ETV Bharat / state

ಕೋಲಾರ ಕಲ್ಲುಕ್ವಾರಿ ಸ್ಫೋಟ ಪ್ರಕರಣ: ಇನ್ಸ್​ಪೆಕ್ಟರ್ ಅಮಾನತು

author img

By

Published : Oct 15, 2022, 10:40 PM IST

ಕೋಲಾರದ ಕಲ್ಲುಕ್ವಾರಿಯಲ್ಲಿ ಸ್ಫೋಟ ಪ್ರಕರಣ ತಿರುವು ಕಂಡಿದ್ದು ಲಾರಿ ಹರಿದು ಸಾವು ಎಂಬುದು ಸುಳ್ಳು ಎಂದು ಸಾಕ್ಷ್ಯವಾಗಿದೆ. ಅಪಘಾತದ ಗಾಯಳು ಸತ್ಯ ಹೇಳಿದ್ದು ಪ್ರಕರಣದ ಸತ್ಯಾಂಶ ಹೊರಬಿದ್ದಿದೆ.

kolara-stone-mining-blast-issue-one-officer-suspension
ಕಲ್ಲುಕ್ವಾರಿಯಲ್ಲಿ ಸ್ಫೋಟ ಪ್ರಕರಣ

ಕೋಲಾರ : ಕಲ್ಲು ಕ್ವಾರಿಯಲ್ಲಿ ಸ್ಫೋಟದಿಂದ ಬಿಹಾರ ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿರುವು ಸಿಕ್ಕಿವೆ. ಪ್ರಕರಣ ತಿರುಚಲು ಪ್ರಯತ್ನಿಸಿದ ಆರೋಪದ ಮೇಲೆ ಇನ್ಸ್​ಪೆಕ್ಟರ್ ಅಮಾನತಾಗಿದ್ದು, ಘಟನೆ ಮರೆಮಾಚಲು ಯತ್ನಿಸಿ ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪ ಹೊತ್ತವರು ತಲೆಮರೆಸಿಕೊಂಡಿದ್ದಾರೆ.

ಗುರುವಾರ ರಾತ್ರಿ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೊಮ್ಮನಹಳ್ಳಿ ಬಳಿಯ ಸಂಜೀವಿನಿ ಸ್ಟೋನ್​ ಕ್ರಶರ್ಸ್​ನ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್​ ಸಂಭವಿಸಿದ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮತ್ತೊಬ್ಬ ಕಾರ್ಮಿಕನ ಎರಡೂ ಕೈಗಳು ಛಿದ್ರವಾಗಿವೆ. ಉಳಿದ ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯನ್ನು ಪ್ರಭಾವಿಗಳು ಲಾರಿ ಅಪಘಾತದಿಂದ ಮೃತಪಟ್ಟಿರುವುದಾಗಿ ತಿರುಚುವ ಪ್ರಯತ್ನ ಮಾಡಿದ್ದರು. ಅದಕ್ಕೆ ತಕ್ಕಂತೆ ರಾತ್ರೋರಾತ್ರಿ ಮರಣೋತ್ತರ ಪರೀಕ್ಷೆ ನಡದಿದ್ದು. ಶವ ಸಂಸ್ಕಾರಕ್ಕೂ ಸಿದ್ಧತೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ಘಟನೆಯಲ್ಲಿ ಬಿಹಾರ ಮೂಲದ ರಾಕೇಶ್​ ಸಾನಿ ಎಂಬಾತ ಮೃತಪಟ್ಟಿದ್ದರೆ, ಮೊಹಮದ್ ಆಜಾದ್​​ ಎಂಬಾತನಿಗೆ ಎರಡೂ ಕೈಗಳು ಛಿದ್ರವಾಗಿದೆ.

ಕಲ್ಲುಕ್ವಾರಿ ಸ್ಫೋಟ ಪ್ರಕರಣ ತಿರುವು ಕಂಡಿದ್ದು ಪ್ರಕರಣ ತಿರುಚಿದ ಅಧಿಕಾರಿ ಅಮಾನತು ಮಾಡಲಾಗಿದೆ.

ಘಟನೆ ಏನು : ಗುರುವಾರ ಸಂಜೆ ಮಂಜುನಾಥ್ ಎಂಬುವರ ಕಲ್ಲುಕ್ವಾರಿಯಲ್ಲಿ ಬ್ಲಾಸ್ಟ್ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಐದು ಜನ ಕಾರ್ಮಿಕರು ಸುಮಾರು ಒಂಬತ್ತು ಕಡೆಗಳಲ್ಲಿ ಬ್ಲಾಸ್ಟ್​ಗಾಗಿ ಅಮೋನಿಯಂ ತುಂಬಿಸಿ ಡಿಟರ್ನೆಟ್​ ಕನೆಕ್ಟ್​ ಮಾಡುತ್ತಿದ್ದರು ಈ ವೇಳೆ ಸಿಡಿಲು ಬಡಿದಿದೆ. ಈ ವೇಳೆ ಆಕಸ್ಮಿಕವಾಗಿ ಹುದುಗಿಸಿಟ್ಟಿದ್ದ ಅಮೋನಿಯಂ ಸ್ಫೋಟಗೊಂಡಿರುವ ಬಗ್ಗೆ ಎಸ್​ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.

ಈ ಪ್ರಕರಣವನ್ನು ತಿರುಚಲಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಬಂದು ಪರಿಶೀಲಿಸಿದ್ದಾರೆ. ಅಲ್ಲದೆ ಸ್ಥಳೀಯರ ಪ್ರಭಾವಕ್ಕೆ ಒಳಗಾಗಿ ಪ್ರಕರಣದ ದಿಕ್ಕು ತಪ್ಪಿಸಿದ್ದ ಆರೋಪದ ಮೇಲೆ ಮಾಸ್ತಿ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ವಸಂತ್​ ಕುಮಾರ್​ ಅವರನ್ನು ಅಮಾನತು ಮಾಡಲಾಗಿದೆ. ಅಪಘಾತ ಎಂದು ದಾಖಲಾಗಿದ್ದ ಎಫ್​ಐಆರ್​ನ್ನು ಬದಲಾಯಿಸಿ ಎಕ್ಸಪ್ಲೋಜಿವ್​ ಆಕ್ಟ್​ 201 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಡೀ ಪ್ರಕರಣದ ತನಿಖೆಯನ್ನು ಕೋಲಾರ ಡಿವೈಎಸ್ಪಿ ಮುರಳೀಧರ್ ಅವರಿಗೆ ವಹಿಸಲಾಗಿದೆ. ಸ್ಫೋಟಕ ಸರಬರಾಜು ಮಾಡಿದ ದೀಪೇನ್ ಎಂಬಾತನನ್ನು​ ಬಂಧಿಸಲಾಗಿದೆ. ಕ್ವಾರಿ ಮಾಲೀಕ ಮಂಜುನಾಥ್​, ಡ್ರೈವರ್ ಹಾಗೂ ಸುಳ್ಳುದೂರು ಕೊಟ್ಟಿದ್ದ ಮೃತ ರಾಕೇಶ್​ ಸಾನಿ ಅವರ ಸಹೋದರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಜೆಲ್ಲಿ ಕ್ರಷರ್​​ನಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವು!

ಕೋಲಾರ : ಕಲ್ಲು ಕ್ವಾರಿಯಲ್ಲಿ ಸ್ಫೋಟದಿಂದ ಬಿಹಾರ ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿರುವು ಸಿಕ್ಕಿವೆ. ಪ್ರಕರಣ ತಿರುಚಲು ಪ್ರಯತ್ನಿಸಿದ ಆರೋಪದ ಮೇಲೆ ಇನ್ಸ್​ಪೆಕ್ಟರ್ ಅಮಾನತಾಗಿದ್ದು, ಘಟನೆ ಮರೆಮಾಚಲು ಯತ್ನಿಸಿ ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪ ಹೊತ್ತವರು ತಲೆಮರೆಸಿಕೊಂಡಿದ್ದಾರೆ.

ಗುರುವಾರ ರಾತ್ರಿ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೊಮ್ಮನಹಳ್ಳಿ ಬಳಿಯ ಸಂಜೀವಿನಿ ಸ್ಟೋನ್​ ಕ್ರಶರ್ಸ್​ನ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್​ ಸಂಭವಿಸಿದ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮತ್ತೊಬ್ಬ ಕಾರ್ಮಿಕನ ಎರಡೂ ಕೈಗಳು ಛಿದ್ರವಾಗಿವೆ. ಉಳಿದ ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯನ್ನು ಪ್ರಭಾವಿಗಳು ಲಾರಿ ಅಪಘಾತದಿಂದ ಮೃತಪಟ್ಟಿರುವುದಾಗಿ ತಿರುಚುವ ಪ್ರಯತ್ನ ಮಾಡಿದ್ದರು. ಅದಕ್ಕೆ ತಕ್ಕಂತೆ ರಾತ್ರೋರಾತ್ರಿ ಮರಣೋತ್ತರ ಪರೀಕ್ಷೆ ನಡದಿದ್ದು. ಶವ ಸಂಸ್ಕಾರಕ್ಕೂ ಸಿದ್ಧತೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ಘಟನೆಯಲ್ಲಿ ಬಿಹಾರ ಮೂಲದ ರಾಕೇಶ್​ ಸಾನಿ ಎಂಬಾತ ಮೃತಪಟ್ಟಿದ್ದರೆ, ಮೊಹಮದ್ ಆಜಾದ್​​ ಎಂಬಾತನಿಗೆ ಎರಡೂ ಕೈಗಳು ಛಿದ್ರವಾಗಿದೆ.

ಕಲ್ಲುಕ್ವಾರಿ ಸ್ಫೋಟ ಪ್ರಕರಣ ತಿರುವು ಕಂಡಿದ್ದು ಪ್ರಕರಣ ತಿರುಚಿದ ಅಧಿಕಾರಿ ಅಮಾನತು ಮಾಡಲಾಗಿದೆ.

ಘಟನೆ ಏನು : ಗುರುವಾರ ಸಂಜೆ ಮಂಜುನಾಥ್ ಎಂಬುವರ ಕಲ್ಲುಕ್ವಾರಿಯಲ್ಲಿ ಬ್ಲಾಸ್ಟ್ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಐದು ಜನ ಕಾರ್ಮಿಕರು ಸುಮಾರು ಒಂಬತ್ತು ಕಡೆಗಳಲ್ಲಿ ಬ್ಲಾಸ್ಟ್​ಗಾಗಿ ಅಮೋನಿಯಂ ತುಂಬಿಸಿ ಡಿಟರ್ನೆಟ್​ ಕನೆಕ್ಟ್​ ಮಾಡುತ್ತಿದ್ದರು ಈ ವೇಳೆ ಸಿಡಿಲು ಬಡಿದಿದೆ. ಈ ವೇಳೆ ಆಕಸ್ಮಿಕವಾಗಿ ಹುದುಗಿಸಿಟ್ಟಿದ್ದ ಅಮೋನಿಯಂ ಸ್ಫೋಟಗೊಂಡಿರುವ ಬಗ್ಗೆ ಎಸ್​ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.

ಈ ಪ್ರಕರಣವನ್ನು ತಿರುಚಲಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಬಂದು ಪರಿಶೀಲಿಸಿದ್ದಾರೆ. ಅಲ್ಲದೆ ಸ್ಥಳೀಯರ ಪ್ರಭಾವಕ್ಕೆ ಒಳಗಾಗಿ ಪ್ರಕರಣದ ದಿಕ್ಕು ತಪ್ಪಿಸಿದ್ದ ಆರೋಪದ ಮೇಲೆ ಮಾಸ್ತಿ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ವಸಂತ್​ ಕುಮಾರ್​ ಅವರನ್ನು ಅಮಾನತು ಮಾಡಲಾಗಿದೆ. ಅಪಘಾತ ಎಂದು ದಾಖಲಾಗಿದ್ದ ಎಫ್​ಐಆರ್​ನ್ನು ಬದಲಾಯಿಸಿ ಎಕ್ಸಪ್ಲೋಜಿವ್​ ಆಕ್ಟ್​ 201 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಡೀ ಪ್ರಕರಣದ ತನಿಖೆಯನ್ನು ಕೋಲಾರ ಡಿವೈಎಸ್ಪಿ ಮುರಳೀಧರ್ ಅವರಿಗೆ ವಹಿಸಲಾಗಿದೆ. ಸ್ಫೋಟಕ ಸರಬರಾಜು ಮಾಡಿದ ದೀಪೇನ್ ಎಂಬಾತನನ್ನು​ ಬಂಧಿಸಲಾಗಿದೆ. ಕ್ವಾರಿ ಮಾಲೀಕ ಮಂಜುನಾಥ್​, ಡ್ರೈವರ್ ಹಾಗೂ ಸುಳ್ಳುದೂರು ಕೊಟ್ಟಿದ್ದ ಮೃತ ರಾಕೇಶ್​ ಸಾನಿ ಅವರ ಸಹೋದರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಜೆಲ್ಲಿ ಕ್ರಷರ್​​ನಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.