟ್​​ಗಾಗಿ ಬಿಜೆಪಿ ಪಕ್ಷದಲ್ಲಿ ತೀವ್ರ ಜಟಾಪಟಿ ನಡೆದಿದ್ದು, ಬಿಜೆಪಿ ಸರ್ಕಾರ ರಚಿಸಲು ಕಾರಣರಾದವರ ಪೈಕಿ ಎಂಟಿಬಿ, ವಿಶ್ವನಾಥ್​​, ಶಂಕರ್​ಗೆ ಟಿಕೆಟ್​ ನೀಡಬೇಕು ಎಂದು ಅಬಕಾರಿ ಸಚಿವ ಹೆಚ್​.ನಾಗೇಶ್​ ಕೋಲಾರದಲ್ಲಿ ಒತ್ತಾಯಿಸಿದ್ದಾರೆ.

Excise Minister H Nagesh
ಅಬಕಾರಿ ಸಚಿವ ಹೆಚ್​.ನಾಗೇಶ್​​ ಅಭಿಪ್ರಾಯ

ಕೋಲಾರ: ಎಂಟಿಬಿ ನಾಗರಾಜ್ ಸೇರಿದಂತೆ ವಿಶ್ವನಾಥ್ ಹಾಗೂ ಶಂಕರ್ ಅವರಿಗೆ ನ್ಯಾಯಬದ್ಧವಾಗಿ ಎಂಎಲ್​ಸಿ ಸ್ಥಾನಕ್ಕೆ ಟಿಕೆಟ್​ ನೀಡುವುದು ಸಮಂಜಸವಾಗಿದೆ. ಇದು ನನ್ನ ಅಭಿಪ್ರಾಯವೂ ಹೌದು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮನ್ವಂತರ ಪ್ರಕಾಶನ ಹಾಗೂ ಜನ ಸೇವಾ ಟ್ರಸ್ಟ್​​​ನಿಂದ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಾಗಲು ಈ ಮೂವರು ಸಹ ಪ್ರಮುಖರಾಗಿದ್ದಾರೆ. ಇನ್ನು ಎಂಟಿಬಿ ನಾಗರಾಜ್ ಸೇರಿದಂತೆ ವಿಶ್ವನಾಥ್​ ಹಾಗೂ ಶಂಕರ್​​ಗೆ ಎಂಎಲ್​​ಸಿ ಸ್ಥಾನಕ್ಕೆ ಟಿಕೆಟ್​​ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ನಾಗೇಶ್​​ ಅಭಿಪ್ರಾಯಪಟ್ಟಿದ್ದಾರೆ.

ಅಬಕಾರಿ ಸಚಿವ ಹೆಚ್​.ನಾಗೇಶ್​

ನಾನು ಸೇರಿದಂತೆ 18 ಜನರು ಬಿಜೆಪಿಯ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದೇವೆ. ಹೀಗಾಗಿ ನಾನು ಸಹ ಅವರ‌ ಪರವಾಗಿ ಎಂಎಲ್​​ಸಿ ಸ್ಥಾನಕ್ಕೆ ಟಿಕೆಟ್​​ ನೀಡುವಂತೆ ಒತ್ತಾಯ ಮಾಡುತ್ತೇನೆ. ಬಿಜೆಪಿ ಸರ್ಕಾರ ರಚನೆಯಾಗಿ ಆಡಳಿತ ನಡೆಸಲು ಇವರೆಲ್ಲರೂ ಕಾರಣ ಎಂದು ಅಬಕಾರಿ ಸಚಿವರು​​ ಹೇಳಿದ್ದಾರೆ.

ಇನ್ನು ಯಡಿಯೂರಪ್ಪ ಅವರು ಮಾತು ಕೊಟ್ಟರೆ ಎಂದಿಗೂ ತಪ್ಪುವುದಿಲ್ಲ. ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುವಂತಹ ಗುಣ ಅವರಲ್ಲಿ ಇದೆ. ನನ್ನ ಎರಡು ವರ್ಷದ ಅನುಭವದಲ್ಲಿ ನುಡಿದಂತೆ ನಡೆದ ಧೀಮಂತ‌ ನಾಯಕ ಯಡಿಯೂರಪ್ಪ ಎಂದು ಸಚಿವ ನಾಗೇಶ್​​ ಬಿಎಸ್​​ವೈ ಅವರನ್ನು ಹೊಗಳಿದ್ದಾರೆ.

ಕೋಲಾರ: ಎಂಟಿಬಿ ನಾಗರಾಜ್ ಸೇರಿದಂತೆ ವಿಶ್ವನಾಥ್ ಹಾಗೂ ಶಂಕರ್ ಅವರಿಗೆ ನ್ಯಾಯಬದ್ಧವಾಗಿ ಎಂಎಲ್​ಸಿ ಸ್ಥಾನಕ್ಕೆ ಟಿಕೆಟ್​ ನೀಡುವುದು ಸಮಂಜಸವಾಗಿದೆ. ಇದು ನನ್ನ ಅಭಿಪ್ರಾಯವೂ ಹೌದು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮನ್ವಂತರ ಪ್ರಕಾಶನ ಹಾಗೂ ಜನ ಸೇವಾ ಟ್ರಸ್ಟ್​​​ನಿಂದ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಾಗಲು ಈ ಮೂವರು ಸಹ ಪ್ರಮುಖರಾಗಿದ್ದಾರೆ. ಇನ್ನು ಎಂಟಿಬಿ ನಾಗರಾಜ್ ಸೇರಿದಂತೆ ವಿಶ್ವನಾಥ್​ ಹಾಗೂ ಶಂಕರ್​​ಗೆ ಎಂಎಲ್​​ಸಿ ಸ್ಥಾನಕ್ಕೆ ಟಿಕೆಟ್​​ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ನಾಗೇಶ್​​ ಅಭಿಪ್ರಾಯಪಟ್ಟಿದ್ದಾರೆ.

ಅಬಕಾರಿ ಸಚಿವ ಹೆಚ್​.ನಾಗೇಶ್​

ನಾನು ಸೇರಿದಂತೆ 18 ಜನರು ಬಿಜೆಪಿಯ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದೇವೆ. ಹೀಗಾಗಿ ನಾನು ಸಹ ಅವರ‌ ಪರವಾಗಿ ಎಂಎಲ್​​ಸಿ ಸ್ಥಾನಕ್ಕೆ ಟಿಕೆಟ್​​ ನೀಡುವಂತೆ ಒತ್ತಾಯ ಮಾಡುತ್ತೇನೆ. ಬಿಜೆಪಿ ಸರ್ಕಾರ ರಚನೆಯಾಗಿ ಆಡಳಿತ ನಡೆಸಲು ಇವರೆಲ್ಲರೂ ಕಾರಣ ಎಂದು ಅಬಕಾರಿ ಸಚಿವರು​​ ಹೇಳಿದ್ದಾರೆ.

ಇನ್ನು ಯಡಿಯೂರಪ್ಪ ಅವರು ಮಾತು ಕೊಟ್ಟರೆ ಎಂದಿಗೂ ತಪ್ಪುವುದಿಲ್ಲ. ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುವಂತಹ ಗುಣ ಅವರಲ್ಲಿ ಇದೆ. ನನ್ನ ಎರಡು ವರ್ಷದ ಅನುಭವದಲ್ಲಿ ನುಡಿದಂತೆ ನಡೆದ ಧೀಮಂತ‌ ನಾಯಕ ಯಡಿಯೂರಪ್ಪ ಎಂದು ಸಚಿವ ನಾಗೇಶ್​​ ಬಿಎಸ್​​ವೈ ಅವರನ್ನು ಹೊಗಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.