ETV Bharat / state

ಕೊಡಗು: ರಾಜ್ಯದಲ್ಲಿ ಎರಡನೇ ಗೋ ಶಾಲೆ ಉದ್ಘಾಟನೆ - ಈಟಿವಿ ಭಾರತ ಕನ್ನಡ

ಮಡಿಕೇರಿಯ ಕೆ.ನಿಡುಗಡೆಯಲ್ಲಿ ಸುಮಾರು 8 ಎಕರೆ ಜಾಗದಲ್ಲಿ ಗೋ ಶಾಲೆ ನಿರ್ಮಾಣವಾಗಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಉದ್ಘಾಟಿಸಿದರು.

inauguration-of-the-second-gou-shala-in-the-state
ರಾಜ್ಯದಲ್ಲಿ ಎರಡನೇ ಗೋ ಶಾಲೆ ಉದ್ಘಾಟನೆ
author img

By

Published : Oct 10, 2022, 10:53 PM IST

ಮಡಿಕೇರಿ : ಕೆ.ನಿಡುಗಡೆಯಲ್ಲಿ ನಿರ್ಮಾಣವಾಗಿರೋ ನೂತನ ಸರ್ಕಾರಿ ಜಿಲ್ಲಾ ಗೋ ಶಾಲೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಜಿಲ್ಲಾ ಪ್ರಾಣಿದಯಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣವಾಗಿರೋ ಸರ್ಕಾರಿ ಗೋಶಾಲೆಯನ್ನ ಸಚಿವ ಬಿ.ಸಿ ನಾಗೇಶ್ ಟೇಪ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಸುಮಾರು 8 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಾಣವಾಗಿದ್ದು, ಸುಮಾರು 53 ಲಕ್ಷ ವೆಚ್ಚದ ಗೋ ಶಾಲೆ ಇದಾಗಿದ್ದು ರಾಜ್ಯದ ಎರಡನೇ ಗೋ ಶಾಲೆ ಮಡಿಕೇರಿಯ ಕೆ.ನಿಡುಗಣೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ‌. ಈ ಗೋಶಾಲೆಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳನ್ನು ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗಿದೆ‌. ಕೊಡಗಿನ ಇಬ್ಬರು ಶಾಸಕರುಗಳ ಪ್ರಯತ್ನದ ಫಲವಾಗಿ ಇಂದು ಅದು ನೇರವೇರಿದೆ.

ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕಿನಲ್ಲೂ ಕೂಡ ಗೋ ಶಾಲೆ ತೆರೆಯುವ ಆಲೋಚನೆ ಇರುವುದಾಗಿ ತಿಳಿಸಿದರು. ಬ್ರಿಟಿಷರ ಕಾಲದಿಂದಲೇ ಕೊಡಗಿನಲ್ಲಿ‌ ಗೋ ಹತ್ಯೆ ನಿಷೇಧವಿದೆ.‌ ಹೀಗಾಗಿ ಗೋವುಗಳನ್ನು ರಕ್ಷಿಸುವ ಉದ್ದೇಶದಿಂದ ಇದೀಗ ಮಡಿಕೇರಿಯಲ್ಲಿ ಗೋ ಶಾಲೆಯನ್ನು ತೆರೆಯಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ‌ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದರು.

ಇನ್ನೂ ಸಚಿವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ಎಂ.ಎಲ್.ಸಿ ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ಸೇರಿದಂತೆ ಜಿಲ್ಲಾ‌ ಮಟ್ಟದ ಅಧಿಕಾರಿಗಳು ಸಾಥ್ ನೀಡಿದರು.

ಇದನ್ನೂ ಓದಿ : ಕೊಡಗಿನಲ್ಲಿ ಮೂರನೇ ಸಾಕಾನೆ ಶಿಬಿರ ಲೋಕಾರ್ಪಣೆ

ಮಡಿಕೇರಿ : ಕೆ.ನಿಡುಗಡೆಯಲ್ಲಿ ನಿರ್ಮಾಣವಾಗಿರೋ ನೂತನ ಸರ್ಕಾರಿ ಜಿಲ್ಲಾ ಗೋ ಶಾಲೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಜಿಲ್ಲಾ ಪ್ರಾಣಿದಯಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣವಾಗಿರೋ ಸರ್ಕಾರಿ ಗೋಶಾಲೆಯನ್ನ ಸಚಿವ ಬಿ.ಸಿ ನಾಗೇಶ್ ಟೇಪ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಸುಮಾರು 8 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಾಣವಾಗಿದ್ದು, ಸುಮಾರು 53 ಲಕ್ಷ ವೆಚ್ಚದ ಗೋ ಶಾಲೆ ಇದಾಗಿದ್ದು ರಾಜ್ಯದ ಎರಡನೇ ಗೋ ಶಾಲೆ ಮಡಿಕೇರಿಯ ಕೆ.ನಿಡುಗಣೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ‌. ಈ ಗೋಶಾಲೆಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳನ್ನು ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗಿದೆ‌. ಕೊಡಗಿನ ಇಬ್ಬರು ಶಾಸಕರುಗಳ ಪ್ರಯತ್ನದ ಫಲವಾಗಿ ಇಂದು ಅದು ನೇರವೇರಿದೆ.

ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕಿನಲ್ಲೂ ಕೂಡ ಗೋ ಶಾಲೆ ತೆರೆಯುವ ಆಲೋಚನೆ ಇರುವುದಾಗಿ ತಿಳಿಸಿದರು. ಬ್ರಿಟಿಷರ ಕಾಲದಿಂದಲೇ ಕೊಡಗಿನಲ್ಲಿ‌ ಗೋ ಹತ್ಯೆ ನಿಷೇಧವಿದೆ.‌ ಹೀಗಾಗಿ ಗೋವುಗಳನ್ನು ರಕ್ಷಿಸುವ ಉದ್ದೇಶದಿಂದ ಇದೀಗ ಮಡಿಕೇರಿಯಲ್ಲಿ ಗೋ ಶಾಲೆಯನ್ನು ತೆರೆಯಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ‌ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದರು.

ಇನ್ನೂ ಸಚಿವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ಎಂ.ಎಲ್.ಸಿ ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ಸೇರಿದಂತೆ ಜಿಲ್ಲಾ‌ ಮಟ್ಟದ ಅಧಿಕಾರಿಗಳು ಸಾಥ್ ನೀಡಿದರು.

ಇದನ್ನೂ ಓದಿ : ಕೊಡಗಿನಲ್ಲಿ ಮೂರನೇ ಸಾಕಾನೆ ಶಿಬಿರ ಲೋಕಾರ್ಪಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.