ಕೋಲಾರ: ಇಲ್ಲಿನ ಅಂತರಗಂಗೆಯ ನಂದಿ ವಿಗ್ರಹದ ಬಾಯಲ್ಲಿ ಸುರಿಯುವ ಪವಿತ್ರ ತೀರ್ಥವನ್ನು ನಾಳೆ ನಡೆಯಲಿರುವ ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೊಂಡೊಯ್ಯಲಾಗಿದೆ.
ಒಂದು ಬೆಳ್ಳಿಯ ಕೊಡದಲ್ಲಿ ನೀರನ್ನು ಭಜರಂಗದಳ, ಶ್ರೀರಾಮಸೇನೆ, ಹಿಂದೂ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಅಯೋಧ್ಯೆಗೆ ಕೊಂಡೊಯ್ದಿದ್ದು, ನಾಳೆ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ದಕ್ಷಿಣ ಕಾಶಿ ಎಂದೆ ಹೆಸರಾಗಿರುವ ಅಂತರಗಂಗೆ ಪುರಾಣಗಳಲ್ಲಿ ಒಂದಾಗಿದ್ದು, ಇದಕ್ಕೆ ಅಂತರಗಂಗೆ ಎಂದು ಹೆಸರು ಬರಲು ಮುಚ್ಕುಂದ ಮಹರ್ಷಿಗಳೆ ಕಾರಣ. ಇವರು ಈ ಸ್ಥಳದಲ್ಲಿ ಪಂಚಲಿಂಗ ದರ್ಶನಕ್ಕೆಂದು ಐದು ಲಿಂಗಗಳ ಪ್ರತಿಷ್ಠಾಪನೆ ಮಾಡಿ, ಇದಕ್ಕೆ ಅಭೀಷೇಕ ಮಾಡುವುದಕ್ಕಾಗಿ ತಮ್ಮ ತಪೋ ಬಲದಿಂದ ಪ್ರತಿದಿನ ಕಾಶಿಯಿಂದ ಗಂಗಾ ನದಿ ನೀರನ್ನು ತರುತ್ತಿದ್ದರು ಎನ್ನುವ ನಂಬಿಕೆ ಇದೆ.