ETV Bharat / state

ಸಿಗದ ಪಾಸ್​: 2,800 ಕಿ.ಮೀ ದೂರದ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರು

ಜಿಲ್ಲೆಯಿಂದ ಪಾಸ್ ಹಾಗೂ ಯಾವುದೇ ಸಾರಿಗೆ ವ್ಯವಸ್ಥೆ ಲಭ್ಯವಾಗದೇ ಇರುವುದರಿಂದ ಕೊಡಗಿನಿಂದ 2,800 ಕಿ.ಮೀ ದೂರ ಇರುವ ಉತ್ತರ‌ಪ್ರದೇಶಕ್ಕೆ ಹೋಗಲು ಈ ಕಾರ್ಮಿಕರು ಮುಂದಾಗಿದ್ದಾರೆ.

author img

By

Published : May 11, 2020, 11:59 AM IST

workers-who-set-out-on-foot-from-kodagu
2,800 ಕಿ.ಮೀ ದೂರದ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರು

ಕೊಡಗು: ಕೋವಿಡ್​ -19 ಪರಿಣಾಮ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರಿಂದ ಕೂಲಿ ಕೆಲಸಕ್ಕೆ ಕೊಡಗಿಗೆ ಬಂದಿದ್ದ ಉತ್ತರ ಪ್ರದೇಶದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹುಟ್ಟೂರಿನತ್ತ ಪ್ರಯಾಣ ಬೆಳೆಸಿದ್ದಾದ್ದಾರೆ‌.

ಸೋಮವಾರಪೇಟೆ ತಾಲೂಕಿನ ಮಾದಾಪುರದಿಂದ ಸುಮಾರು 50 ಹೆಚ್ಚು ಕೂಲಿ ಕಾರ್ಮಿಕರು ಗಂಟು, ಮೂಟೆ ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದಾರೆ.‌ ಜಿಲ್ಲೆಯಿಂದ ಪಾಸ್ ಹಾಗೂ ಯಾವುದೇ ಸಾರಿಗೆ ವ್ಯವಸ್ಥೆ ಲಭ್ಯವಾಗದೇ ಇರುವುದರಿಂದ ಕೊಡಗಿನಿಂದ 2,800 ಕಿ.ಮೀ ದೂರ ಇರುವ ಉತ್ತರ‌ಪ್ರದೇಶಕ್ಕೆ ಹೋಗಲು ಮುಂದಾಗಿದ್ದಾರೆ.

2,800 ಕಿ.ಮೀ ದೂರದ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರು

ಬೆಳಗ್ಗೆ 6 ಗಂಟೆಯಿಂದ ನಡೆಯುತ್ತಿರುವ ಕಾರ್ಮಿಕರು ಈಗಾಗಲೇ 18 ಕಿ.ಮೀ ನಡೆದಿದ್ದು, ಸುಂಟಿಕೊಪ್ಪದ ಹೊಸಕೋಟೆ ತಲುಪಿದ್ದಾರೆ. ನಾವೆಲ್ಲರೂ ಉತ್ತರ ಪ್ರದೇಶದಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದೆವು. ನಮ್ಮೂರಿಗೆ ಹೋಗಲು ನಮ್ಮ ಬಳಿ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ನಮ್ಮ ಕಂಪನಿ ವ್ಯವಸ್ಥಾಪಕರು ನಮ್ಮನ್ನು ನಮ್ಮೂರಿಗೆ ಹೋಗಲು ಬಿಡುತ್ತಿಲ್ಲ. ಹಲವು ದಿನಗಳಿಂದ ನಮಗೆ ಸರಿಯಾಗಿ ಊಟ, ತಿಂಡಿ ವ್ಯವಸ್ಥೆಯೂ ಇಲ್ಲದಂತೆ ಆಗಿದೆ ಈ ಹಿನ್ನೆಲೆ ನಾವು ನಮ್ಮ ಊರಿಗೆ ಮರಳುತ್ತಿದ್ದೇವೆ ಎಂದು ವಲಸೆ ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ.

ಕೊಡಗು: ಕೋವಿಡ್​ -19 ಪರಿಣಾಮ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರಿಂದ ಕೂಲಿ ಕೆಲಸಕ್ಕೆ ಕೊಡಗಿಗೆ ಬಂದಿದ್ದ ಉತ್ತರ ಪ್ರದೇಶದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹುಟ್ಟೂರಿನತ್ತ ಪ್ರಯಾಣ ಬೆಳೆಸಿದ್ದಾದ್ದಾರೆ‌.

ಸೋಮವಾರಪೇಟೆ ತಾಲೂಕಿನ ಮಾದಾಪುರದಿಂದ ಸುಮಾರು 50 ಹೆಚ್ಚು ಕೂಲಿ ಕಾರ್ಮಿಕರು ಗಂಟು, ಮೂಟೆ ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದಾರೆ.‌ ಜಿಲ್ಲೆಯಿಂದ ಪಾಸ್ ಹಾಗೂ ಯಾವುದೇ ಸಾರಿಗೆ ವ್ಯವಸ್ಥೆ ಲಭ್ಯವಾಗದೇ ಇರುವುದರಿಂದ ಕೊಡಗಿನಿಂದ 2,800 ಕಿ.ಮೀ ದೂರ ಇರುವ ಉತ್ತರ‌ಪ್ರದೇಶಕ್ಕೆ ಹೋಗಲು ಮುಂದಾಗಿದ್ದಾರೆ.

2,800 ಕಿ.ಮೀ ದೂರದ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರು

ಬೆಳಗ್ಗೆ 6 ಗಂಟೆಯಿಂದ ನಡೆಯುತ್ತಿರುವ ಕಾರ್ಮಿಕರು ಈಗಾಗಲೇ 18 ಕಿ.ಮೀ ನಡೆದಿದ್ದು, ಸುಂಟಿಕೊಪ್ಪದ ಹೊಸಕೋಟೆ ತಲುಪಿದ್ದಾರೆ. ನಾವೆಲ್ಲರೂ ಉತ್ತರ ಪ್ರದೇಶದಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದೆವು. ನಮ್ಮೂರಿಗೆ ಹೋಗಲು ನಮ್ಮ ಬಳಿ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ನಮ್ಮ ಕಂಪನಿ ವ್ಯವಸ್ಥಾಪಕರು ನಮ್ಮನ್ನು ನಮ್ಮೂರಿಗೆ ಹೋಗಲು ಬಿಡುತ್ತಿಲ್ಲ. ಹಲವು ದಿನಗಳಿಂದ ನಮಗೆ ಸರಿಯಾಗಿ ಊಟ, ತಿಂಡಿ ವ್ಯವಸ್ಥೆಯೂ ಇಲ್ಲದಂತೆ ಆಗಿದೆ ಈ ಹಿನ್ನೆಲೆ ನಾವು ನಮ್ಮ ಊರಿಗೆ ಮರಳುತ್ತಿದ್ದೇವೆ ಎಂದು ವಲಸೆ ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.