ETV Bharat / state

ಹಣಕ್ಕಾಗಿ ಪತಿ ಜೊತೆ ಸೇರಿ ಚಿಕ್ಕಮ್ಮನನ್ನೇ ಕೊಂದ ದಂಪತಿ ಅರೆಸ್ಟ್​​​! - undefined

ಹಣ ಕಂಡ್ರೆ ಹೆಣ ಕೂಡಾ ಬಾಯಿ ಬಿಡುತ್ತೆ ಅನ್ನೋದನ್ನ ಇಂತವರನ್ನು ನೋಡಿಯೇ ಹೇಳಿರ್ಬೇಕು. ಖತರ್ನಾಕ್​ ಮಹಿಳೆಯೊಬ್ಬಳು ಹಣಕ್ಕಾಗಿ ತನ್ನ ಪತಿ ಜೊತೆ ಸೇರಿ ಚಿಕ್ಕಮ್ಮನನ್ನೇ ಕೊಂದು ಮಾನವೀಯತೆ ಮರೆತಿದ್ದಾಳೆ. ಸದ್ಯ ಈ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.

ಚಿಕ್ಕಮ್ಮನನ್ನೇ ಕೊಂದ ದಂಪತಿ ಅರೆಸ್ಟ್
author img

By

Published : Apr 2, 2019, 10:40 AM IST

ಕೊಡಗು: ಹಣಕಾಗಿ ತನ್ನ ಗಂಡನ ಜೊತೆ ಸೇರಿ ಸ್ವಂತ ಚಿಕ್ಕಮ್ಮನನ್ನೇ ಹತ್ಯೆ ಮಾಡಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೋಲಿಸರು ಯಶಸ್ವಿಯಾಗಿದ್ದಾರೆ.

ರವಿ ಹಾಗೂ ಲಿಖಿತಾ ಬಂಧಿತರು. ಕಳೆದ ಮಾರ್ಚ್ 30ರಂದು ಒಂಟಿಯಾಗಿ ಜೀವನ ನಡೆಸುತ್ತಿದ್ದ ಉಷಾ ಅವರ ಮೇಕೇರಿಯಲ್ಲಿ ಇರುವ ಮನೆಗೆ ಲಿಖಿತಾ ಹಾಗೂ ರವಿ ಆಗಮಿಸಿದ್ದಾರೆ. ಚಿಕ್ಕಮ್ಮನ ಬಳಿ ಚಿನ್ನಾಭರಣ ಮತ್ತು ಸಾಕಷ್ಟು ಹಣ ಇರುವುದನ್ನು ಅರಿತ ಲಿಖಿತಾ ಆಗಿಂದಾಗ್ಗೆ ಅವರ ಮನೆಗೆ ಬಂದು ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ.

ಕೆಸುವಿನ ಗೆಡ್ಡೆ ಕೃಷಿಯಿಂದ ನಷ್ಟವಾಗಿ ಇರುವ ಎರಡು ವಾಹನ ಮಾರಾಟ ಮಾಡಿದ್ದರೂ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ 18 ತಿಂಗಳು ಮನೆ ಬಾಡಿಗೆಯನ್ನೂ ಕಟ್ಟಿರಲಿಲ್ಲ. ಇದೇ ಕಾರಣಕ್ಕೆ ಚಿಕ್ಕಮ್ಮನ ಮನೆಗೆ ಆಗಮಿಸಿ ಅವರನ್ನು ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ಕೊಲೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್, ಚಿನ್ನದ ಓಲೆ, ಒಂದು ಸರ ಮತ್ತು 50 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.

ಕೊಡಗು: ಹಣಕಾಗಿ ತನ್ನ ಗಂಡನ ಜೊತೆ ಸೇರಿ ಸ್ವಂತ ಚಿಕ್ಕಮ್ಮನನ್ನೇ ಹತ್ಯೆ ಮಾಡಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೋಲಿಸರು ಯಶಸ್ವಿಯಾಗಿದ್ದಾರೆ.

ರವಿ ಹಾಗೂ ಲಿಖಿತಾ ಬಂಧಿತರು. ಕಳೆದ ಮಾರ್ಚ್ 30ರಂದು ಒಂಟಿಯಾಗಿ ಜೀವನ ನಡೆಸುತ್ತಿದ್ದ ಉಷಾ ಅವರ ಮೇಕೇರಿಯಲ್ಲಿ ಇರುವ ಮನೆಗೆ ಲಿಖಿತಾ ಹಾಗೂ ರವಿ ಆಗಮಿಸಿದ್ದಾರೆ. ಚಿಕ್ಕಮ್ಮನ ಬಳಿ ಚಿನ್ನಾಭರಣ ಮತ್ತು ಸಾಕಷ್ಟು ಹಣ ಇರುವುದನ್ನು ಅರಿತ ಲಿಖಿತಾ ಆಗಿಂದಾಗ್ಗೆ ಅವರ ಮನೆಗೆ ಬಂದು ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ.

ಕೆಸುವಿನ ಗೆಡ್ಡೆ ಕೃಷಿಯಿಂದ ನಷ್ಟವಾಗಿ ಇರುವ ಎರಡು ವಾಹನ ಮಾರಾಟ ಮಾಡಿದ್ದರೂ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ 18 ತಿಂಗಳು ಮನೆ ಬಾಡಿಗೆಯನ್ನೂ ಕಟ್ಟಿರಲಿಲ್ಲ. ಇದೇ ಕಾರಣಕ್ಕೆ ಚಿಕ್ಕಮ್ಮನ ಮನೆಗೆ ಆಗಮಿಸಿ ಅವರನ್ನು ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ಕೊಲೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್, ಚಿನ್ನದ ಓಲೆ, ಒಂದು ಸರ ಮತ್ತು 50 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.

Intro:ಜಿಲ್ಲೆ :ಕೊಡಗು-ವರದಿ:ಗಿರಿಧರ್ ಕೆ. ಕೆ
ಕೊಡಗು:ಹಣಕಾಗಿ ಸ್ವಂತ ಚಿಕ್ಕಮ್ಮ ನ್ನು ಹತ್ಯೆ ಮಾಡಿ ನಾಪತ್ತೆಯಾದ ಪ್ರಕರಣಕ್ಕೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೊಡಗು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದಾರೆ.ಸಾಲ ತೀರಿಸಲು ಹಣವಿಲ್ಲದ ಕಾರಣ ಚಿಕ್ಕಮನ ಮನೆಗೆ ನೆಂಟರಂತೆ ಬಂದು, ಕೊಲೆ ಮಾಡಿ ಹಣವನ್ನು ದೋಚಿದ್ದರು. Body:ಮಾರ್ಚ್ 30ರಂದು ಒಂಟಿಯಾಗಿ ಜೀವನ ನಡೆಸುತ್ತಿದ್ದ ಉಷಾ ರವರ ಮೇಕೇರಿಯಲ್ಲಿ ಇರುವ ಮನೆಗೆ ಆಗಮಿಸಿದ ಸೋಮವಾರಪೇಟೆ ತಾಲೂಕಿನ ಅಬ್ಬೂರು ಕಟ್ಟೆ ನಿವಾಸಿ ರವಿ ಹಾಗು ಲಿಖಿತಾ ದಂಪತಿಗಳು ಆಗಮಿಸಿದ್ದಾರೆ. ಚಿಕ್ಕಮ್ಮನ ಬಳಿ ಚಿನ್ನಾಭರಣ ಮತ್ತು ಸಾಕಷ್ಟು ಹಣ ಇರುವುದನ್ನು ಅರಿತು ಆಗಿಂದಾಗ್ಗೆ ಉಷಾರವರ ಮನೆಗೆ ಬಂದು ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ.
ಕೆಸುವಿನ ಗೆಡ್ಡೆ ಕೃಷಿ ಮಾಡಿ ನಷ್ಟ, ಇರುವ ಎರಡು ವಾಹನ ಮಾರಾಟ ಮಾಡಿದ್ದರೂ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ ಈ ನಡುವೆ 18 ತಿಂಗಳು ಮನೆ ಬಾಡಿಗೆ ಕಟ್ಟಿರಲಿಲ್ಲ, ಇದೇ ಕಾರಣಕ್ಕೆ ಚಿಕ್ಕಮ್ಮನ ಮನೆಗೆ ಆಗಮಿಸಿ ಅವರನ್ನು ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. Conclusion:ಕೃತ್ಯಕ್ಕೆ ಬಳಸಿದ ಒಂದು ಬೈಕ್, ಚಿನ್ನದ ಓಲೆ, ಒಂದು ಸರ ಮತ್ತು 50 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.