ETV Bharat / state

ಒಂದೇ ಕಡೆ 6 ಜಿಂಕೆಗಳು ಸಾವು... ವಿಷಾಹಾರ ಸೇವನೆ ಶಂಕೆ - undefined

ಕೋಲಾರದ ಆನೇಪುರ ಗ್ರಾಮದ ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಒಂದೇ ಕಡೆ 6 ಜಿಂಕೆಗಳು ಸಾವನ್ನಪ್ಪಿದ್ದು, ವಿಷಾಹಾರ ಸೇವಿಸಿ ಜಿಂಕೆಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಜಿಂಕೆಗಳು
author img

By

Published : Apr 1, 2019, 12:51 PM IST

ಕೋಲಾರ : ಅನುಮಾನಸ್ಪದವಾಗಿ 6 ಜಿಂಕೆಗಳು ಸಾವಿಗೀಡಾಗಿರುವ ಘಟ‌ನೆ ಜಿಲ್ಲೆಯ ಮಾಲೂರು ತಾಲೂಕಿನ ಆನೇಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಇನ್ನು ಆನೇಪುರ ಗ್ರಾಮದ ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಒಂದೇ ಕಡೆ 6 ಜಿಂಕೆಗಳು ಸಾವನ್ನಪ್ಪಿದ್ದು, ವಿಷಾಹಾರ ಸೇವಿಸಿ ಜಿಂಕೆಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ವಕ್ಕಲೇರಿ ಅರಣ್ಯ ಭಾಗದಲ್ಲಿ ಸಾಕಷ್ಟು ಕಾಡು ಪ್ರಾಣಿಗಳು ವಾಸವಿದ್ದು, ಬರಗಾಲ ಆವರಿಸಿರುವ ಹಿನ್ನಲೆ ಆಹಾರ ನೀರನ್ನ ಹುಡುಕಿಕೊಂಡು ಗ್ರಾಮಗಳತ್ತ ಮುಖಮಾಡುತ್ತಿರುವ ಪ್ರಾಣಿಗಳು ಅಪಘಾತಕ್ಕೀಡಾಗಿ, ಬೀದಿ ನಾಯಿಗಳ ದಾಳಿಗೊಳಗಾಗಿ ಸಾವನ್ನಪ್ಪುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

6 ಜಿಂಕೆಗಳು ಸಾವು

ಅಲ್ಲದೆ ಬಿಸಲಿನ ತಾಪ ಹೆಚ್ಚಾಗಿದ್ದು ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಿದ್ದು, ಅರಣ್ಯದಲ್ಲಿ ಕಾಡುಪ್ರಾಣಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರ : ಅನುಮಾನಸ್ಪದವಾಗಿ 6 ಜಿಂಕೆಗಳು ಸಾವಿಗೀಡಾಗಿರುವ ಘಟ‌ನೆ ಜಿಲ್ಲೆಯ ಮಾಲೂರು ತಾಲೂಕಿನ ಆನೇಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಇನ್ನು ಆನೇಪುರ ಗ್ರಾಮದ ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಒಂದೇ ಕಡೆ 6 ಜಿಂಕೆಗಳು ಸಾವನ್ನಪ್ಪಿದ್ದು, ವಿಷಾಹಾರ ಸೇವಿಸಿ ಜಿಂಕೆಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ವಕ್ಕಲೇರಿ ಅರಣ್ಯ ಭಾಗದಲ್ಲಿ ಸಾಕಷ್ಟು ಕಾಡು ಪ್ರಾಣಿಗಳು ವಾಸವಿದ್ದು, ಬರಗಾಲ ಆವರಿಸಿರುವ ಹಿನ್ನಲೆ ಆಹಾರ ನೀರನ್ನ ಹುಡುಕಿಕೊಂಡು ಗ್ರಾಮಗಳತ್ತ ಮುಖಮಾಡುತ್ತಿರುವ ಪ್ರಾಣಿಗಳು ಅಪಘಾತಕ್ಕೀಡಾಗಿ, ಬೀದಿ ನಾಯಿಗಳ ದಾಳಿಗೊಳಗಾಗಿ ಸಾವನ್ನಪ್ಪುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

6 ಜಿಂಕೆಗಳು ಸಾವು

ಅಲ್ಲದೆ ಬಿಸಲಿನ ತಾಪ ಹೆಚ್ಚಾಗಿದ್ದು ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಿದ್ದು, ಅರಣ್ಯದಲ್ಲಿ ಕಾಡುಪ್ರಾಣಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರ ದಿನಾಂಕ - 01-04-19 ಸ್ಲಗ್ - ಜಿಂಕೆಗಳ ಸಾವು ಫಾರ್ಮೆಟ್ - ಎವಿ ಆಂಕರ್: ಅನುಮಾನಸ್ಪದವಾಗಿ ಆರು ಜಿಂಕೆಗಳು ಸಾವನ್ನಪ್ಪಿರುವ ಘಟ‌ನೆ ಕೋಲಾರದಲ್ಲ ಜರುಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಆನೇಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಆರು ಜಿಂಕೆಗಳು ಸಾವನ್ನಪ್ಪಿವೆ. ಇನ್ನು ಆನೇಪುರ ಗ್ರಾಮದ ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಒಂದೇ ಕಡೆ ಆರು ಜಿಂಕೆಗಳು ಸಾವನ್ನಪ್ಪಿದ್ದು, ವಿಷ ಆಹಾರ ಸೇವಿಸಿ ಜಿಂಕೆಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ವಕ್ಕಲೇರಿ ಅರಣ್ಯ ಭಾಗದಲ್ಲಿ ಸಾಕಷ್ಟು ಕಾಡುಪ್ರಾಣಿಗಳು ವಾಸವಿದ್ದು, ಬರಗಾಲ ಆವರಿಸಿರುವ ಹಿನ್ನಲೆ ಆಹಾರ ನೀರನ್ನ ಹುಡುಕಿಕೊಂಡು ಗ್ರಾಮಗಳತ್ತ ಮುಖಮಾಡುತ್ತಿರುವ ಕಾಡುಪ್ರಾಣಿಗಳು ಅಪಘಾತಕ್ಕೀಡಾಗಿ ಬೀದಿ ನಾಯಿಗಳ ದಾಳಿಗೊಳಗಾಗಿ ಸಾವನ್ನಪ್ಪುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಬಿಸಲಿನ ತಾಪ ಹೆಚ್ಚಾಗಿದ್ದು ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೂ ಸಹ ಆಹಾಕಾರ ಉಂಟಾಗಿದ್ದು, ಅರಣ್ಯದಲ್ಲಿ ಕಾಡುಪ್ರಾಣಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.