ETV Bharat / state

ಕೊಡಗಿನಲ್ಲಿ‌ ನವರಾತ್ರಿ ಸಂಭ್ರಮ.. ದೇವತೆಗಳ ಶೋಭಾ ಯಾತ್ರೆಗೆ ಕ್ಷಣಗಣನೆ! - Goddesses in navaratri

ನಾಡಹಬ್ಬ ದಸರಾವನ್ನು ಕೊಡಗಿನಲ್ಲಿಯೂ ಸಹ ಅದ್ಧೂರಿಯಾಗಿ ಆಚರಿಸಲಾಗಿದ್ದು, ವಿಜಯ ದಶಮಿಯಾದ ಇಂದು ಶಕ್ತಿದೇವತೆಗಳ ಶೋಭಾಯಾತ್ರೆ ನಡೆಸಿ ದಸರೆಗೆ ತೆರೆ ಎಳೆಯಲಾಗುವುದು. ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಶೋಭಾಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿದೆ.

ಕೊಡಗಿನಲ್ಲಿ‌ ನವರಾತ್ರಿ ಸಂಭ್ರಮ
author img

By

Published : Oct 8, 2019, 6:54 PM IST

ಕೊಡಗು: ಮಂಜಿನ‌ ನಗರಿ ಮಡಿಕೇರಿಯ ನವರಾತ್ರಿ ಕೊನೆಯ ‌ದಿನದ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಂಜಿನ ನಗರಿ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ. ನಗರದ 10 ಶಕ್ತಿದೇವತೆಗಳ ಶೋಭಾಯಾತ್ರೆಗೆ ಅಂತಿಮ‌ ಸ್ಪರ್ಶ ನೀಡಲಾಗುತ್ತಿದ್ದು, ಇದರ ನಡುವೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಮಂಜಿನ ನಗರಿಯತ್ತ ಮುಖಮಾಡಿದ್ದು, ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ದಸರಾ ಎಂದಾಕ್ಷಣ ಮೈಸೂರಿನ ಜೊತೆ ನೆನಪಾಗೋ ಮತ್ತೊಂದು ಹೆಸರು ಮಡಿಕೇರಿ. ಮೈಸೂರು ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದ್ರೆ ಮಡಿಕೇರಿ ದಸರಾದಲ್ಲಿ ಅಹೋರಾತ್ರಿ ನಡೆಯೋ ದಶ ಮಂಟಪಗಳ‌ ಶೋಭಾಯಾತ್ರೆ ಫೇಮಸ್ ಆಗಿದೆ. ಅಷ್ಟರಮಟ್ಟಿಗೆ ಮಡಿಕೇರಿ ದಸರಾ ಪ್ರಖ್ಯಾತಿ ಪಡೆದಿದೆ.‌ ಕರಗಗಳ ನಗರ ಪ್ರದಕ್ಷಿಣೆ ಬಳಿಕ‌ ಆರಂಭವಾಗುವ ಮಂಜಿನನಗರಿ ಮಡಿಕೇರಿ ದಸರಾದಲ್ಲಿ 9 ದಿನಗಳ ಕಾಲ‌ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯುತ್ತವೆ. 9ನೇ ದಿನವಾದ ಇಂದು ಅಹೋರಾತ್ರಿ ನಗರದ 10 ಶಕ್ತಿ ದೇವತೆಗಳ ಶೋಭಾಯಾತ್ರೆ ನಡೆಯುವ ಮೂಲಕ‌ ಮಡಿಕೇರಿ ದಸರೆಗೆ ತೆರೆ ಬೀಳುತ್ತದೆ. ಸದ್ಯ ದಶಮಂಟಪಗಳ‌ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಕಲಾಕೃತಿಗಳಿಗೆ ಫೈನಲ್‌ ಟಚ್ ಕೊಡೋ ಕಾರ್ಯ ನಡೀತಿದೆ.

ಕೊಡಗಿನಲ್ಲಿ‌ ನವರಾತ್ರಿ ಸಂಭ್ರಮ..

ಪ್ರತಿ ವರ್ಷದಂತೆ ಈ ವರ್ಷವೂ ಮಡಿಕೇರಿ ದಸರಾ ವೀಕ್ಷಣೆಗೆ ದೇಶ-ವಿದೇಶಗಳ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ‌. ಬಣ್ಣ ಬಣ್ಣದ ದೀಪಗಳಿಂದ ಸ್ವರ್ಗಲೋಕದಂತೆ ಮಡಿಕೇರಿ ಅಲಂಕೃತಗೊಂಡಿದೆ.ಶೋಭಾಯಾತ್ರೆಯಲ್ಲಿ ನಡೆಯೋ ದೇವತೆ ಮತ್ತು ಅಸುರರ ಕಾದಾಟ ಪ್ರವಾಸಿಗರ ಸ್ವರ್ಗ ಮಂಜಿನ‌ನಗರಿ ಮಡಿಕೇರಿಯನ್ನು ಅಕ್ಷರಶಃ ದೇವಲೋಕವನ್ನಾಗಿಸಲಿರೋದಂತೂ ಸತ್ಯ.

ಕೊಡಗು: ಮಂಜಿನ‌ ನಗರಿ ಮಡಿಕೇರಿಯ ನವರಾತ್ರಿ ಕೊನೆಯ ‌ದಿನದ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಂಜಿನ ನಗರಿ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ. ನಗರದ 10 ಶಕ್ತಿದೇವತೆಗಳ ಶೋಭಾಯಾತ್ರೆಗೆ ಅಂತಿಮ‌ ಸ್ಪರ್ಶ ನೀಡಲಾಗುತ್ತಿದ್ದು, ಇದರ ನಡುವೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಮಂಜಿನ ನಗರಿಯತ್ತ ಮುಖಮಾಡಿದ್ದು, ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ದಸರಾ ಎಂದಾಕ್ಷಣ ಮೈಸೂರಿನ ಜೊತೆ ನೆನಪಾಗೋ ಮತ್ತೊಂದು ಹೆಸರು ಮಡಿಕೇರಿ. ಮೈಸೂರು ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದ್ರೆ ಮಡಿಕೇರಿ ದಸರಾದಲ್ಲಿ ಅಹೋರಾತ್ರಿ ನಡೆಯೋ ದಶ ಮಂಟಪಗಳ‌ ಶೋಭಾಯಾತ್ರೆ ಫೇಮಸ್ ಆಗಿದೆ. ಅಷ್ಟರಮಟ್ಟಿಗೆ ಮಡಿಕೇರಿ ದಸರಾ ಪ್ರಖ್ಯಾತಿ ಪಡೆದಿದೆ.‌ ಕರಗಗಳ ನಗರ ಪ್ರದಕ್ಷಿಣೆ ಬಳಿಕ‌ ಆರಂಭವಾಗುವ ಮಂಜಿನನಗರಿ ಮಡಿಕೇರಿ ದಸರಾದಲ್ಲಿ 9 ದಿನಗಳ ಕಾಲ‌ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯುತ್ತವೆ. 9ನೇ ದಿನವಾದ ಇಂದು ಅಹೋರಾತ್ರಿ ನಗರದ 10 ಶಕ್ತಿ ದೇವತೆಗಳ ಶೋಭಾಯಾತ್ರೆ ನಡೆಯುವ ಮೂಲಕ‌ ಮಡಿಕೇರಿ ದಸರೆಗೆ ತೆರೆ ಬೀಳುತ್ತದೆ. ಸದ್ಯ ದಶಮಂಟಪಗಳ‌ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಕಲಾಕೃತಿಗಳಿಗೆ ಫೈನಲ್‌ ಟಚ್ ಕೊಡೋ ಕಾರ್ಯ ನಡೀತಿದೆ.

ಕೊಡಗಿನಲ್ಲಿ‌ ನವರಾತ್ರಿ ಸಂಭ್ರಮ..

ಪ್ರತಿ ವರ್ಷದಂತೆ ಈ ವರ್ಷವೂ ಮಡಿಕೇರಿ ದಸರಾ ವೀಕ್ಷಣೆಗೆ ದೇಶ-ವಿದೇಶಗಳ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ‌. ಬಣ್ಣ ಬಣ್ಣದ ದೀಪಗಳಿಂದ ಸ್ವರ್ಗಲೋಕದಂತೆ ಮಡಿಕೇರಿ ಅಲಂಕೃತಗೊಂಡಿದೆ.ಶೋಭಾಯಾತ್ರೆಯಲ್ಲಿ ನಡೆಯೋ ದೇವತೆ ಮತ್ತು ಅಸುರರ ಕಾದಾಟ ಪ್ರವಾಸಿಗರ ಸ್ವರ್ಗ ಮಂಜಿನ‌ನಗರಿ ಮಡಿಕೇರಿಯನ್ನು ಅಕ್ಷರಶಃ ದೇವಲೋಕವನ್ನಾಗಿಸಲಿರೋದಂತೂ ಸತ್ಯ.

Intro:ಕೊಡಗಿನಲ್ಲಿ‌ ನವರಾತ್ರಿ ಸಂಭ್ರಮ; ಅದಿ ದೇವತೆಗಳ ಶೋಭಾ ಯಾತ್ರೆಗೆ ಕ್ಷಣಗಣನೆ..!

ಕೊಡಗು: ಮಂಜಿನ‌ ನಗರಿ ಮಡಿಕೇರಿಯ ನವರಾತ್ರಿ ಕೊನೆಯ ‌ದಿನದ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಂಜಿನ ನಗರಿ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ.ನಗರದ 10 ಶಕ್ತಿದೇವತೆಗಳ ಶೋಭಾಯಾತ್ರೆಗೆ ಅಂತಿಮ‌ ಸ್ಪರ್ಶ ನೀಡಲಾಗುತ್ತಿದೆ. ಇದ್ರ ನಡುವೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಮಂಜಿನ ನಗರಿಯತ್ತ ಮುಖಮಾಡಿದ್ದು, ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ದಸರಾ ಎಂದಾಕ್ಷಣ ಮೈಸೂರಿನ ಜೊತೆ ನೆನಪಾಗೋ ಮತ್ತೊಂದು ಹೆಸರು ಮಡಿಕೇರಿ. ಮೈಸೂರು ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದ್ರೆ ಮಡಿಕೇರಿ ದಸರಾದಲ್ಲಿ ಆಹೋರಾತ್ರಿ ನಡೆಯೋ ದಶ ಮಂಟಪಗಳ‌ ಶೋಭಾಯಾತ್ರೆ ಫೇಮಸ್ ಆಗಿದೆ. ಅಷ್ಟರಮಟ್ಟಿಗೆ ಮಡಿಕೇರಿ ದಸರಾ ಪ್ರಖ್ಯಾತಿ ಪಡೆದಿದೆ.‌ ಕರಗಗಳ ನಗರ ಪ್ರದಕ್ಷಿಣೆ ಬಳಿಕ‌ ಆರಂಭವಾಗುವ ಮಂಜಿನ ನಗರಿ ಮಡಿಕೇರಿ ದಸರಾದಲ್ಲಿ 9 ದಿನಗಳ ಕಾಲ‌ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯುತ್ತವೆ. 9ನೇ ದಿನವಾದ ಇಂದು ಆಹೋರಾತ್ರಿ ನಗರದ 10 ಶಕ್ತಿ ದೇವತೆಗಳ ಶೋಭಾಯಾತ್ರೆ ನಗರದಲ್ಲಿ ನಡೆಯೋ ಮೂಲಕ‌ ಮಡಿಕೇರಿ ದಸರೆಗೆ ತೆರೆ ಬೀಳುತ್ತದೆ. ಸದ್ಯ ದಶಮಂಟಪಗಳ‌ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು ಕಲಾಕೃತಿಗಳಿಗೆ ಫೈನಲ್‌ ಟಚ್ ಕೊಡೋ ಕಾರ್ಯ ನಡೀತಿದೆ.

ಬೈಟ್-1ರವಿಕುಮಾರ್, ದಶಮಂಟಪದ ಪ್ರಮುಖರು

ಇನ್ನು ಮಡಿಕೇರಿ ಹೇಳಿ ಕೇಳಿ ಮಂಜಿನ‌ ನಗರಿ. ಪ್ರವಾಸಿಗರ ಹಾಟ್ ಸ್ಪಾಟ್, ವೀಕೆಂಡ್, ದಸರಾ ರಜೆ ಬೇರೆ ಇದೆ.. ಈ ಹಿನ್ನಲೆ ಮೈಸೂರು ದಸರಾ ಜಂಬೂ ಸವಾರಿ ಮುಗಿಸ್ಕೊಂಡು ಮಡಿಕೇರಿ ದಸರಾದ ಶೋಭಾಯಾತ್ರೆ ನೋಡೋಕೆ ಲಕ್ಷಾಂತರ ಮಂದಿ ಮಡಿಕೇರಿಯತ್ತ ಮುಖ ಮಾಡೋದು ವಾಡಿಕೆ. ಅದ್ರಂತೆ ಈಗಾಗ್ಲೆ ಮಡಿಕೇರಿ ನಗರಕ್ಕೆ ಪ್ರವಾಸಿಗರು ಆಗಮಿಸ್ತಿದ್ದಾರೆ.‌ ಇನ್ನು ದಸರೆಗೆ ಅಂತಾನೆ ಮಂಜಿನ‌ನಗರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಧುವಣಗಿತ್ತಿಯಂತೆ ಕಂಗೊಳಿಸ್ತಾ ಇದೆ. ನಗರದ ರಸ್ತೆಯ ಇಕ್ಕೆಲಗಳಲ್ಲಿರೋ ಕಟ್ಟಡಗಳು, ಮರಗಳು ವರ್ಣಮಯವಾಗಿವೆ.. ಸ್ವರ್ಗವೇ ಧರೆಗಿಳಿದಂತೆ ಭಾಸವಾಗ್ತಿದೆ ಮಡಿಕೇರಿ.

ಬೈಟ್-2 ವತ್ಸಲಾ, ಪ್ರವಾಸಿ

ಒಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಡಿಕೇರಿ ದಸರಾ ವೀಕ್ಷಣೆಗೆ ದೇಶ ವಿದೇಶಗಳ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ‌. ಬಣ್ಣ ಬಣ್ಣದ ದೀಪಗಳಿಂದ ಸ್ವರ್ಗಲೋಕದಂತೆ ಮಡಿಕೇರಿ ಅಲಂಕೃತಗೊಂಡಿದೆ. ಶೋಭಾಯಾತ್ರೆಯಲ್ಲಿ ನಡೆಯೋ ದೇವತೆ ಅಸುರರ ಕಾದಾಟ ಪ್ರವಾಸಿಗರ ಸ್ವರ್ಗ ಮಂಜಿನ‌ ನಗರಿ ಮಡಿಕೇರಿಯನ್ನು ಅಕ್ಷರಶಃ ದೇವಲೋಕವನ್ನಾಗಿಸಲಿರೋದಂತೂ ಸತ್ಯ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.


Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.