ETV Bharat / state

ಕೊಡಗಿನಲ್ಲಿ ಹೆಚ್ಚಾದ ಕೊರೊನಾ : ಒಂದೇ ಗ್ರಾಮದ 50ಕ್ಕೂ ಅಧಿಕ ಜನರಿಗೆ ಸೋಂಕು - ಒಂದೇ ಗ್ರಾಮದ 50ಕ್ಕೂ ಅಧಿಕ ಜನರಿಗೆ ಕೊರೊನಾ

ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಗ್ರಾಪಂ ವತಿಯಿಂದ ಈ ಸ್ಥಳಗಳಿಗೆ ಸ್ಯಾನಿಟೈಸರ್ ಸಿಂಪಡಿಸಬೇಕು. ವೈದ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು..

Corona increasing in kodagu
ಕೊಡಗಿನಲ್ಲಿ ಹೆಚ್ಚಾದ ಕೊರೊನಾ
author img

By

Published : Sep 8, 2021, 9:09 PM IST

ಕೊಡಗು : ಜಿಲ್ಲೆಯ ಸುಂಟಿಕೊಪ್ಪದ ಗ್ರಾಮವೊಂದರಲ್ಲಿ ಸುಮಾರು 50ಕ್ಕೂ ಅಧಿಕ ಜನರಿಗೆ ಕೋವಿಡ್​​ ದೃಢಪಟ್ಟಿದೆ. ಸುಂಟಿಕೊಪ್ಪ ಸಮೀಪದ ಬೆಟ್ಟಗೇರಿ ಸಮೀಪದ ತೋಟದ ಮನೆಗಳಲ್ಲಿ ವಾಸವಿರುವ 50ಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದೆ.

ಇದರಿಂದ ಉಲುಗುಲಿ, ಅಂಜನಗೇರಿ, ಬೆಟ್ಟಗೇರಿ ಗ್ರಾಮಗಳಲ್ಲಿ ಸೀಲ್​​​ಡೌನ್ ಮಾಡಲಾಗಿದೆ. ಸೋಂಕಿತರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್​ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

DC Visited place
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಂಕಿತರು ಮನೆಯಿಂದ ಹೊರ ಬರಬಾರದು.‌ ಮನೆಯಿಂದ ಹೊರ ಬಂದು ಓಡಾಟ ನಡೆಸದಂತೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಬೇಕು.

ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಗ್ರಾಪಂ ವತಿಯಿಂದ ಈ ಸ್ಥಳಗಳಿಗೆ ಸ್ಯಾನಿಟೈಸರ್ ಸಿಂಪಡಿಸಬೇಕು. ವೈದ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.

ಜನರಲ್ಲಿ ಹೆಚ್ಚಿದ ಭಯ : ಗಡಿ ಭಾಗ ಕೇಳರದಲ್ಲಿ ನಿಫಾ ವೈರಸ್​​​​ ಕೇಸ್​ ಕಂಡು ಬಂದಿರುವ ಹಿನ್ನೆಲೆ ಕೊಡಗಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸುತ್ತಮುತ್ತಲು ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಸುತ್ತಮುತ್ತಲಿನ ಜನರು ಓಡಾಡಲು ಭಯಪಡುತ್ತಿದ್ದಾರೆ.

ಓದಿ: ಹಬ್ಬಕ್ಕೆ ತವರೂರುಗಳಿಗೆ ಹೋಗುವ ಆತುರ.. ಸಿಕ್ಕಂಗೆ ಸುಲಿಯುತ್ತಿರುವ ಖಾಸಗಿ ಬಸ್​ಗಳು..

ಕೊಡಗು : ಜಿಲ್ಲೆಯ ಸುಂಟಿಕೊಪ್ಪದ ಗ್ರಾಮವೊಂದರಲ್ಲಿ ಸುಮಾರು 50ಕ್ಕೂ ಅಧಿಕ ಜನರಿಗೆ ಕೋವಿಡ್​​ ದೃಢಪಟ್ಟಿದೆ. ಸುಂಟಿಕೊಪ್ಪ ಸಮೀಪದ ಬೆಟ್ಟಗೇರಿ ಸಮೀಪದ ತೋಟದ ಮನೆಗಳಲ್ಲಿ ವಾಸವಿರುವ 50ಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದೆ.

ಇದರಿಂದ ಉಲುಗುಲಿ, ಅಂಜನಗೇರಿ, ಬೆಟ್ಟಗೇರಿ ಗ್ರಾಮಗಳಲ್ಲಿ ಸೀಲ್​​​ಡೌನ್ ಮಾಡಲಾಗಿದೆ. ಸೋಂಕಿತರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್​ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

DC Visited place
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಂಕಿತರು ಮನೆಯಿಂದ ಹೊರ ಬರಬಾರದು.‌ ಮನೆಯಿಂದ ಹೊರ ಬಂದು ಓಡಾಟ ನಡೆಸದಂತೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಬೇಕು.

ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಗ್ರಾಪಂ ವತಿಯಿಂದ ಈ ಸ್ಥಳಗಳಿಗೆ ಸ್ಯಾನಿಟೈಸರ್ ಸಿಂಪಡಿಸಬೇಕು. ವೈದ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.

ಜನರಲ್ಲಿ ಹೆಚ್ಚಿದ ಭಯ : ಗಡಿ ಭಾಗ ಕೇಳರದಲ್ಲಿ ನಿಫಾ ವೈರಸ್​​​​ ಕೇಸ್​ ಕಂಡು ಬಂದಿರುವ ಹಿನ್ನೆಲೆ ಕೊಡಗಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸುತ್ತಮುತ್ತಲು ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಸುತ್ತಮುತ್ತಲಿನ ಜನರು ಓಡಾಡಲು ಭಯಪಡುತ್ತಿದ್ದಾರೆ.

ಓದಿ: ಹಬ್ಬಕ್ಕೆ ತವರೂರುಗಳಿಗೆ ಹೋಗುವ ಆತುರ.. ಸಿಕ್ಕಂಗೆ ಸುಲಿಯುತ್ತಿರುವ ಖಾಸಗಿ ಬಸ್​ಗಳು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.