ETV Bharat / state

ಸಿದ್ದರಾಮಯ್ಯಗೆ ಸ್ಪರ್ಧಿಸಲು ಕೋಲಾರ ವಿಧಾನಸಭಾ ಕ್ಷೇತ್ರ ಸೇಫ್​: ಖಾಸಗಿ ಏಜೆನ್ಸಿಗಳ ಸಲಹೆ

ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಿದ್ದು, ಚುನಾವಣೆಗೆ ಸ್ಪರ್ಧೆ ಮಾಡಲು ಈ ವಿಧಾನಸಭಾ ಕ್ಷೇತ್ರ ತುಂಬಾ ಸೇಫ್​ ಎಂದು ಏಜೆನ್ಸಿಗಳು ವರದಿ ನೀಡಿವೆ ಎಂದು ಕೋಲಾರ್​ ಎಂ​ಎಲ್​ಸಿ ತಿಳಿಸಿದರು.

author img

By

Published : Nov 11, 2022, 8:10 PM IST

KN_KLR
ಸಿದ್ದರಾಮಯ್ಯ

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ, ಎರಡು ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಿರುವುದಾಗಿ ಎಂ.ಎಲ್.ಸಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿಸಿರುವಂತಹ ಎರಡು ಸರ್ವೆಯಲ್ಲಿ ಒಂದು ಶೇ 57ರಷ್ಟು ಫಲಿತಾಂಶ ಕೊಟ್ಟಿದೆ, ಇನ್ನೊಂದು ಶೇ 60ರಷ್ಟು ನೀಡಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತುಂಬಾ ಸೇಫ್ ಎಂದು ವರದಿ ಬಂದಿದೆ ಎಂದರು.

ಅಲ್ಲದೇ, ಅ.2 ರಿಂದ 12 ನೇ ತಾರೀಖಿನವರೆಗೆ, ಸುಮಾರು 40 ಜನರನ್ನೊಳಗೊಂಡ ತಂಡ ಕ್ಷೇತ್ರಕ್ಕೆ ಬಂದು ಒಬ್ಬರು ಒಂದು ದಿನಕ್ಕೆ 125 ಜನರಂತೆ ಸರ್ವೆ ನಡೆಸಿ, ಸುಮಾರು 50 ಸಾವಿರ ಸ್ಯಾಂಪಲ್ಸ್ ಶೇಖರಣೆ ಮಾಡಿದ್ದು, ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲು ಪೂರಕವಾಗಿದೆ ಎಂದು ಹೇಳಲಾಗಿದೆ ಎಂದರು.

ಸಿದ್ದರಾಮಯ್ಯಗೆ ಸ್ಪರ್ಧಿಸಲು ಕೋಲಾರ ವಿಧಾನಸಭಾ ಕ್ಷೇತ್ರ ಸೇಫ್

ಇನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದರೂ ಅವರು ಅವರದ್ದೇ ತಯಾರಿಯನ್ನ ಮಾಡಿಕೊಂಡಿದ್ದು ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುತ್ತಾರೆ ಎಂದರು.

ಇದನ್ನೂ ಓದಿ: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯಗೆ ಒತ್ತಾಯ

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ, ಎರಡು ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಿರುವುದಾಗಿ ಎಂ.ಎಲ್.ಸಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿಸಿರುವಂತಹ ಎರಡು ಸರ್ವೆಯಲ್ಲಿ ಒಂದು ಶೇ 57ರಷ್ಟು ಫಲಿತಾಂಶ ಕೊಟ್ಟಿದೆ, ಇನ್ನೊಂದು ಶೇ 60ರಷ್ಟು ನೀಡಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತುಂಬಾ ಸೇಫ್ ಎಂದು ವರದಿ ಬಂದಿದೆ ಎಂದರು.

ಅಲ್ಲದೇ, ಅ.2 ರಿಂದ 12 ನೇ ತಾರೀಖಿನವರೆಗೆ, ಸುಮಾರು 40 ಜನರನ್ನೊಳಗೊಂಡ ತಂಡ ಕ್ಷೇತ್ರಕ್ಕೆ ಬಂದು ಒಬ್ಬರು ಒಂದು ದಿನಕ್ಕೆ 125 ಜನರಂತೆ ಸರ್ವೆ ನಡೆಸಿ, ಸುಮಾರು 50 ಸಾವಿರ ಸ್ಯಾಂಪಲ್ಸ್ ಶೇಖರಣೆ ಮಾಡಿದ್ದು, ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲು ಪೂರಕವಾಗಿದೆ ಎಂದು ಹೇಳಲಾಗಿದೆ ಎಂದರು.

ಸಿದ್ದರಾಮಯ್ಯಗೆ ಸ್ಪರ್ಧಿಸಲು ಕೋಲಾರ ವಿಧಾನಸಭಾ ಕ್ಷೇತ್ರ ಸೇಫ್

ಇನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದರೂ ಅವರು ಅವರದ್ದೇ ತಯಾರಿಯನ್ನ ಮಾಡಿಕೊಂಡಿದ್ದು ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುತ್ತಾರೆ ಎಂದರು.

ಇದನ್ನೂ ಓದಿ: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯಗೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.