ETV Bharat / state

ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ.. 3 ಹಸುಗಳನ್ನ ಬಲಿ ಪಡೆದ ಹುಲಿರಾಯ

ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ತತ್ತರಿಸಿದೆ. ವ್ಯಾಘ್ರನ ಹಾವಳಿಯಿಂದ ದಕ್ಷಿಣ ಕೊಡಗಿನ ಜನ ಬೇಸತ್ತಿದ್ದಾರೆ. ನಿನ್ನೆ ಒಂದೇ ದಿನ ಎರಡು ಕಡೆ ವ್ಯಾಘ್ರ ದಾಳಿ ನಡೆಸಿದ್ದು, ಈವರೆಗೆ ಮೂರು ಹಸುಗಳು ಬಲಿಯಾಗಿವೆ.

author img

By

Published : May 1, 2020, 1:33 PM IST

Tiger attacks in Kodagu: 3 cow died
ಕೊಡಗಿನಲ್ಲಿ ವ್ಯಾಘ್ರನ ಹಾವಳಿ....ಬಲಿಯಾಯಿತು 3 ಹಸುಗಳು

ವಿರಾಜಪೇಟೆ : ಒಂದೆಡೆ ಕೊರೊನಾ ಆರ್ಭಟ, ಮತ್ತೊಂದೆಡೆ ವ್ಯಾಘ್ರನ ಹಾವಳಿಯಿಂದ ದಕ್ಷಿಣ ಕೊಡಗಿನ ಜನರು ಕಂಗೆಟ್ಟಿದ್ದಾರೆ.

ಕೊಡಗಿನಲ್ಲಿ ವ್ಯಾಘ್ರನ ಹಾವಳಿ.. 3 ಹಸುಗಳು ಬಲಿ

ನಿನ್ನೆ ರಾತ್ರಿ ಕುಮಟೂರು ಗ್ರಾಮದ ಮಾಚಿರ ಮುತ್ತಮ್ಮನವರ ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ. ಈ ಮೊದಲು ಇದೇ ಹಸುವಿನ ಕರುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಅದೇ ಊರಿನ ಕೊಟ್ರಂಗಡ ಎಂ ಸುಗುಣ ಚಿನ್ನಪ್ಪನವರ ಹಸುವನ್ನು ಕೂಡಾ ನಿನ್ನೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿರಾಜಪೇಟೆ : ಒಂದೆಡೆ ಕೊರೊನಾ ಆರ್ಭಟ, ಮತ್ತೊಂದೆಡೆ ವ್ಯಾಘ್ರನ ಹಾವಳಿಯಿಂದ ದಕ್ಷಿಣ ಕೊಡಗಿನ ಜನರು ಕಂಗೆಟ್ಟಿದ್ದಾರೆ.

ಕೊಡಗಿನಲ್ಲಿ ವ್ಯಾಘ್ರನ ಹಾವಳಿ.. 3 ಹಸುಗಳು ಬಲಿ

ನಿನ್ನೆ ರಾತ್ರಿ ಕುಮಟೂರು ಗ್ರಾಮದ ಮಾಚಿರ ಮುತ್ತಮ್ಮನವರ ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ. ಈ ಮೊದಲು ಇದೇ ಹಸುವಿನ ಕರುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಅದೇ ಊರಿನ ಕೊಟ್ರಂಗಡ ಎಂ ಸುಗುಣ ಚಿನ್ನಪ್ಪನವರ ಹಸುವನ್ನು ಕೂಡಾ ನಿನ್ನೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.