ETV Bharat / state

ಕೊರೊನಾ ತಡೆಗೆ ಟಾಸ್ಕ್​​ಫೋರ್ಸ್ :​​ ಕೋಲಾರಕ್ಕೆ ಬರುವವರ ಮೇಲೆ ಹದ್ದಿನ ಕಣ್ಣು

ಜಿಲ್ಲಾಧಿಕಾರಿ ಸತ್ಯಭಾಮ, ಆರೋಗ್ಯ ಅಧಿಕಾರಿಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರೆಯನ್ನೊಳಗೊಂಡಂತೆ ಬೂತ್ ಮಟ್ಟದಲ್ಲಿ ಟಾಸ್ಕ್​​​ಫೋರ್ಸ್ ತಂಡ ನೇಮಕ ಮಾಡಿದ್ದು, ಜಿಲ್ಲೆಗೆ ಯಾರೇ ಬಂದರೂ ತಕ್ಷಣದಲ್ಲಿ ಅವರ ಪೂರ್ತಿ ಮಾಹಿತಿ ಜಿಲ್ಲಾಧಿಕಾರಿಗಳ‌ ಕೈ ಸೇರುತ್ತಿದೆ.

author img

By

Published : Jul 16, 2020, 11:42 PM IST

Kolar dc started a task force for take on control for corona
ಕೊರೊನಾ ಕಡಿವಾಣಕ್ಕೆ ರೆಡಿಯಾಗಿದೆ ಟಾಸ್ಕ್​​ಫೋರ್ಸ್​​...ಜಿಲ್ಲೆಗೆ ಬರುವವರ ಮೇಲೆ ಹದ್ದಿನ ಕಣ್ಣು

ಕೋಲಾರ: ಕೊರೊನಾ ವಿರುದ್ಧ ಹೋರಾಡುವಲ್ಲಿ ಜಿಲ್ಲಾಧಿಕಾರಿ ಹಗಲು ರಾತ್ರಿ ಪರಿಶ್ರಮ ಪಡುತ್ತಿದ್ದಾರೆ. ಕೋಲಾರ ಜಿಲ್ಲೆಗೆ ಕೂಗಳತೆ ದೂರದಲ್ಲಿರುವ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಲಕ್ಷಾಂತರ ಜನ ಉದ್ಯೋಗ, ಶಿಕ್ಷಣ, ವ್ಯಾಪಾರ-ವಹಿವಾಟು, ಹೀಗೆ ಹಲವು ಕಾರಣಗಳಿಗೆ ರಾಜಧಾನಿಯನ್ನೆ ಅವಲಂಬಿಸಿದ್ದಾರೆ.

ಅದರಲ್ಲೂ ಕೋಲಾರ ಜಿಲ್ಲೆಯಿಂದ ಕೂಡ ನಿತ್ಯ ಸಾವಿರಾರು ಜನರು ಹೋಗಿ ಬರುತ್ತಾರೆ. ಸದ್ಯ ಕರ್ನಾಟಕದ ಕೊರೊನಾ ಹಾಟ್​​ಸ್ಪಾಟ್​ ಎನಿಸಿರುವ ಬೆಂಗಳೂರಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಸತ್ಯಭಾಮ‌ ಅವರು ತಮ್ಮದೇ ಆದ ಟಾಸ್ಕ್​​​ಫೋರ್ಸ್ ತಂಡ ರಚಿಸಿದ್ದಾರೆ.

ಕೊರೊನಾ ಕಡಿವಾಣಕ್ಕೆ ರೆಡಿಯಾಗಿದೆ ಟಾಸ್ಕ್​​ಫೋರ್ಸ್​​...ಜಿಲ್ಲೆಗೆ ಬರುವವರ ಮೇಲೆ ಹದ್ದಿನ ಕಣ್ಣು

ಜಿಲ್ಲಾಧಿಕಾರಿ ಸತ್ಯಭಾಮ, ಆರೋಗ್ಯ ಅಧಿಕಾರಿಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರೆಯರನ್ನು ಒಳಗೊಂಡಂತೆ ಬೂತ್ ಮಟ್ಟದಲ್ಲಿ ಟಾಸ್ಕ್​​ಫೋರ್ಸ್ ತಂಡ ಸಜ್ಜುಗೊಳಿಲಾಗಿದ್ದು, ಜಿಲ್ಲೆಗೆ ಯಾರೇ ಬಂದರೂ ತಕ್ಷಣದಲ್ಲಿ ಅವರ ಪೂರ್ಣ ಮಾಹಿತಿ ಜಿಲ್ಲಾಧಿಕಾರಿಗಳ‌ ಕೈ ಸೇರುತ್ತಿದೆ. ಬೆಂಗಳೂರು ಗಡಿಭಾಗಗಳಲ್ಲಿ 13 ಚೆಕ್​​ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿಂದ ಬರುವ ಜನರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಇಷ್ಟೇ ಅಲ್ಲದೆ ಸೇವಾ ಸಿಂಧು ಆ್ಯಪ್​​​​ನಲ್ಲಿ ನೊಂದಣಿಯಾದವರನ್ನು ಮಾತ್ರ, ಸಂಪೂರ್ಣ ಪರಿಶೀಲನೆಯೊಂದಿಗೆ ರಾಜ್ಯದ ಗಡಿಗಳ ಮೂಲಕ ಜಿಲ್ಲೆಗೆ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲದೆ ಇದೇ ತಂಡ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದೆ.

ಕೋಲಾರ: ಕೊರೊನಾ ವಿರುದ್ಧ ಹೋರಾಡುವಲ್ಲಿ ಜಿಲ್ಲಾಧಿಕಾರಿ ಹಗಲು ರಾತ್ರಿ ಪರಿಶ್ರಮ ಪಡುತ್ತಿದ್ದಾರೆ. ಕೋಲಾರ ಜಿಲ್ಲೆಗೆ ಕೂಗಳತೆ ದೂರದಲ್ಲಿರುವ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಲಕ್ಷಾಂತರ ಜನ ಉದ್ಯೋಗ, ಶಿಕ್ಷಣ, ವ್ಯಾಪಾರ-ವಹಿವಾಟು, ಹೀಗೆ ಹಲವು ಕಾರಣಗಳಿಗೆ ರಾಜಧಾನಿಯನ್ನೆ ಅವಲಂಬಿಸಿದ್ದಾರೆ.

ಅದರಲ್ಲೂ ಕೋಲಾರ ಜಿಲ್ಲೆಯಿಂದ ಕೂಡ ನಿತ್ಯ ಸಾವಿರಾರು ಜನರು ಹೋಗಿ ಬರುತ್ತಾರೆ. ಸದ್ಯ ಕರ್ನಾಟಕದ ಕೊರೊನಾ ಹಾಟ್​​ಸ್ಪಾಟ್​ ಎನಿಸಿರುವ ಬೆಂಗಳೂರಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಸತ್ಯಭಾಮ‌ ಅವರು ತಮ್ಮದೇ ಆದ ಟಾಸ್ಕ್​​​ಫೋರ್ಸ್ ತಂಡ ರಚಿಸಿದ್ದಾರೆ.

ಕೊರೊನಾ ಕಡಿವಾಣಕ್ಕೆ ರೆಡಿಯಾಗಿದೆ ಟಾಸ್ಕ್​​ಫೋರ್ಸ್​​...ಜಿಲ್ಲೆಗೆ ಬರುವವರ ಮೇಲೆ ಹದ್ದಿನ ಕಣ್ಣು

ಜಿಲ್ಲಾಧಿಕಾರಿ ಸತ್ಯಭಾಮ, ಆರೋಗ್ಯ ಅಧಿಕಾರಿಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರೆಯರನ್ನು ಒಳಗೊಂಡಂತೆ ಬೂತ್ ಮಟ್ಟದಲ್ಲಿ ಟಾಸ್ಕ್​​ಫೋರ್ಸ್ ತಂಡ ಸಜ್ಜುಗೊಳಿಲಾಗಿದ್ದು, ಜಿಲ್ಲೆಗೆ ಯಾರೇ ಬಂದರೂ ತಕ್ಷಣದಲ್ಲಿ ಅವರ ಪೂರ್ಣ ಮಾಹಿತಿ ಜಿಲ್ಲಾಧಿಕಾರಿಗಳ‌ ಕೈ ಸೇರುತ್ತಿದೆ. ಬೆಂಗಳೂರು ಗಡಿಭಾಗಗಳಲ್ಲಿ 13 ಚೆಕ್​​ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿಂದ ಬರುವ ಜನರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಇಷ್ಟೇ ಅಲ್ಲದೆ ಸೇವಾ ಸಿಂಧು ಆ್ಯಪ್​​​​ನಲ್ಲಿ ನೊಂದಣಿಯಾದವರನ್ನು ಮಾತ್ರ, ಸಂಪೂರ್ಣ ಪರಿಶೀಲನೆಯೊಂದಿಗೆ ರಾಜ್ಯದ ಗಡಿಗಳ ಮೂಲಕ ಜಿಲ್ಲೆಗೆ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲದೆ ಇದೇ ತಂಡ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.