ETV Bharat / state

ಬಿಜೆಪಿ ಸರ್ಕಾರ ಇರುವ ಸತ್ಯವನ್ನ ಹೇಳುವುದಿಲ್ಲ, ಅವರು ಮಾನಗೆಟ್ಟ ಜನರು : ಸಿದ್ದರಾಮಯ್ಯ ವಾಗ್ದಾಳಿ

author img

By

Published : May 17, 2021, 5:01 PM IST

ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಅದೊಂದು ಅಸಮರ್ಥ ಸರ್ಕಾರ. ಯುಡಿಯೂರಪ್ಪ ಹಾಗೂ ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ವ್ಯಂಗ್ಯವಾಡಿದರು. ಅಲ್ಲದೆ ದಪ್ಪ ಚರ್ಮದ ಸರ್ಕಾರ ಬಿಜೆಪಿಯವರದ್ದು. ಹೀಗಾಗಿ, ಅವರಿಗೆ ಎಷ್ಟು ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ ಎಂದು ಕಾರ್ಯಕ್ರಮದುದ್ದಕ್ಕೂ ಬಿಜೆಪಿ ವಿರುದ್ದ ಹರಿಹಾಯ್ದರು‌..

bjp-government-is-not-telling-truth-about-corona-situation
ಸಿದ್ದರಾಮಯ್ಯ

ಕೋಲಾರ : ಬಿಜೆಪಿ ಸರ್ಕಾರ ಇರುವ ಸತ್ಯವನ್ನ ಹೇಳುವುದಿಲ್ಲ. ಅವರು ಮಾನಗೆಟ್ಟ ಜನರು ಎಂದು ನಗರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.

ಜಿಲ್ಲೆಯ ಕೆಜಿಎಫ್​ನಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯನ್ನ ತಡೆಯುವಲ್ಲಿ ಯಡಿಯೂರಪ್ಪ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತಜ್ಞರ ವರದಿಯನ್ನ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಮೊದಲೇ ಎಚ್ಚೆತ್ತುಕೊಂಡು ಆಕ್ಸಿಜನ್, ಬೆಡ್ ವ್ಯವಸ್ಥೆ ಸೇರಿದಂತೆ ಆ್ಯಂಬುಲೆನ್ಸ್ ಸಿದ್ದತೆಯನ್ನ ಮಾಡಿಕೊಳ್ಳಬೇಕಿತ್ತು. ಇದ್ದ ಸತ್ಯವನ್ನ ಹೇಳಲಿಲ್ಲ. ಇಷ್ಟೊಂದು ಸುಳ್ಳು ಹೇಳಿದ ಮಾನಗೆಟ್ಟವರನ್ನ ರಾಜ್ಯದ ಇತಿಹಾಸದಲ್ಲಿಯೇ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಡಾಕ್ಟರ್ ಎನಿಸಿಕೊಂಡ ಮಂತ್ರಿಯ ಸುಳ್ಳು ಮಾತುಗಳು

ಆರೋಗ್ಯ ಸಚಿವರ ವಿರುದ್ದ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ, ರಾಜ್ಯಕ್ಕೆ ಪ್ರತಿದಿನ 1700 ಟನ್ ಆಕ್ಸಿಜನ್ ಬೇಕಾಗಿದೆ. ಆದರೆ, ಕೇವಲ 800 ಟನ್ ಆಕ್ಸಿಜನ್ ಮಾತ್ರ ನೀಡುತ್ತಿದ್ದಾರೆಂದರು.

ಚಾಮರಾಜನಗರ ದುರಂತದಲ್ಲಿ ಮೂವರೆ ಸತ್ತಿರುವುದು ಎಂದು ಸುಳ್ಳು ಹೇಳುತ್ತಾರೆ. ಆದರೆ, ವೈದ್ಯರು 28 ಜನ ಸತ್ತಿರುವುದಾಗಿ ಹೇಳಿದ್ರು, ಇದು ಡಾಕ್ಟರ್ ಎನಿಸಿಕೊಂಡ ಮಂತ್ರಿಯ ಸುಳ್ಳು ಎಂದರು.

ಅಸಮರ್ಥ ಸರ್ಕಾರ

ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಅದೊಂದು ಅಸಮರ್ಥ ಸರ್ಕಾರ. ಯುಡಿಯೂರಪ್ಪ ಹಾಗೂ ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ವ್ಯಂಗ್ಯವಾಡಿದರು. ಅಲ್ಲದೆ ದಪ್ಪ ಚರ್ಮದ ಸರ್ಕಾರ ಬಿಜೆಪಿಯವರದ್ದು. ಹೀಗಾಗಿ, ಅವರಿಗೆ ಎಷ್ಟು ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ ಎಂದು ಕಾರ್ಯಕ್ರಮದುದ್ದಕ್ಕೂ ಬಿಜೆಪಿ ವಿರುದ್ದ ಹರಿಹಾಯ್ದರು‌.

ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿ

ಸರ್ಕಾರಕ್ಕೆ 10ಕ್ಕೂ ಹೆಚ್ಚು ಪತ್ರ ಬರೆದರೂ ಪ್ರಯೋಜನವಾಗಿಲ್ಲ, ವ್ಯಾಕ್ಸಿನೇಷನ್‌ ಸಕಾಲದಲ್ಲಿ ಕೊಡಲು ಸರ್ಕಾರ ವಿಫಲವಾಗಿದೆ. ಹೀಗಾಗಿ, ಈ ಕೂಡಲೇ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಸೂಚಿಸಿದರು.

ಕೋಲಾರ : ಬಿಜೆಪಿ ಸರ್ಕಾರ ಇರುವ ಸತ್ಯವನ್ನ ಹೇಳುವುದಿಲ್ಲ. ಅವರು ಮಾನಗೆಟ್ಟ ಜನರು ಎಂದು ನಗರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.

ಜಿಲ್ಲೆಯ ಕೆಜಿಎಫ್​ನಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯನ್ನ ತಡೆಯುವಲ್ಲಿ ಯಡಿಯೂರಪ್ಪ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತಜ್ಞರ ವರದಿಯನ್ನ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಮೊದಲೇ ಎಚ್ಚೆತ್ತುಕೊಂಡು ಆಕ್ಸಿಜನ್, ಬೆಡ್ ವ್ಯವಸ್ಥೆ ಸೇರಿದಂತೆ ಆ್ಯಂಬುಲೆನ್ಸ್ ಸಿದ್ದತೆಯನ್ನ ಮಾಡಿಕೊಳ್ಳಬೇಕಿತ್ತು. ಇದ್ದ ಸತ್ಯವನ್ನ ಹೇಳಲಿಲ್ಲ. ಇಷ್ಟೊಂದು ಸುಳ್ಳು ಹೇಳಿದ ಮಾನಗೆಟ್ಟವರನ್ನ ರಾಜ್ಯದ ಇತಿಹಾಸದಲ್ಲಿಯೇ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಡಾಕ್ಟರ್ ಎನಿಸಿಕೊಂಡ ಮಂತ್ರಿಯ ಸುಳ್ಳು ಮಾತುಗಳು

ಆರೋಗ್ಯ ಸಚಿವರ ವಿರುದ್ದ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ, ರಾಜ್ಯಕ್ಕೆ ಪ್ರತಿದಿನ 1700 ಟನ್ ಆಕ್ಸಿಜನ್ ಬೇಕಾಗಿದೆ. ಆದರೆ, ಕೇವಲ 800 ಟನ್ ಆಕ್ಸಿಜನ್ ಮಾತ್ರ ನೀಡುತ್ತಿದ್ದಾರೆಂದರು.

ಚಾಮರಾಜನಗರ ದುರಂತದಲ್ಲಿ ಮೂವರೆ ಸತ್ತಿರುವುದು ಎಂದು ಸುಳ್ಳು ಹೇಳುತ್ತಾರೆ. ಆದರೆ, ವೈದ್ಯರು 28 ಜನ ಸತ್ತಿರುವುದಾಗಿ ಹೇಳಿದ್ರು, ಇದು ಡಾಕ್ಟರ್ ಎನಿಸಿಕೊಂಡ ಮಂತ್ರಿಯ ಸುಳ್ಳು ಎಂದರು.

ಅಸಮರ್ಥ ಸರ್ಕಾರ

ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಅದೊಂದು ಅಸಮರ್ಥ ಸರ್ಕಾರ. ಯುಡಿಯೂರಪ್ಪ ಹಾಗೂ ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ವ್ಯಂಗ್ಯವಾಡಿದರು. ಅಲ್ಲದೆ ದಪ್ಪ ಚರ್ಮದ ಸರ್ಕಾರ ಬಿಜೆಪಿಯವರದ್ದು. ಹೀಗಾಗಿ, ಅವರಿಗೆ ಎಷ್ಟು ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ ಎಂದು ಕಾರ್ಯಕ್ರಮದುದ್ದಕ್ಕೂ ಬಿಜೆಪಿ ವಿರುದ್ದ ಹರಿಹಾಯ್ದರು‌.

ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿ

ಸರ್ಕಾರಕ್ಕೆ 10ಕ್ಕೂ ಹೆಚ್ಚು ಪತ್ರ ಬರೆದರೂ ಪ್ರಯೋಜನವಾಗಿಲ್ಲ, ವ್ಯಾಕ್ಸಿನೇಷನ್‌ ಸಕಾಲದಲ್ಲಿ ಕೊಡಲು ಸರ್ಕಾರ ವಿಫಲವಾಗಿದೆ. ಹೀಗಾಗಿ, ಈ ಕೂಡಲೇ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.