ETV Bharat / state

ದಿನಕ್ಕೊಂದು ತಾರೀಖು ಹೇಳುತ್ತಿರುವ ಕೊರೊನಾ ಸೋಂಕಿತ..!

author img

By

Published : Mar 20, 2020, 9:11 PM IST

ಕೊಡಗಿನ ಕೊರೊನಾ ಸೋಂಕಿತ ವ್ಯಕ್ತಿ ತಾನು ಪ್ರಯಾಣ ಬೆಳೆಸಿದ್ದ ದಿನಾಂಕ ಕುರಿತು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾನೆಂದು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ತಿಳಿದ್ದಾರೆ.

Corona infected person
ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್

ಕೊಡಗು: ಕೊರೊನಾ ಸೋಂಕಿತ ವ್ಯಕ್ತಿ ತಾನು ಪ್ರಯಾಣ ಬೆಳೆಸಿದ್ದ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಸೋಂಕಿತ ಸುತ್ತಾಡಿದ್ದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿರುವ ಜಿಲ್ಲಾಡಳಿತ ಆತ ಬೆಂಗಳೂರಿನ ವಿಮಾನ ನಿಲ್ದಾಣದಿಂದ, ಕೆ.ಎ 57 ಎಫ್ 0908 ಸಂಖ್ಯೆಯ ವಾಯು ವಜ್ರ ಬಸ್‌ನಲ್ಲಿ‌ ಮಾರ್ಚ್ 15 ರ‌ ಸಂಜೆ 5.30 ಕ್ಕೆ ಹೊರಟು 6.45 ಕ್ಕೆ ಸ್ಯಾಟ‌ಲೈಟ್ ಬಸ್ ನಿಲ್ದಾಣ ತಲುಪಿದ್ದ.

Corona infected person
ಜಿಲ್ಲಾಡಳಿತದಿಂದ ವ್ಯಕ್ತಿಯ ಪ್ರಯಾಣ ಕುರಿತು ಪ್ರಕರಟನೆ

ಸ್ಯಾಟ‌ಲೈಟ್ ಬಸ್ ನಿಲ್ದಾಣದಿಂದ KA57 F 0908 ಸಂಖ್ಯೆಯ ರಾಜಹಂಸ ಬಸ್ಸಿನಲ್ಲಿ ಮಾರ್ಚ್ 16ರ ಮುಂಜಾನೆ 12.05 ನಿಮಿಷಕ್ಕೆ ಹೊರಟು, ಮಂಡ್ಯ- ಮೈಸೂರು ವಿರಾಜಪೇಟೆ ಮಾರ್ಗವಾಗಿ ಮುಂಜಾನೆ ಮಡಿಕೇರಿಗೆ ಬಂದಿದ್ದ. ಸಹ ಪ್ರಯಾಣಿಕರು ಈ ಬಸ್‌ನಲ್ಲಿ ಸಂಚರಿಸಿದ್ದರೆ ಕೂಡಲೇ ಆರೋಗ್ಯ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಮನವಿ ಮಾಡಿದ್ದಾರೆ.‌

ಕೊಡಗು: ಕೊರೊನಾ ಸೋಂಕಿತ ವ್ಯಕ್ತಿ ತಾನು ಪ್ರಯಾಣ ಬೆಳೆಸಿದ್ದ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಸೋಂಕಿತ ಸುತ್ತಾಡಿದ್ದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿರುವ ಜಿಲ್ಲಾಡಳಿತ ಆತ ಬೆಂಗಳೂರಿನ ವಿಮಾನ ನಿಲ್ದಾಣದಿಂದ, ಕೆ.ಎ 57 ಎಫ್ 0908 ಸಂಖ್ಯೆಯ ವಾಯು ವಜ್ರ ಬಸ್‌ನಲ್ಲಿ‌ ಮಾರ್ಚ್ 15 ರ‌ ಸಂಜೆ 5.30 ಕ್ಕೆ ಹೊರಟು 6.45 ಕ್ಕೆ ಸ್ಯಾಟ‌ಲೈಟ್ ಬಸ್ ನಿಲ್ದಾಣ ತಲುಪಿದ್ದ.

Corona infected person
ಜಿಲ್ಲಾಡಳಿತದಿಂದ ವ್ಯಕ್ತಿಯ ಪ್ರಯಾಣ ಕುರಿತು ಪ್ರಕರಟನೆ

ಸ್ಯಾಟ‌ಲೈಟ್ ಬಸ್ ನಿಲ್ದಾಣದಿಂದ KA57 F 0908 ಸಂಖ್ಯೆಯ ರಾಜಹಂಸ ಬಸ್ಸಿನಲ್ಲಿ ಮಾರ್ಚ್ 16ರ ಮುಂಜಾನೆ 12.05 ನಿಮಿಷಕ್ಕೆ ಹೊರಟು, ಮಂಡ್ಯ- ಮೈಸೂರು ವಿರಾಜಪೇಟೆ ಮಾರ್ಗವಾಗಿ ಮುಂಜಾನೆ ಮಡಿಕೇರಿಗೆ ಬಂದಿದ್ದ. ಸಹ ಪ್ರಯಾಣಿಕರು ಈ ಬಸ್‌ನಲ್ಲಿ ಸಂಚರಿಸಿದ್ದರೆ ಕೂಡಲೇ ಆರೋಗ್ಯ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಮನವಿ ಮಾಡಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.