ಕಲಬುರಗಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಗೊಳಿಸಬೇಕೆಂಬ ಬೀದರ್ ಸಂಸದ ಭಗವಂತ ಖೂಬಾ ಅವರ ಹೇಳಿಕೆಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಕೆಲಸ ನೀಡದಿರುವಂತೆ ಭಗವಂತ ಖೂಬಾ ಹೇಳಿರೋದು ಖಂಡನಾರ್ಹ. ಗ್ರಾಮೀಣ ಜನ ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಅತ್ಯವಶ್ಯಕವಾಗಿದೆ. ಹೀಗಾಗಿ ಕೂಡಲೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಬೇಕು ಎಂದರು.
ಉದ್ಯೋಗ ಖಾತ್ರಿ ಕೆಲಸ ನಿಲ್ಲಿಸುವಂತೆ ಹೇಳಿದ ಸಂಸದ ಭಗವಂತ ಖೂಬಾ ಅವರ ಕಚೇರಿ ಹಾಗೂ ಎಲ್ಲಿಲ್ಲಿ ಖೂಬಾ ಬರುತ್ತಾರೋ ಅಲ್ಲೆಲ್ಲಾ ಪ್ರತಿಭಟನೆ ಮಾಡಿ, ಘೇರಾವ್ ಹಾಕೋದಾಗಿ ಕೆ.ನೀಲಾ ಎಚ್ಚರಿಸಿದ್ದಾರೆ.